ಅಥ್ಲೆಟಿಕ್ ಕ್ರೀಡೆ ದಾಖಲೆಯ ಚಿನ್ನದ ಜಿಂಕೆ ಚರಿಷ್ಮಾ

Upayuktha
0



ಕ್ರೀಡೆಯೊಂದರಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಳ್ಳುವುದು ಅಂದರೆ ಕಷ್ಟ ಸಾಧ್ಯ. ಅಂತಹದರಲ್ಲಿ ಎರಡು ಮೂರು ಅಥ್ಲೆಟಿಕ್ ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ದಾಖಲೆಯ ಸರದಾರಿ ಪ್ರತಿಭೆ ಚರಿಷ್ಮಾ.ಇವರು ಕಡಬ ತಾಲೂಕಿನ ಬಂಟರ ಗ್ರಾಮದ ಬಸವಪಾಲು ಸುಬ್ರಾಯ ಗೌಡ ಮತ್ತು ಸುಮತಿ ದಂಪತಿಗಳ ಸುಪುತ್ರಿ.ಇವರು 10ನೇ ತರಗತಿ ಯ ಸರಕಾರಿ ಪ್ರೌಢಶಾಲೆ ಕಡಬ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಇವರ ಕ್ರೀಡಾ ಸಾಧನೆಗೆ ತರಬೇತುದಾರರು ಸರಕಾರಿ ಪ್ರೌಢಶಾಲೆ ಕಡಬ ಇಲ್ಲಿನ ದೈಹಿಕ ಶಿಕ್ಷಕ ಲೋಕೇಶ್ ಟಿ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು.ಒಂಬತ್ತನೇ  ತರಗತಿಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಚರಿಷ್ಮಾಅವರ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನದ ಮೂಲಕ ಸಾಧನೆಗಳ ಶಿಖರವೇರಿ ಜಿಲ್ಲಾ, ರಾಜ್ಯ , ರಾಷ್ಟ್ರ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ.  ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 16 ವರ್ಷ ವಯೋಮಿತಿಯ ಬಾಲಕಿಯರ 2000 ಮೀಟರ್ ಓಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಮತ್ತು ದಕ್ಷಿಣ ವಲಯ ಅಂತರ್ ರಾಜ್ಯ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ.ತೆಲಂಗಾಣ ರಾಜ್ಯದ ವಾರಂಗಲ್ ನಲ್ಲಿ ನಡೆದ ದಕ್ಷಿಣ ವಲಯ ಅಂತರ್ ರಾಜ್ಯ ಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದ 16 ವರ್ಷ ವಯೋಮಿತಿಯ 2000 ಓಟದಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟದ ಕ್ರೀಡಾಕೂಟ ಕ್ಕೆ ಆಯ್ಕೆಯಾಗಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ 2023-24 ರಲ್ಲಿ1500 ಮೀಟರ್ ಓಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ 4.53.09 ನಿಮಿಷದಲ್ಲಿ ( Old record - 5.01.70 ನಿಮಿಷ - 2004),  ಮತ್ತು 3000 ಮೀಟರ್ ಓಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ10.44.07 ನಿಮಿಷ ( Old record - 10.49.70 ನಿಮಿಷ - 2004)ಚಿನ್ನದ ಪದಕವನ್ನು ಪಡೆದಿದ್ದಾರೆ.


ದಕ್ಷಿಣ ಕನ್ನಡ  ಜಿಲ್ಲಾಮಟ್ಟದ ಕ್ರೀಡಾಕೂಟ 2023-24 -800mtr, 1500 ಮೀಟರ್, 3000ಮೀಟರ್ ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ವೈಯುಕ್ತಿಕ ಚಾಂಪಿಯನ್ ಆಗಿರುತ್ತಾಳೆ.


ಚಿನ್ನದ ಪದಕಗಳನ್ನು ಮೆಟ್ಟಿಲಾಗಿ ಮಾಡಿ ತನ್ನ ಸಾಧನೆ ಹಾದಿಯನ್ನು ರೂಪಿಸಿದ ಕರಾವಳಿಯ ಅಥ್ಲೆಟಿಕ್ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಚರಿಷ್ಮಾ ಇವರು ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ಮಟ್ಟದ ಅಥ್ಲೆಟಿಕ್  ನಡೆಯಲಿರುವ ಸ್ಪರ್ಧೆ ಯಲ್ಲಿ   ಚಿನ್ನದ ಪದಕಕ್ಕೆ ಮುತ್ತಿಡಬೇಕೆಂಬ ಮಹದಾಸೆಯನ್ನು ಹೊತ್ತುಕೊಂಡಿದ್ದಾರೆ.ಇವರ ಸಾಧನೆ ಹೀಗೆ ಮುಂದುವರೆಯಲಿ ಚಿನ್ನದ ಪದಕಗಳ ಮೂಲಕವೇ ಭಾರತಾಂಬೆಯ ಪೂಜೆ ಮಾಡಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವಂತಾಗಲಿ ಎಂದು ಆಶಿಸೋಣ.


                                                                                    


-ಜಯಶ್ರೀ.ಸಂಪ ,ಪಂಜ

ತೃತೀಯ ಬಿ ಎ ಪತ್ರಿಕೋದ್ಯಮ ವಿದ್ಯಾರ್ಥಿ

ಅಂಬಿಕಾ ಮಹಾವಿದ್ಯಾಲಯದಲ್ಲಿ ಬಪ್ಪಳಿಗೆ,ಪುತ್ತೂರು


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top