ಪದವೀಧರನೆಂಬ ನಿರಾಸಕ್ತ ಮತದಾರ...?

Upayuktha
0

ವಿಧಾನಪರಿಷತ್‌ಗೆ ಆಯ್ಕೆಗೊಳ್ಳುವ ಬಹು ಸುಲಭದ ಮತ್ತು ಬಹು ನಿರಾಸಕ್ತ ಕ್ಷೇತ್ರವೆಂದರೆ ಅದು ಪದವಿಧರರ ಕ್ಷೇತ್ರ.ಇಲ್ಲಿನ ಮತದಾರರನ್ನು ನಿರಾಸಕ್ತಮಾತ್ರವಲ್ಲ ಚುನಾಯಿತ ಪ್ರತಿನಿಧಿಯೂ ಕೂಡಾ ಮತದಾರನಷ್ಟೇ ನಿರಾಸಕ್ತನಾಗಿ ಆರಾಮವಾಗಿ ಸಮಯ ಕಳೆಯ ಬಹುದಾದ ರಾಜಕೀಯ ಪ್ರಾತಿನಿಧ್ಯವಿದ್ದರೆ ಅದು ಪದವೀಧರರ ವಿಧಾನಪರಿಷತ್ ಅನ್ನುವುದು ಅಷ್ಟೇ ಸತ್ಯ.


ಈ ಪದವಿಧರರಿಗಾಗಿಯೇ 1/3ರಷ್ಟು ಸ್ಥಾನಗಳನ್ನು ವಿಧಾನಪರಿಷತ್ ನಲ್ಲಿ ಕಾದಿರಿಸುವ ಅನಿವಾರ್ಯತೆ ಏನಿದೆ ಅನ್ನುವುದು ಸಹಜವಾಗಿ ಮೂಡುವ ಪ್ರಶ್ನೆ.ಕಾರಣ ಇಷ್ಟೇ ಪದವೀಧರನೆಂಬ ಪ್ರಬುದ್ಧ ಮತದಾರರ ಅತ್ಯಂತ ಜವಾಬ್ದಾರಿ ತನದಿಂದ ಅಳೆದು ತೂಗಿ ಪಕ್ಷ ಮೀರಿ ಸಮಪ೯ಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಇಂತಹ ಪ್ರಬುದ್ಧ ಪ್ರತಿನಿಧಿಗಳು ಸದನದ ಘನತೆ ಗೌರವ ಹೆಚ್ಚಿಸಬಲ್ಲರು ಮಾತ್ರವಲ್ಲ ಕಾನೂನು ರೂಪಿಸುವಾಗ ಕೂಡಾ ಅತ್ಯುತ್ತಮವಾಗಿ ಮಾಗ೯ದಶ೯ನ ಮಾಡ ಬಲ್ಲರು ಅನ್ನುವ ಕಾರಣಕ್ಕಾಗಿಯೇ ಈ ಪದವೀಧರರ ಕ್ಷೇತ್ರಗಳ ಚುನಾವಣೆಗೆ ವಿಶೇಷ ಅಥ೯ ಕಲ್ಪಿಸಲಾಯಿತು. ಆದರೆ ದುರಂತವೆಂದರೆ ಈ ಪದವೀಧರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುವಾಗಲೇ ಅತ್ಯಂತ ನಿರಾಸಕ್ತಿ ತೇೂರುವ ಮತದಾರರನೆಂದರೆ ಅದು ಪದವೀಧರರು ಅನ್ನುವುದು ಇತ್ತೀಚಿನ ಪದವೀಧರ ಮತದಾರರ ಪಟ್ಟಿಯಲ್ಲಿ ಇರುವ ಒಟ್ಟು ಮತದಾರರ ಸಂಖ್ಯೆಯೇ ಈ ಪದವೀಧರರ ಉದಾಸೀನತಗೆ ಹಿಡಿದ ಕೈಗನ್ನಡಿ ಅಂತಿದೆ.



ನಿಜಕ್ಕೂ ನೇೂಡಿದರೆ ಯಾವುದೇ ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿ ಮೂರು ವರುಷಗಳ ಅನಂತರ ಆತ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಅವಕಾಶವಿದೆ. ಆದರೆ ಇಲ್ಲಿನ ವಿಚಿತ್ರ ಪ್ರಸಂಗವೆಂದರೆ ಯಾರು ಚುನಾವಣೆಯಲ್ಲಿ ಸ್ಪಧಿ೯ಸಲು ಆಸಕ್ತಿ ವಹಿಸುತ್ತಾರೊ ಅವರೇ ಇಂತವರನ್ನು ಹುಡುಕಿ ಕಾಡಿ ಬೇಡಿ ಮತದಾರರ ಪಟ್ಟಿಯಲ್ಲಿ ನೊಂದಾಣಿ ಮಾಡಿಕೊಳ್ಳಬೇಕಾದ ಪ್ರಸಂಗ ಸೃಷ್ಟಿಯಾಗಿದೆ. ಇದು ಸುಲಭದ ಕೆಲಸವಂತೂ ಖಂಡಿತವಾಗಿಯೂ ಅಲ್ಲ. ಸರಿಸುಮಾರು ಒಂದೊಂದು ಪದವೀಧರ ಕ್ಷೇತ್ರಗಳು ಐದರಿಂದ ಆರು ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುತ್ತದೆ. ಹಿಂದೆ ಒಂದು ಪರಿಸ್ಥಿತಿ ಇತ್ತು ಅದೇನೆಂದರೆ ಯಾರು ಹೆಚ್ಚು ಹೆಸರು ನೊಂದಾಯಿಸುತ್ತಾರೊ ಅವರು ಸುಲಭವಾಗಿ ಜಯಶೀಲರಾಗುತ್ತಾರೆ ಅನ್ನುವ ರಾಜಕೀಯ ಲೆಕ್ಕಾಚಾರ. ಆದರೆ ಈಗ ಕಾಲ ಬದಲಾಗಿದೆ. ಪದವಿಧರರು ಅಂದರೆ ಬರೇ ಕೈಯಲ್ಲಿ ಒಂದು ಪದವಿ ಪ್ರಮಾಣ ಪತ್ರಹಿಡಿದು ಕೂತ ಒಬ್ಬ ಸಾಮಾನ್ಯ ಮತದಾರ ಅಲ್ಲ. ಈತ ಒಬ್ಬ ಶಿಕ್ಷಕನ್ನು ಆಗಿರಬಹುದು ಸರಕಾರಿ ಅರೆ ಸರಕಾರಿ ಖಾಸಗಿ ಸಂಸ್ಥೆಯಲ್ಲಿ ದುಡಿಯುವ ನೌಕರರನ್ನು ಆಗಿರಬಹುದು. ಹಾಗಾಗಿ ಅಲ್ಲಿ ಕಾಡುವ ಸಮಸ್ಯೆಗಳು ಕೂಡಾ ಮತದಾನದ ವೇಳೆಯಲ್ಲಿ ಅಭ್ಯರ್ಥಿ ಮತ್ತು ಪಕ್ಷಗಳ ಆಯ್ಕೆ ಯಲ್ಲಿಮಹತ್ತರವಾದ ಪ್ರಭಾವ ಬೀರ ಬಹುದು.


ಉದಾ:ಇಂದಿನ ಅದೆಷ್ಟೊ ನವ ಪದವಿಧರ ಮತದಾರರು ಸರಕಾರಿ ಖಾಸಗಿ ಅನುದಾನಿತ ಸಂಸ್ಥೆಗಳಲ್ಲಿ ದುಡಿಯುತ್ತಿದರೆ ಅವರ ವೇತನ ಭಡ್ತಿ ಪಿಂಚಣಿ ಸಮಸ್ಯೆಗಳು ಕೂಡಾ ಅಭ್ಯರ್ಥಿ ಮತ್ತು ಪಕ್ಷಗಳ ಆಯ್ಕೆಯಲ್ಲಿ ಪದವೀಧರ ಮತದಾರ ಹೆಚ್ಚು ಜಾಗೃತಿ ವಹಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ.


ಈ ಪದವೀಧರ ಮತದಾರರ ಇನ್ನೊಂದು ಬಹುಮುಖ್ಯವಾದ ಅಸಹಾಯಕತೆ ಅಂದರೆ ಪದವಿಧರರು ಅಸಂಘಟಿತ ವರ್ಗವೆಂದೇ ಹೇಳ ಬಹುದು. ಹಾಗಾಗಿ ಇವರ ಸಮಸ್ಯೆಗಳು ಎಲ್ಲಿಯೂ ಚಚೆ೯ಗೆ ಸಿಗುವುದೆ ಇಲ್ಲ. ಅದೇ ಶಿಕ್ಷಕರ ಕ್ಷೇತ್ರ ವಾದರೆ ಸಮಸ್ಯೆಗಳನ್ನು ನೇರವಾಗಿ ಗುರುತಿಸಬಹುದು. ಈ ಅಥ೯ದಲ್ಲಿ ಪದವಿಧರರಿಂದ ಚುನಾಯಿತ ಶಾಸಕರು ಹೆಚ್ಚು ಸುರಕ್ಷಿತ.


ನನ್ನ ಅನಿಸಿಕೆ ಅಂದರೆ ಪದವೀಧರರ ವೇದಿಕೆ ರೂಪಿತವಾಗ ಬೇಕು. ಆ ಮೂಲಕ ನಿರುದ್ಯೋಗದ ಸಮಸ್ಯೆ. ಸರ್ಕಾರದ ಸ್ಕೀಮ್‌ಗಳು ನಮ್ಮ ಪದವಿಗಳಿಸಿದವರಿಗೆ ಯಾವ ರೀತಿಯಲ್ಲಿ ಸಹಾಯಕವಾಗ ಬೇಕು. ಉದ್ಯೋಗ ತರಬೇತಿ  ಮಾಗ೯ದಶ೯ನಗಳ ಬಗ್ಗೆಗಿನ ಅವಕಾಶಗಳ ಬಗ್ಗೆಯೂ ಸರ್ಕಾರ ಮತ್ತು ಖಾಸಗಿ ವಲಯದಲ್ಲೂ ಚಚೆ೯ ನಡೆಯಬೇಕು. ಈ ಕುರಿತಾಗಿ ನಮ್ಮ ಪದವೀಧರ ಕ್ಷೇತ್ರಗಳ ಜನಪ್ರತಿನಿಧಿಗಳು ಹೆಚ್ಚು ಗಂಭೀರವಾಗಿ ಸದನಗಳಲ್ಲಿ ಧ್ವನಿ  ಎತ್ತಬೇಕು. ಈ ರೀತಿಯಲ್ಲಿ ನಮ್ಮ ಪದವಿಧರ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡರೇ ಮಾತ್ರ ಪದವೀಧರ ಮತದಾರರ ಇನ್ನೂ ಹೆಚ್ಚಿನ ಆಸಕ್ತಿಯನ್ನು ಮತದಾನದ ಪ್ರಕ್ರಿಯೆಯಲ್ಲಿ ತೇೂರಿಸಬಹುದು ಅನ್ನುವುದು ನನ್ನ ಖಚಿತ ಅಭಿಪ್ರಾಯ. ಇಲ್ಲದೇ ಹೇೂದರೆ ಆಯಾಯ ಜಿಲ್ಲಾ ಪದವಿಧರ ಮತದಾರ ತನ್ನ ಜಿಲ್ಲೆ ತನ್ನ ಜಾತಿ, ಮುಂತಾದ ಆಮಿಷಗಳಿಗೆ ಜೇೂತು ಬಿದ್ದು ಮತದಾನ ಮಾಡುವ ಪರಿಸ್ಥಿತಿ ನಾವೇ ಸೃಷ್ಟಿ ಮಾಡಿಕೊಟ್ಟ ಹಾಗೆ. ಹಾಗಾಗಿ ಈ ಪದವೀಧರ ಕ್ಷೇತ್ರಗಳ ಘನತೆ ಗೌರವ ಹೆಚ್ಚಿಸ ಬೇಕಾದರೆ ಇಂತಹ ಹತ್ತು ಹಲವು ಮೂಲ ಭೂತವಾದ ಸುಧಾರಣೆಗಳು ಆಗ ಬೇಕಾದ ಅನಿವಾರ್ಯತೆ ಇದೆ.


-ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top