ಪಣಜಿ: ಕರ್ನಾಟಕದಿಂದ ಗೋವಾಕ್ಕೆ ತೆರಳಿ ಅಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವ ಗೋವಾ ಕನ್ನಡಿಗರು ತಮ್ಮ ಕನ್ನಡದ ಪ್ರಾಮುಖ್ಯತೆಯನ್ನು ಅರಿಯಬೇಕೆಂಬುದಷ್ಟೇ ಅಲ್ಲದೆಯೇ ಕನ್ನಡದ ಕಂಪನ್ನು ಗೋವಾದಲ್ಲಿಯೂ ಹರಡಬೇಕು ಎಂಬ ನಿಟ್ಟಿನಲ್ಲಿ ಗೋವಾದ ಬಿಚೋಲಿಯ ಕರ್ಮಭೂಮಿ ಕನ್ನಡ ಸಂಘಟನೆಯು ಒಂದು ವಿನೂತನವಾದ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ.
ಕರ್ನಾಟಕದಿಂದ ಗೋವಾದಲ್ಲಿ ವಲಸೆ ಹೋಗಿ ಲಕ್ಷಾಂತರ ಕನ್ನಡಿಗರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇವರ ಕುಟುಂಬದವರು ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಧಾರ್ಮಿಕ ಕ್ಷೇತ್ರಗಳ ಪರಿಚಯ ಮಾಡಲು ಹನುಮಂತಪ್ಪ ಶಿರೂರ್ ರೆಡ್ಡಿ ರವರ ಅಧ್ಯಕ್ಷತೆಯ ಕರ್ಮಭೂಮಿ ಕನ್ನಡ ಸಂಘಟನೆಯ ಮೂಲಕ ಗೋವಾದ ಕನ್ನಡಿಗರಿಗೆ ಕರ್ನಾಟಕದ ದೇವದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗೋವಾದಲ್ಲಿ ಸುಮಾರು 12 ಬಸ್ಗಳ ಮೂಲಕ 500 ಕ್ಕೂ ಹೆಚ್ಚು ಕನ್ನಡಿಗರು ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ, ಹೊನ್ನಾವರ ಇಡಗುಂಜಿ, ಗೋಕರ್ಣ ಸೇರಿದಂತೆ ಹಲವು ತೀರ್ಥ ಕ್ಷೇತ್ರಗಳಿಗೆ ತೆರಳಿ ದೇವ ದರ್ಶನ ಪಡೆದುಕೊಂಡರು. ಕರ್ಮಭೂಮಿ ಕನ್ನಡ ಸಂಘಟನೆಯ ವತಿಯಿಂದ ಎರಡು ದಿನಗಳ ದೇವದರ್ಶನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗೋವಾ ಕನ್ನಡಿಗರಿಗೆ ಕರ್ಮಭೂಮಿ ಕನ್ನಡ ಸಂಘವು ಈ ಎಲ್ಲ ಕನ್ನಡಿಗರಿಗೆ ಉಚಿತ ಪ್ರವಾಸ ಮತ್ತು ಊಟ ವಸತಿ ವ್ಯವಸ್ಥೆಯನ್ನು ಕಲ್ಪಿಸಿತ್ತು.
ಈ ಕುರಿತಂತೆ ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ಪ್ರತಿಕ್ರಿಯೆ ನೀಡಿ- ಕರ್ಮಭೂಮಿ ಕನ್ನಡ ಸಂಘದ ವತಿಯಿಂದ ಕರ್ನಾಟಕದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ದೇವದರ್ಶನ ಪಡೆದುಕೊಳ್ಳುವ ಮೂಲಕ ಕನ್ನಡಿಗರು ತನ್ನಡವನ್ನು ಉಳಿಸಿ ಬೆಳೆಸುವುದು ಮಾತ್ರವಲ್ಲದೆಯೇ ನಮ್ಮ ಮಕ್ಕಳೂ ಕೂಡ ಕನ್ನಡವನ್ನು ಉಳಿಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೋವಾದಲ್ಲಿರುವ ಕನ್ನಡಿಗರು ಕೊಂಕಣಿ ಪ್ರಭಾವಕ್ಕೆ ಒಳಗಾಗದೆಯೇ ನಮ್ಮ ಧಾರ್ಮಿಕ ಕ್ಷೇತ್ರಗಳ ಮಹತ್ವ ಅರಿತುಕೊಂಡು ಮುಂದವರೆಯ ಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದರು. ಈ ಸಂದರ್ಭದಲ್ಲಿ ಕರ್ಮಊಮಿ ಕನ್ನಡ ಸಂಘದ ಗೌ.ಅಧ್ಯಕ್ಷ ಮಲ್ಲಿಕಾರ್ಜುನ ಹೊಸ್ಮನಿ,ಉಪಾಧ್ಯಕ್ಷ ನಾಗೇಶ ಮೊಟೆಬೆನ್ನೂರ, ಬಸವರಾಜ್ ಹಿಪ್ಪರಗಿ, ಬಸವರಾಜ್ ಅಬ್ಬಿಗೇರಿ, ಬಸವರಾಜ್ ಗೋಡಗೇರಿ, ಮೆಹಬೂಬ್ ಸೈಯ್ಯದ್ ನೇತೃತ್ವದ ಕರ್ಮಭೂಮಿ ಸಂಘ ಈ ದೇವದರ್ಶನ ಕಾರ್ಯಕ್ರಮ ಆಯೋಜಿಸಿತ್ತು.
ಇಂದಿನ ಯುವ ಜನತೆ ತಾವು ಮೂಲ ಕನ್ನಡಿಗರು ಎನ್ನುವುದನ್ನೇ ಮರೆತು ಗೋವಾ ಸಂಸ್ಕøತಿಗೆ ಹೊಂದಿಕೊಳ್ಳುವ ಮೂಲಕ ಕನ್ನಡವನ್ನೇ ಮರೆಯುವ ಸ್ಥಿತಿಗೆ ಬಂದಿರುವುದು ಬೇಸರದ ಸಂಗತಿಯಾಗಿದೆ. ಗೋವಾದಲ್ಲಿ ನೆಲೆಸಿರುವ ಕರ್ನಾಟಕದ ಜನರಲ್ಲಿ ಕನ್ನಡ ಭಾಷೆ ಸಂಸ್ಕøತಿಯನ್ನು ಜೀವಂತವಾಗಿಡಬೇಕು ಎನ್ನುವುದು ಕರ್ಮಭೂಮಿ ಕನ್ನಡ ಸಂಘಟನೆಯ ಉದ್ದೇಶವಾಗಿದೆ. ಈಗಾಗಲೇ ಈ ಸಂಘಟನೆಯು ಗೋವಾದಲ್ಲಿ ಕನ್ನಡದ ಉಳಿವಿಗಾಗಿ ಗೋವಾದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಗೋವಾ ರಾಜ್ಯದಲ್ಲಿ ಕನ್ನಡವನ್ನು ಇನ್ನಷ್ಟು ಗಟ್ಟಿಮಾಡಬೇಕು ಎನ್ನುವ ಉದ್ದೇಶದಿಂದ ಗೋವಾ ಕರ್ಮಭೂಮಿ ಕನ್ನಡ ಸಂಘಟನೆ ಕನ್ನಡ ಉಳಿವಿಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ