ಮಂಗಳೂರು: ಕ್ರೆಡೈ ಮಂಗಳೂರು ವತಿಯಿಂದ 2024ರ ಮಾರ್ಚ್ 9 ಮತ್ತು 10ರಂದು ಎರಡು ದಿನಗಳ ಕಾಲ ಬೃಹತ್ ಮಟ್ಟದ ‘ರಿಯಾಲ್ಟಿ ಎಕ್ಸ್ಪೋ’ ಆಯೋಜಿಸಲಾಗಿದೆ ಎಂದು ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50ಕ್ಕೂ ಅಧಿಕ ಉದ್ಯಮಿಗಳು, ವಿವಿಧ ಉದ್ಯಮ ಸಂಸ್ಥೆಗಳು ಸೇರಿಕೊಂಡು ಈ ಎಕ್ಸ್ ಪೋ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳು ದೊರೆಯುವಂತೆ ಎಕ್ಸ್ಪೋದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಲಕ್ಸುರಿ ಅಪಾರ್ಟ್ಮೆಂಟ್ಗಳು, ಎಲೆಕ್ಟ್ಪಾನಿಕ್ಸ್ ಉತ್ಪನ್ನಗಳು, ವಸತಿ, ಬ್ಯಾಂಕ್, ಕಾರ್ ಡೀಲರ್ಸ್ ಸೇರಿದಂತೆ ವಿವಿಧ ಸಂಸ್ಥೆಗಳು ಎಕ್ಸ್ ಪೋದಲ್ಲಿ ಭಾಗವಹಿಸಲಿವೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ರೆಡೈ ಕಾರ್ಯದರ್ಶಿ ಗುರು ಎಂ ರಾವ್, ಉಪಾಧ್ಯಕ್ಷ ಪ್ರಶಾಂತ್ ಸನಿಲ್, ಜತೆ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಂಡಾರಿ, ಕೋಶಾಕಾರಿ ಕರುಣಾಕರಣ್, ಪ್ರಮುಖರಾದ ರೋಹನ್ ಮೊಂತೇರೊ, ನವೀನ್ ಕಾರ್ಡೋಜ, ಧೀರಜ್ ಅಮೀನ್, ಆವೊಲಾನ್ ಪತ್ರಾವೊ, ವಿಲಿಯಂ ಡಿಸೋಜ, ರವೀಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕ್ರೆಡೈ ಸಂಸ್ಥೆಯ ಅಧ್ಯಕ್ಷ ವಿನೋದ್ ಪಿಂಟೋರವರು ಮಾತನಾಡಿ, ಇತ್ತೀಚೆಗೆ ಬಿಲ್ಡರ್ ಸಂಸ್ಥೆಯೊಂದರ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಂಬಂಧಿಸಿದ ಪ್ರಕರಣದಲ್ಲಿ ಗ್ರಾಹಕರ ವೇದಿಕೆಯು ನೀಡಿದ ತೀರ್ಪಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದರು.
ಮಂಗಳೂರಿನ ಕಟ್ಟಡ ನಿಯಮಾವಳಿ ಪ್ರಕಾರ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದರೂ, ತನಗೆ ನಿಗದಿತ ಕಾರ್ ಪಾರ್ಕಿಂಗ್ ಸ್ಲಾಟ್ ನಿಗದಿಪಡಿಸಿಲ್ಲ ಎಂದು ದೂರುದಾರರು ಆರಂಭಿಕ ದೂರು ನೀಡಿ ಪ್ರಸಕ್ತ ನೀಡಿರುವ ಆವರಣದೊಳಗೆ ಮುಚ್ಚಿದ ಪಾರ್ಕಿಂಗ್ (ತಗಡು ಮಾಡು) ಮಾದರಿಯ ಪಾರ್ಕಿಂಗ್ ಬೇಡ, ತನಗೆ ಕಾಂಕ್ರೀಟ್ ಕಟ್ಟಡದ ಕೆಳಗೆಯೆ ಪಾರ್ಕಿಂಗ್ ಸ್ಲಾಟ್ ಬೇಕು ಎಂದು ಹೇಳಿದ್ದರು. ಆದರೆ ಸದ್ರಿ ಕಟ್ಟಡವು ಈಗಾಗಲೇ ಮಾರಾಟವಾಗಿದ್ದು, ಪ್ರಸಕ್ತ ಸನ್ನಿವೇಶದಲ್ಲಿ ಬದಲಾವಣೆ ಅಸಾಧ್ಯವಾಗಿತ್ತು. ಸದ್ರಿ ಸಮಸ್ಯೆಯ ಬಗ್ಗೆ ದೂರುದಾರ ವ್ಯಕ್ತಿಯ ಬಳಿ ಸಾಕಷ್ಟು ಬಾರಿ ಸಂಧಾನ ನಡೆಸಿದರೂ ಪರಿಹಾರ ಸಾಧ್ಯವಾಗಿರಲಿಲ್ಲ. ಈ ನಡುವೆ ಜಿಲ್ಲಾ ಗ್ರಾಹಕ ವೇದಿಕೆ ದೂರುದಾರರ ಪರವಾಗಿ ತೀರ್ಪು ನೀಡಿದೆ ಎಂದರು. ಮುಂದೆ ರಾಜ್ಯ ವೇದಿಕೆಯಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
CREDAI ಸದಸ್ಯ M/s ಮರಿಯನ್ ಪ್ರಾಜೆಕ್ಟ್ಗಳಿಗೆ ಸಂಬಂಧಿಸಿದ ಪ್ರಕರಣದ ಇತ್ತೀಚಿನ ಗ್ರಾಹಕರ ವೇದಿಕೆಯ ತೀರ್ಪಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ:-
ಮಂಗಳೂರಿನ ಝೋನಿಂಗ್ ನಿಯಮಾವಳಿ ಪ್ರಕಾರ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದರೂ, ತನಗೆ ಗೊತ್ತುಪಡಿಸಿದ ಕಾರ್ ಪಾರ್ಕಿಂಗ್ ಸ್ಲಾಟ್ ಅನ್ನು ನಿಗದಿಪಡಿಸಲಾಗಿಲ್ಲ ಎಂಬುದು ದೂರುದಾರರಾದ ಡಾ ಲವೀನಾ ನೊರೊನ್ಹಾ ಅವರ ಆರಂಭಿಕ ದೂರು. ಕಟ್ಟಡದ ಕೆಳಗೆ ತನಗೆ ಸ್ಲಾಟ್ ಬೇಕು ಮತ್ತು ಆವರಣದೊಳಗೆ ಛಾವಣಿಯಿರುವ ಪಾರ್ಕಿಂಗ್ ಅಲ್ಲ ಎಂದು ತನ್ನ ನಿಲುವನ್ನು ಬದಲಾಯಿಸಿದರು. ಈ ಬದಲಾದ ನಿಲುವನ್ನು ಜಿಲ್ಲಾ ವೇದಿಕೆ ಮಂಜೂರು ಮಾಡಿದ್ದರೆ, ರಾಜ್ಯ ಆಯೋಗ ಈಗ ಅಂತಹ ಆದೇಶಕ್ಕೆ ತಡೆ ನೀಡಿದೆ.
ಇನ್ನೊಬ್ಬ ಗ್ರಾಹಕರ ಹಕ್ಕುಗಳನ್ನು ಕಸಿದು ಅವರಿಗೆ ನಿಗದಿಯಾದ ಪಾರ್ಕಿಂಗ್ ಸ್ಥಳವನ್ನು ತನಗೆ ನೀಡಬೇಕೆಂದು ದೂರುದಾರ ಮಹಿಳೆ ಈಗ ಆಗ್ರಹಿಸುತ್ತಿದ್ದಾರೆ. ಸದರಿ ಕಟ್ಟಡವನ್ನು ಈಗ ನಿವಾಸಿಗಳ ಸಂಘವು ನಿರ್ವಹಿಸುತ್ತಿದೆ ಮತ್ತು 10 ವರ್ಷಗಳ ಹಿಂದೆ ಸಂಘಕ್ಕೆ ಈ ಹಸ್ತಾಂತರ ಮಾಡಲಾಗಿದೆ ಮತ್ತು ಪ್ರಸ್ತುತ ನಮಗೆ ಸದರಿ ಆವರಣವನ್ನು ಪ್ರವೇಶಿಸಲು ಯಾವುದೇ ಹಕ್ಕು ಅಥವಾ ಅಧಿಕಾರವಿಲ್ಲ ಎಂಬುದು ವಾಸ್ತವಾಂಶ.
ಈ ಸಂಪೂರ್ಣ ಪ್ರಕರಣವು ಕಟ್ಟಡದ ರೇಖೆಯ ಹೊರಗಿನ ಶೀಟ್ ರೂಫಿಂಗ್ ಪಾರ್ಕಿಂಗ್ನಿಂದ ಕಾಂಕ್ರೀಟ್ ರಚನೆಯ ಅಡಿಯಲ್ಲಿ ಕಾರ್ ಪಾರ್ಕಿಂಗ್ಗೆ ಬೇಕು ಎಂಬುದು ದೂರುದಾರ ಮಹಿಳೆಯ ಒಟ್ಟಾರೆ ಬೇಡಿಕೆ. ಆದರೆ ಇದು ಅಸಾಧ್ಯವಾದ ಬೇಡಿಕೆ. ರಾಜ್ಯ ವೇದಿಕೆಯಲ್ಲಿ ಈ ಅಸಾಧ್ಯದ ಬಗ್ಗೆ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ