ದೇವಸ್ಥಾನಗಳು ಮತ್ತು ದೇವಸ್ಥಾನದ ಧರ್ಮಪರಂಪರೆಯ ರಕ್ಷಣೆಗಾಗಿ ಸಿದ್ಧರಾಗಿ

Upayuktha
0


ಬೆಂಗಳೂರು: ದೇವಸ್ಥಾನಗಳನ್ನು ಹಿಂದೂ ಧರ್ಮದ ವೈಭವವೆಂದು ತಿಳಿಯಲಾಗುತ್ತದೆ. ಅದರಿಂದ ದೊರೆಯುವ ಚೈತನ್ಯದಿಂದಲೇ ಇಂದಿಗೂ ಸಮಾಜವು ದೇವಸ್ಥಾನಗಳ ಕಡೆಗೆ ಆಕರ್ಷಿತಗೊಳ್ಳುತ್ತಿದೆ. ಹೀಗಿರುವಾಗಲೂ; ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಇಂದು ದೇವಸ್ಥಾನದ ಖಜಾನೆಯ ಮೇಲೆ ವಕ್ರ ದೃಷ್ಟಿಯನ್ನಿಟ್ಟು ಅದರ ನಿಯಂತ್ರಣ ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಸರಕಾರಿಕರಣಗೊಂಡಿರುವ ಅನೇಕ ದೇವಸ್ಥಾನಗಳ ಸಂಪತ್ತು ದೂರುಪಯೋಗವಾಗುವುದು ನೋಡುತ್ತೇವೆ. 


17 ಸೆಪ್ಟೆಂಬರ್ 2020 ರಲ್ಲಿ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಸೌ. ರೋಹಿಣಿ ಸಿಂಧೂರಿ ಇವರು ಹೇಳಿಕೆಯಂತೆ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಬಳಿ ದೇವಸ್ಥಾನದ  10,000 ಕೋಟಿ ಮೌಲ್ಯದ ಜಮೀನು ಸರ್ವೇಯಾಗದೆ ಹಾಗೆ ಪಾಳು ಬಿದ್ದಿದೆ. 2007 ರಲ್ಲಿ ವಿಧಾನ ಸಭೆಯಲ್ಲಿ ಮಂಡನೆಯಾದ ಎ.ಟಿ ರಾಮಸ್ವಾಮಿ ಸಮಿತಿಯ ವರದಿಯಂತೆ ಕೇವಲ ಬೆಂಗಳೂರು ನಗರ ದೇವಸ್ಥಾನದ 39.09 ಎಕರೆಯ, 165.55 ಕೋಟಿ ಮೌಲ್ಯದ ಜಮೀನು ಅತಿಕ್ರಮಣವಾಗಿದೆ. ಇದುವರೆಗೆ ಅಧಿಕಾರಿಗಳು ಭೂಗಳ್ಳರಿಂದ ದೇವಸ್ಥಾನದ ಜಮೀನು ವಾಪಸು ಪಡೆಯಲು ಯಾವುದೇ ಪ್ರಯತ್ನ ಮಾಡಲಿಲ್ಲ.


ರಾಜ್ಯದ ವಿವಿಧ ದೇವಸ್ಥಾನಗಳ ಜಮೀನು ಲೂಟಿ:

1. ಮಹಾರಾಷ್ಟ್ರ ಸರಕಾರದ ನಿಯಂತ್ರಣದಲ್ಲಿರುವ ದೇವಸ್ಥಾನದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ: ದೇವಸ್ಥಾನ ದೈವಿ ಚೈತನ್ಯದ ಕೇಂದ್ರವಾಗಿದೆ. ಆದರೆ ಈ ದೇವಸ್ಥಾನಗಳ ಸಂಪತ್ತಿನ ಮೇಲೆ ವಕ್ರ ದೃಷ್ಟಿ ಬೀರಿ ಕೆಲವು ದೇವಸ್ಥಾನಗಳ ಸರಕಾರಿಕರಣ ಮಾಡಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ, ತುಳಜಾಪುರ, ಫಂಡರಪುರ ಮುಂತಾದ ಕೆಲವು ಪ್ರಸಿದ್ಧ ತೀರ್ಥಕ್ಷೇತ್ರಗಳು ಸರಕಾರೀಕರಣವಾಗಿವೆ. ಸರಕಾರೀಕರಣಗೊಂಡಿರುವ ದೇವಸ್ಥಾನಗಳ ಟ್ರಸ್ಟಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ, ಹಾಗೂ ದುರಾಡಳಿತ ಕಂಡು ಬರುತ್ತಿದೆ. ಒಟ್ಟಾರೆ ನೋಡಿದಾಗ ಅನೇಕ ದೇವಸ್ಥಾನಗಳು ಸರಕಾರದ ನಿಯಂತ್ರಣದಲ್ಲಿದ್ದು, ಆ ಪ್ರತಿಯೊಂದು ದೇವಸ್ಥಾನದಲ್ಲಿ ಈ ರೀತಿಯ ಹಗರಣಗಳನ್ನು ನೋಡಿದರೆ ಆಶ್ಚರ್ಯವೇನಲ್ಲ. ಸರಕಾರೀಕರಣಗೊಂಡಿರುವ ಸಾಯಿಬಾಬಾ ಸಂಸ್ಥಾನದಿಂದ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಇವರ ಕೆಲವೇ ಗಂಟೆಗಳ ಪ್ರವಾಸಕ್ಕಾಗಿ 93 ಲಕ್ಷ ರೂಪಾಯಿ ಖರ್ಚು ಮಾಡಿತ್ತು. ಪಂಡರಪುರದ ದೇವಸ್ಥಾನ ಸಮಿತಿಯಂತೂ ಗೋಶಾಲೆಯ ಗೋವುಗಳನ್ನು ಕಸಾಯಿಖಾನೆಗೆ ಮಾರಿ ಅದರಿಂದ ಹಣ ಒಟ್ಟು ಮಾಡಿತ್ತು. ಮುಂಬಯಿದಲ್ಲಿನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಕೋಟ್ಯಾಂತರ ರೂಪಾಯಿ ರಾಜಕಾರಣಿಗಳ ಖಾತೆಗೆ ವರ್ಗಾಯಿಸಲಾಗಿದೆ. ಇದರಿಂದಲೇ ದೇವಸ್ಥಾನಗಳ ಸರಕಾರಿಕರಣದ ಭಯಾನಕತೆ ಗಮನಕ್ಕೆ ಬರುತ್ತದೆ.


2. ಇಂತಹ ಅನೇಕ ದೇವಸ್ಥಾನ ಸಮಿತಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಗಳು ನಡೆಯುತ್ತಿವೆ. ಸರಕಾರಿಕರಣಗೊಂಡಿರುವ ದೇವಸ್ಥಾನಗಳ ಧರ್ಮಪರಂಪರೆಗಳ ಮೇಲೆ ಹಸ್ತಕ್ಷೇಪ ಮಾಡಲಾಗುತ್ತಿದೆ. ಈ ಎಲ್ಲವನ್ನು ತಡೆಯಲು ದೇವಸ್ಥಾನದ ಪ್ರತಿನಿಧಿಗಳ ಪ್ರಬಲ ಸಂಘಟನೆಯಾಗುವುದು ಆವಶ್ಯಕವಾಗಿದೆ. ಆದ್ದರಿಂದ ಹಿಂದೂಗಳು ಕೇವಲ ಜಾಗೃತರಾಗುವುದಷ್ಟೇ ಅಲ್ಲ, ಇದರ ವಿರುದ್ಧ ವ್ಯಾಪಕ ಜನಾಂದೋಲನ ನಡೆಸುವ ಸಮಯ ಬಂದಿದೆ. ಆ ದಿಶೆಯಲ್ಲಿ ಮುಂದಡಿಯಿಟ್ಟು ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು ನಡೆಯಲಿದೆ ! ಬೆಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಡಿಸೆಂಬರ್ 16 ಮತ್ತು 17, 2023 ರಂದು ದೇವಸ್ಥಾನಗಳು ಮತ್ತು ದೇವಸ್ಥಾನದ ಧರ್ಮಪರಂಪರೆಯ ರಕ್ಷಣೆಗಾಗಿ ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು ಆಯೋಜನೆಯಾಗಿದೆ. ಅದರಲ್ಲಿ ದೇವಸ್ಥಾನ ಸರಕಾರಿಕರಣದ ವಿರುದ್ಧ ಅಭೇದ್ಯ ಹಿಂದೂ ಸಂಘಟನೆ ಏಕೆ ಅವಶ್ಯಕವಾಗಿದೆ, ಈ ವಿಷಯದ ಕುರಿತು ಯೋಗ್ಯ ದಿಶಾದರ್ಶನ ಸಿಗಲಿದೆ. 



ಶ್ರೀ. ಗುರುಪ್ರಸಾದ ಗೌಡ,

ರಾಜ್ಯ ಸಮನ್ವಯಕರು,  ಹಿಂದೂ ಜನಜಾಗೃತಿ ಸಮಿತಿ

(ಸಂಪರ್ಕ : 9343017001)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top