ಮಂಗಳೂರು: ಅಳಪೆ ಕಣ್ಣೂರಿನ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಕಾಲದ ಮುಂಡಿತ್ತಾಯ ವೈದ್ಯನಾಥ ದೈವಸ್ಥಾನದ ಜೀರ್ಣೋದ್ಧಾರವು ಆಗುತ್ತಲಿದ್ದು ಅದಕ್ಕೆ ಪೂರಕವಾಗಿ ದೈವಸ್ಥಾನದ ತಡೆಗೋಡೆ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಅಗತ್ಯವಿದ್ದ 75 ಲಕ್ಷ ರೂ.ವನ್ನು ಒದಗಿಸಿಕೊಟ್ಟಿದ್ದ ಕ್ಷೇತ್ರದ ಜನಪ್ರಿಯ ಶಾಸಕ ವೇದವ್ಯಾಸ್ ಕಾಮತ್ ಅವರು ಅದರ ಕಾಮಗಾರಿಗೆ ಚಾಲನೆಯನ್ನು ನೀಡಿದರು.
ದೈವಸ್ಥಾನದ ಜೀರ್ಣೋದ್ಧಾರಕ್ಕೆ ಮೂರುವರೆ ಕೋಟಿ ಅನುದಾನ ಆಗತ್ಯವಿದ್ದು ಈಗಾಗಲೇ ಶಾಸಕರು ಸರ್ಕಾರದ 15ನೇ ಹಣಕಾಸಿನ ಅನುದಾನದಲ್ಲಿ 75 ಲಕ್ಷ ಒದಗಿಸಿ ಕೊಟ್ಟಿದ್ದು ಉಳಿದ 25 ಲಕ್ಷವನ್ನೂ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದು ಕ್ಷೇತ್ರದ ಪರವಾಗಿ ಅವರಿಗೆ ಧನ್ಯವಾದಗಳು. ಮುಂದುವರೆದು ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳಿಗೂ ಸಹಾಯವನ್ನು ಒದಗಿಸಿ ಕೊಡುವುದಾಗಿ ಶಾಸಕರು ಹೇಳಿದ್ದು ಅವರಿಗೆ ನಾವು ಆಭಾರಿಯಾಗಿದ್ದೇವೆ.
ಇದೇ ಸಂದರ್ಭದಲ್ಲಿ ಮ.ನ.ಪಾ ಸದಸ್ಯರಾದ ಚಂದ್ರಾವತಿ ವಿಶ್ವನಾಥ್ ರೂಪಲಕ್ಷ್ಮೀ ಪೂಜಾರಿ ಅವರಿಗೂ ಧನ್ಯವಾದಗಳು ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯು ತಿಳಿಸಿತು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮುಂಡಿತ್ತಾಯ ವೈದ್ಯನಾಥ ದೇವಸ್ಥಾನದ ಆಡಳಿತ ಮುಕ್ತೇಸರಾದ ಶ್ರೀ ಸತೀಶ್ ರೈ ಬಡಿಲಗುತ್ತು, ಕಮಿಟಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ