ಭಾಷಾ ದ್ವೇಷವಿಲ್ಲದೆ ಗೌರವದೊಂದಿಗೆ ಬದುಕೋಣ

Upayuktha
0

ಕಾಸರಗೋಡಿನಲ್ಲಿ ಕನ್ನಡ ಕಲರವ ಕಾರ್ಯಕ್ರಮ ಉದ್ಘಾಟಿಸಿ ಎಂ. ಗುರುಪ್ರಸಾದ್ ಮಂಡ್ಯ


ಕಾಸರಗೋಡು: ಗಡಿನಾಡಿನಲ್ಲಿ ಭಾಷಾ ಸಮಸ್ಯೆ ಸಾಮಾಜಿಕ ತಾರತಮ್ಯವಿದೆ. ಆದರೆ ಪ್ರತಿಯೊಬ್ಬರೂ ಭಾಷಾ ದ್ವೇಷವಿಲ್ಲದೆ ಪರಸ್ಪರ ಗೌರವದಿಂದ ಬದುಕಬೇಕು. ಎಲ್ಲಿಯೂ ಮಾನವ ಹಕ್ಕು ಉಲ್ಲಂಘನೆ ಯಾಗಬಾರದು ಎಂದು ನ್ಯಾಯವಾದಿ ಎಂ. ಗುರುಪ್ರಸಾದ್ ಮಂಡ್ಯ ಹೇಳಿದರು.



ಕಾಸರಗೋಡು ಹೋಟೆಲ್ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕನ್ನಡ ಕಲರವ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.



ಗಡಿನಾಡಿನಲ್ಲಿ ಜನತೆಯ ಸಮಸ್ಯೆ ಬಗೆಹರಿಸಿ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡಬೇಕು ಅದಕ್ಕಾಗಿ ಕನ್ನಡಿಗರು ಜೊತೆಯಾಗಿ ಕೆಲಸ ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕೆಎಸ್‌ಎಸ್‌ಎಪಿ ಅಧ್ಯಕ್ಷೆ ರಾಣಿ ಪುಷ್ಪ ಲತಾದೇವಿ ಮಾತನಾಡಿ ಕನ್ನಡ ಭಾಷೆ ಸಂಸ್ಕೃತಿಯ ಉಳಿಕೆಗೆ ಇಂತಹ ಕಾರ್ಯಕ್ರಮ ನಿರಂತರವಾಗಿರಬೇಕು ಹೆಚ್ಚು ಹೆಚ್ಚು ಕಾರ್ಯಕ್ರಮ ಆಯೋಜಿಸುವ ಮೂಲಕ ಮತ್ತಷ್ಟು ಕನ್ನಡ ಅಭಿಮಾನವನ್ನು ವೃದ್ಧಿಗೊಳಿಸಬೇಕು ಎಂದರು.



ಮಂಜೇಶ್ವರ ಜಿಪಿಎಂಸಿ ಪ್ರಾಧ್ಯಾಪಕ ಶಿವಶಂಕರ್ ಮಾತನಾಡಿ, ಕಾಸರಗೋಡಿನ ಕನ್ನಡಿಗರು ಹೊರ ರಾಜ್ಯಗಳಿಗೆ ಉದ್ಯೋಗ ಕ್ಕಾಗಿ ತೆರಳುವ ಬದಲು ಜಿಲ್ಲೆಯ ಸರಕಾರಿ ಹುದ್ದೆ ಗಳಿಸಲು ಪ್ರಯತ್ನಿಸಬೇಕು. ಅದಕ್ಕಾಗಿ ಕನ್ನಡಿಗರಿಗಾಗಿ ಪ್ರತ್ಯೇಕ ತರಬೇತಿ ಕೇಂದ್ರ ತೆರೆಯಬೇಕು ಆ ಮೂಲಕ ಕನ್ನಡಿಗರ ಸಂಖ್ಯೆಯನ್ನು ಎಲ್ಲಾ ವಲಯದಲ್ಲೂ ಕಾಣುವಂತಾಗಬೇಕು ಎಂದರು.



ಬಿಇಎಂ ಹೈಸ್ಕೂಲಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೆ ಎನ್ ವೆಂಕಟ್ರಮಣ ಹೊಳ್ಳ, ಹೋಟೆಲ್ ಉಡುಪಿ ಗಾರ್ಡನ್ ಮಾಲೀಕ ರಾಮ್ ಪ್ರಸಾದ್ ಕಾಸರಗೋಡು ಮಾತನಾಡಿದರು. ಸಮಾಜ ಸೇವೆಗಾಗಿ ಝುಲ್ಫಿಕರ್ ಅಲಿ, ಮಾಧ್ಯಮ ಕ್ಷೇತ್ರದಲ್ಲಿ ಗಂಗಾಧರ್ ಯಾದವ್, ಕನ್ನಡ ಸೇವೆಗಾಗಿ ಶಿವರಾಮ ಕಾಸರಗೋಡು ಇವರನ್ನು ಪೇಟ, ಶಾಲು, ಹಾರ, ಫಲವಸ್ತು, ಫಲಕಗಳೊಂದಿಗೆ ಸನ್ಮಾನಿಸಲಾಯಿತು.


ಕಾಸರಗೋಡಿನಲ್ಲಿ ಕನ್ನಡ ಹೋರಾಟ ವಿಚಾರದ ಬಗ್ಗೆ ರಾಧಾಕೃಷ್ಣ ಉಳಿಯತಡ್ಕ ಹಾಗೂ ಕಾಸರಗೋಡಿನಲ್ಲಿ ಕನ್ನಡದ ಸ್ಥಿತಿಗತಿ ಈ ವಿಚಾರದ ಕುರಿತಾಗಿ ಎಸ್.ಎನ್. ಭಟ್ ಸೈಪಂಗಲ್ ಉಪನ್ಯಾಸ ನೀಡಿದರು.



ಡಾ. ಬೇ.ಸಿ. ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ರುದ್ರಮ್ಮ ಎಸ್ ವಜ್ರಬಂಡಿ ರಾಯಚೂರು, ಉಮಾದೇವಿ ಬಸನಗೌಡ ರಾಯಚೂರು, ಮಲ್ಲಿಕಾ ಎಂ ಜಾಲವಾಡಗಿ ರಾಯಚೂರು, ಬೀರಪ್ಪ ಶಂಬೋಜಿ ಸಿಂಧನೂರ ರಾಯಚೂರು, ಅಂಬಿಕಾ ಗುಂಡಪ್ಪ ರಾಯಚೂರು, ಮುತ್ತಕ್ಕ ಬೆನಕನಹಳ್ಳಿ ಹಾವೇರಿ, ಬಸಮ್ಮ ಹಿರೇಮಠ ರಾಯಚೂರು, ಪ್ರಣತಿ ಎನ್, ವೆಂಕಟ ಭಟ್ ಎಡನೀರು, ನರಸಿಂಹ ಭಟ್ ಏತಡ್ಕ,  ಜಿ. ವೀರೇಶ್ವರ ಭಟ್ ಕರ್ಮರ್ಕರ್, ಡಾಕ್ಟರ್ ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು, ವಿರಾಜ್ ಅಡೂರು, ಸುಶೀಲ ಪದ್ಯಾಣ ನೀರ್ಚಾಲು, ಪದ್ಮಾವತಿ ಕೆದಿಲಾಯ, ನರೇಂದ್ರ ಕುಮಾರ್, ಗಂಗಾಧರ್ ಗಾಂಧಿ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ಭಾಗವಹಿಸಿದ್ದರು.




ಸೌಮ್ಯ ಶ್ರೀಕಾಂತ್ ಮತ್ತು ಸೌರಮ್ಯ ಸೈಜು ಮಧೂರು ತಂಡ ದವರಿಂದ ಸಿಂಚನ ಮತ್ತು ಡಾಕ್ಟರ್ ವಾಣಿಶ್ರೀ ಕಾಸರಗೋಡು ಮತ್ತು ಗುರುರಾಜ್ ನೇತೃತ್ವದ ಗಡಿನಾಡ ಸಾಂಸ್ಕೃತಿಕ ಸಂಘ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀರಕ್ಷಾ ಸರ್ಪಂಗಳ ಮತ್ತು ತಂಡದವರಿಂದ ಗೀತ ಗಾಯನ ಹಾಗೂ ಸಮೂಹ ಗಾಯನ ನಡೆಯಿತು. ಕೆಎಸ್‌ಎಸ್‌ ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಪ್ರಾಸ್ತಾವಿಕ ಮಾತನಾಡಿದರು. ಗಂಗಾಧರ್ ಗಾಂಧಿ ವಂದಿಸಿದರು.



ದಿವ್ಯಾ ಗಟ್ಟಿ ಪರಕ್ಕಿಲ, ನವ್ಯ ಶ್ರೀ ಸ್ವರ್ಗ ಮತ್ತು ರೇಖಾ ಸುದೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top