ಯಕ್ಷಗಾನದಂತಹ ಶ್ರೀಮಂತ ಕಲೆಗೆ ರಾಜಾಶ್ರಯದ ಅಗತ್ಯವಿದೆ: ರಮಾನಾಥ ಸುವರ್ಣ
ಮಂಗಳೂರು: ಯಕ್ಷಗಾನವು ಪ್ರಪಂಚ ವ್ಯಾಪಿಯಾಗಿದ್ದರೂ ಈಗಲೂ ಅದಕ್ಕೆ ಆರ್ಥಿಕ ಸಹಾಯದ ಅಗತ್ಯವಿದೆ. ಕಲೆ ಶ್ರೀಮಂತವಾಗಿದ್ದರೂ ಬಹಳಷ್ಟು ಆರ್ಥಿಕ ವೆಚ್ಚವನ್ನು ಬಯಸುವ ಕಲೆ ಇದು. ಎಷ್ಟೋ ಬಾರಿ ಸಂಘಟಕರಿಗೆ ಆಶೆಯಿದ್ದರೂ ಕಾಯಕ್ರಮದ ಖರ್ಚು-ವೆಚ್ಚ ಅವರನ್ನು ಯೋಚಿಸುವಂತೆ ಮಾಡುತ್ತದೆ. ರಾಜಾಶ್ರಯವನ್ನು ಬಯಸುವ ಈ ಕಲೆಗೆ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಹಾಯ ನೀಡುವುದರಿಂದ ಒಂದಷ್ಟು ಮಂದಿ ಯಕ್ಷಗಾನವನ್ನು ನಡೆಸುತ್ತಾರೆ. ದೇವಾಲಯಗಗಳಲ್ಲೂ ಇದಕ್ಕೆ ವಿಶೇಷ ವೇದಿಕೆ ಸಿಗುತ್ತದೆ. ಈ ರೀತಿಯ ಪ್ರೋತ್ಸಾಹ ಎಲ್ಲೆಡೆ ದೊರಕಲಿ ಎಂದು ಕೊಪ್ಪಲ- ಕುದ್ರೋಳಿಯ ಶ್ರೀ ದುರ್ಗಾಲಕ್ಷೀ ದೇವಸ್ಥಾನದ ಅಧ್ಯಕ್ಷ ರಮಾನಾಥ ಸುವರ್ಣರು ಹೇಳಿದರು.
ಕ್ಷೇತ್ರದಲ್ಲಿ ನಡೆದ ಕೌಶಿಕ್ ಮತ್ತು ತಂಡದಿಂದ ನಡೆದ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಯಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ರಮಾನಾಥ ಪೈ, ರವಿ ಎ.ಯನ್, ಸ್ಕಂದ ಕೊನ್ನಾರ್, ಉಪನ್ಯಾಸಕಿ ತನುಜಾಕ್ಷಿ, ಸಾವಿತ್ರಿ ಎಸ್.ಮಲ್ಯ ಭಾಗವಹಿಸಿದ್ದರು.
ವೀಣಾ ಕೆ.ಯವರು ಸ್ವಾಗತಿಸಿ, ನಿರ್ವಹಿಸಿದರೆ ನಿಹಾಲ್ ಪೂಜಾರಿ ವಂದನಾರ್ಪಣೆಗೈದರು. ಸಭಾ ಕಲಾಪದ ನಂತರ ಕೌಶಿಕ್ ಮತ್ತು ತಂಡದಿಂದ ನವರಾತ್ರಿಯ ಪ್ರಯುಕ್ತ ಶ್ರೀದೇವೀ ಮಹಿಷಮರ್ದಿನಿ ಎಂಬ ಬಯಲಾಟ ಪ್ರದರ್ಶನಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ