ಬೆಂಗಳೂರು: ದೇವಸ್ಥಾನಗಳು ಹಿಂದೂ ಧರ್ಮದ ಆಧಾರಸ್ತಂಭವಾಗಿದೆ. ಸಾವಿರಾರು ವರ್ಷಗಳಿಂದ ಹಿಂದೂ ಸಂಸ್ಕೃತಿಯ ರಕ್ಷಣೆ, ಜೋಪಾಸನೆ ಮತ್ತು ಸಂವರ್ಧನೆಯಲ್ಲಿ ದೇವಸ್ಥಾನದ ಭೂಮಿಕೆ ಅನನ್ಯ ಸಾಧಾರಣವಾಗಿದೆ. ದೇವಸ್ಥಾನಗಳನ್ನು ಹಿಂದೂ ಧರ್ಮದ ವೈಭವವೆಂದು ತಿಳಿಯಲಾಗುತ್ತದೆ. ಅದರಿಂದ ದೊರೆಯುವ ಚೈತನ್ಯದಿಂದಲೇ ಇಂದಿಗೂ ಸಮಾಜವು ದೇವಸ್ಥಾನಗಳ ಕಡೆಗೆ ಆಕರ್ಷಿತಗೊಳ್ಳುತ್ತಿದೆ. ಹೀಗಿರುವಾಗಲೂ; ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಇಂದು ದೇವಸ್ಥಾನದ ಖಜಾನೆಯ ಮೇಲೆ ವಕ್ರ ದೃಷ್ಟಿಯನ್ನಿಟ್ಟು ಅದರ ನಿಯಂತ್ರಣ ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಸರಕಾರಿಕರಣಗೊಂಡಿರುವ ಅನೇಕ ದೇವಸ್ಥಾನಗಳ ಸಂಪತ್ತು ದುರುಪಯೋಗವಾಗುವುದು ನೋಡುತ್ತೇವೆ. ಅಂಕಿ-ಅಂಶಗಳಿಂದ ಸಿಕ್ಕಿದ ಮಾಹಿತಿಗನುಸಾರ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ, ಮೈಸೂರಿನ ಚಾಮುಂಡೇಶ್ವರಿ, ಕೊಲ್ಲೂರು ಮೂಕಾಂಬಿಕಾ, ಸವದತ್ತಿ ಎಲ್ಲಮ್ಮ ದೇವಸ್ಥಾನ ಸೇರಿದಂತೆ 35,559 ದೇವಸ್ಥಾನಗಳು, ಕೇರಳದಲ್ಲಿ ಶಬರಿಮಲೆ, ಗುರುವಾಯೂರು ಸೇರಿ 2992 ದೇವಸ್ಥಾನಗಳು, ತಮಿಳುನಾಡಿನಲ್ಲಿ ಮದುರೈ ಮೀನಾಕ್ಷಿ ಸೇರಿದಂತೆ 44,121 ದೇವಸ್ಥಾನಗಳು, ಆಂಧ್ರಪ್ರದೇಶದಲ್ಲಿ ತಿರುಪತಿ ಸೇರಿದಂತೆ 24,632 ದೇವಸ್ಥಾನಗಳು, ತೆಲಂಗಣದಲ್ಲಿ 12,300 ಹೀಗೆ, ಒಟ್ಟು ಕೇವಲ ದಕ್ಷಿಣ ಭಾರತದಲ್ಲಿ 1.18 ಲಕ್ಷ ಹಿಂದೂಗಳ ದೇವಸ್ಥಾನಗಳು ಜಾತ್ಯಾತೀತ ಸರಕಾರದ ನಿಯಂತ್ರಣದಡಿಯಲ್ಲಿವೆ. ಒಟ್ಟು ಇಡೀ ದೇಶದಲ್ಲಿ ಸರಿಸುಮಾರು 4 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಡಿಯಲ್ಲಿ ತರಲಾಯಿತು. ಈ ಮೂಲಕ ಲಕ್ಷಾಂತರ ಕೋಟಿ ಮೌಲ್ಯದ ದೇವಸ್ಥಾನಗಳ ಚಿನ್ನ, ಆಭರಣಗಳು, ಹುಂಡಿಯಲ್ಲಿರುವ ದೇವನಿಧಿ, ಹಾಗೂ ಲಕ್ಷಾಂತರ ಎಕರೆ ಬೆಲೆಬಾಳುವ ಜಮೀನುಗಳನ್ನು ಜಾತ್ಯತೀತ ಸರಕಾರಕ್ಕೆ ಒಪ್ಪಿಸಲಾಯಿತು.
ಇದರಲ್ಲಿನ ಅನೇಕ ದೇವಸ್ಥಾನ ಸಮಿತಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಗಳು ನಡೆಯುತ್ತಿವೆ. ಸರಕಾರಿಕರಣಗೊಂಡಿರುವ ದೇವಸ್ಥಾನಗಳ ಧರ್ಮಪರಂಪರೆಗಳ ಮೇಲೆ ಹಸ್ತಕ್ಷೇಪ ಮಾಡಲಾಗುತ್ತಿದೆ. ಈ ಎಲ್ಲವನ್ನು ತಡೆಯಲು ದೇವಸ್ಥಾನದ ಪ್ರತಿನಿಧಿಗಳ ಪ್ರಬಲ ಸಂಘಟನೆಯಾಗುವುದು ಆವಶ್ಯಕವಾಗಿದೆ. ಆದ್ದರಿಂದ ಹಿಂದೂಗಳು ಕೇವಲ ಜಾಗೃತರಾಗುವುದಷ್ಟೇ ಅಲ್ಲ, ಇದರ ವಿರುದ್ಧ ವ್ಯಾಪಕ ಜನಾಂದೋಲನ ನಡೆಸುವ ಸಮಯ ಬಂದಿದೆ. ಆ ದಿಶೆಯಲ್ಲಿ ಮುಂದಡಿಯಿಟ್ಟು ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು ನಡೆಯಲಿದೆ.
ಬೆಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಡಿಸೆಂಬರ್ 16 ಮತ್ತು 17 2023 ರಂದು ದೇವಸ್ಥಾನಗಳು ಮತ್ತು ದೇವಸ್ಥಾನದ ಧರ್ಮಪರಂಪರೆಯ ರಕ್ಷಣೆಗಾಗಿ ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು ಆಯೋಜನೆಯಾಗಿದೆ. ಅದರಲ್ಲಿ ದೇವಸ್ಥಾನ ಸರಕಾರಿಕರಣದ ವಿರುದ್ಧ ಅಭೇದ್ಯ ಹಿಂದೂ ಸಂಘಟನೆ ಏಕೆ ಅವಶ್ಯಕವಾಗಿದೆ, ಈ ವಿಷಯದ ಕುರಿತು ಯೋಗ್ಯ ದಿಶಾದರ್ಶನ ಸಿಗಲಿದೆ. ಇದೇ ಈ ಲೇಖನದ ಉದ್ದೇಶವಾಗಿದೆ.
ಉಪಯುಕ್ತ ಇ-ಪೇಪರ್ ಓದಲು ಕ್ಲಿಕ್ ಮಾಡಿ:
ದೇವಸ್ಥಾನದ ವಿಶ್ವಸ್ಥರು ಹಾಗೂ ಪೂಜಾರಿಗಳು ದೇವಸ್ಥಾನದ ರಕ್ಷಣೆಗಾಗಿ ಸಹಭಾಗಿಯಾದರೆ, ಖಂಡಿತವಾಗಿಯೂ ದೇವಸ್ಥಾನದ ಪಾವಿತ್ರ್ಯತೆ ಶಾಶ್ವತವಾಗಿರುವುದು. ದೇವಸ್ಥಾನದ ಸರಕಾರಿಕರಣ ಹಾಗೂ ಸರಕಾರದಿಂದ ನಡೆಯುವ ದೇವಸ್ಥಾನಗಳ ಅಕ್ರಮಗಳ ವಿರುದ್ಧ ಕಾನೂನು ಮಾರ್ಗದಲ್ಲಿ ಎಲ್ಲಾ ಸ್ತರದ ಜನರಿಗೆ ಜಾಗೃತಿ ಮೂಡಿಸಿ. ದೇವಸ್ಥಾನಕ್ಕೆ ಸಂಬಂಧಿತ ಪ್ರಸ್ತುತ ಕಾನೂನಿನ (ಉದಾ. ಪ್ಲೇಸಸ್ ಆಫ್ ವರ್ಷಿಪ್) ಕಾರಣದಿಂದಾಗುವ ದುಷ್ಪರಿಣಾಮಗಳ ಅಧ್ಯಯನ ಮಾಡಿ ಅಂತಹ ಕಾನೂನುಗಳನ್ನು ತೆರವುಗೊಳಿಸಲು ಆವಶ್ಯಕ ಪ್ರಯತ್ನ ಮಾಡುವುದು. ಪ್ರತಿ ಕ್ಷೇತ್ರದ ದೇವಸ್ಥಾನದ ವಿಶ್ವಸ್ಥರು, ಪೂಜಾರಿಗಳು, ಭಕ್ತರು, ಹಿತಚಿಂತಕರು, ಮುಂತಾದವರ ಸಂಘಟನೆ ಮಾಡುವುದು. ದೇವಸ್ಥಾನದ ಧಾರ್ಮಿಕ ಸಂಪ್ರದಾಯಗಳ ಪಾಲನೆ, ಪದ್ಧತಿಗಳನ್ನು ರಕ್ಷಿಸುವುದು, ಜೊತೆಗೆ ದೇವಸ್ಥಾನದ ಪಾವಿತ್ರ್ಯತೆ ರಕ್ಷಣೆ, ಸ್ವಚ್ಛತೆ, ನಿಯಮಗಳ ಪಾಲನೆ, ಶಿಸ್ತು ಮುಂತಾದರ ಪಾಲನೆ ಮಾಡಲು ಹೆಚ್ಚಿನ ಗಮನ ನೀಡುವುದು. ಹಿಂದೂಗಳಿಗೆ ಧರ್ಮಶಿಕ್ಷಣ ದೊರೆಯಲು ಗುರುಕುಲ, ವೇದಪಾಠ ಶಾಲೆಗಳು, ಜೊತೆಗೆ ಗೋಶಾಲೆಗಳನ್ನು ಆರಂಭಿಸಿ ದೇವಸ್ಥಾನಗಳ ವಾಸ್ತವಿಕ ಲಾಭ ಹಿಂದೂ ಸಮಾಜಕ್ಕೆ ಸಿಗುವಂತೆ ಪ್ರಯತ್ನಿಸುವುದು ಒಳಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ