ಆದಿಚುಂಚನಗಿರಿ ಶ್ರೀ ಕ್ಷೇತ್ರದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಸದ್ಬಕ್ತರಿಂದ ದಸರಾ-ನವರಾತ್ರಿ ವಿಶೇಷ ಪೂಜೆ

Upayuktha
0



ಕೆ.ಆರ್.ಪೇಟೆ: ಆದಿಚುಂಚನಗಿರಿ ಶ್ರೀ ಕ್ಷೇತ್ರದಲ್ಲಿ ಕೆ.ಆರ್. ಪೇಟೆ ತಾಲ್ಲೂಕಿನ ಹೇಮಗಿರಿ ಶಾಖಾ ಮಠದ ವತಿಯಿಂದ  ದಸರಾ-ನವರಾತ್ರಿ  ವಿಶೇಷ ಪೂಜಾ ಮಹೋತ್ಸವ ನಡೆಯಿತು.



ಕೆ.ಆರ್. ಪೇಟೆ ತಾಲ್ಲೂಕಿನ ಸದ್ಬಕ್ತರಿಂದ ಆಯೋಜಿಸಿದ್ದ ನವರಾತ್ರಿ ಪೂಜಾ ಮಹೋತ್ಸವದಲ್ಲಿ ಹೇಮಗಿರಿ ಶಾಖಾ ಮಠದ ಮುಖ್ಯ ಕಾರ್ಯದರ್ಶಿಗಳಾದ ಡಾ.ಜೆ.ಎನ್. ರಾಮಕೃಷ್ಣೇಗೌಡರ ನೇತೃತ್ವದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಶ್ರೀ ಕ್ಷೇತ್ರದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ನಿರ್ಮಲಾನಂದನಾಥಸ್ವಾಮೀಜಿಯವರ ಆಶೀರ್ವಾದ ಪಡೆದು ನವರಾತ್ರಿ ಉತ್ಸವದಲ್ಲಿ ಮಿಂದು ಸಂಭ್ರಮಿಸಿದರು.



ಈ ವೇಳೆ ಆಶೀರ್ವಚನ ನೀಡಿದ ಶ್ರೀ ನಿರ್ಮಲಾನಂದನಾಥಸ್ವಾಮೀಜಿಯವರು ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಪಾರ್ವತಿಯ ಅವತಾರವಾದ ಶೈಲಪುತ್ರಿಯನ್ನು ಮಹಾಕಾಳಿಯ ನೇರ ಅವತಾರವೆಂದು ಪರಿಗಣಿಸಲಾಗಿದೆ. ದಿನದ ಬಣ್ಣವು ಹಳದಿಯಾಗಿದೆ. ಶೈಲಪುತ್ರಿಯನ್ನು ಹೇಮಾವತಿ ಎಂದೂ ಸಹ ಕರೆಯಲಾಗುತ್ತದೆ. ಎರಡನೇ ದಿನ ಬ್ರಹ್ಮಚಾರಿಣಿ. ಪಾರ್ವತಿಯ ಇನ್ನೊಂದು ಅವತಾರವಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಈ ರೂಪದಲ್ಲಿ, ಪಾರ್ವತಿ ಯೋಗಿನಿಯಾದಳು, ಅವಳ ಅವಿವಾಹಿತ ಸ್ವಯಂ. ಬ್ರಹ್ಮಚಾರಿಣಿಯನ್ನು ವಿಮೋಚನೆ ಅಥವಾ ಮೋಕ್ಷಕ್ಕಾಗಿ ಮತ್ತು ಶಾಂತಿ ಮತ್ತು ಸಮೃದ್ಧಿಯ ದತ್ತಿಗಾಗಿ ಪೂಜಿಸಲಾಗುತ್ತದೆ. ಹಸಿರಿನಿಂದ ಸಿಂಗರಿಸಿದ ಬ್ರಹ್ಮಚಾರಿಣಿ ಆನಂದ ಮತ್ತು ಶಾಂತತೆಯನ್ನು ಕರುಣಿಸುವ ಶಕ್ತಿಯನ್ನು ಹೊಂದಿದ್ದಾಳೆಂದು ಪೂಜಿಸುತ್ತೇವೆ. ಮೂರನೇ ದಿನ ಚಂದ್ರಘಂಟ ಶಿವನನ್ನು ಮದುವೆಯಾದ ನಂತರ, ಪಾರ್ವತಿಯು ತನ್ನ ಹಣೆಯನ್ನು ಅರ್ಧಚಂದ್ರ (ಬೆಳಕು. ಅರ್ಧಚಂದ್ರ) ನೊಂದಿಗೆ ಅಲಂಕರಿಸಿದ ಕಾರಣದಿಂದ ಈ ಹೆಸರು ಬಂದಿದೆ. ಅವಳು ಸೌಂದರ್ಯದ ಮೂರ್ತರೂಪವಾಗಿದ್ದಾಳೆ ಮತ್ತು ಶೌರ್ಯದ ಸಂಕೇತವೂ ಆಗಿದ್ದಾಳೆ. ಬೂದು ಬಣ್ಣವು ಮೂರನೇ ದಿನದ ಬಣ್ಣವಾಗಿದೆ, ನಾಲ್ಕನೇ ದಿನ  ಕೂಷ್ಮಾಂಡಿನಿ ಬ್ರಹ್ಮಾಂಡದ ಸೃಜನಶೀಲ ಶಕ್ತಿ ಎಂದು ನಂಬಲಾಗಿದೆ, ಕೂಷ್ಮಾಂಡವು ಭೂಮಿಯ ಮೇಲಿನ ಸಸ್ಯವರ್ಗದ ದತ್ತಿಯೊಂದಿಗೆ ಸಂಬಂಧಿಸಿದೆ ಮತ್ತು ಆದ್ದರಿಂದ, ದಿನದ ಬಣ್ಣವು ಕಿತ್ತಳೆ ಬಣ್ಣದ್ದಾಗಿದೆ ಎಂದು ವಿವರಿಸಿದರು.


ಐದನೇ ದಿನ ಸ್ಕಂದಮಾತಾ: ಪೂಜಿಸುವ ದೇವತೆ  ತಾಯಿ. ಬಿಳಿ ಬಣ್ಣವು ತನ್ನ ಮಗು ಅಪಾಯವನ್ನು ಎದುರಿಸಿದಾಗ ತಾಯಿಯ ರೂಪಾಂತರದ ಶಕ್ತಿಯನ್ನು ಸಂಕೇತಿಸುತ್ತದೆ. ಆರನೇ ದಿನ ಕಾತ್ಯಾಯನಿ, ಕಾತ್ಯಾಯನ ಋಷಿಗೆ ಜನಿಸಿದ ಅವಳು ದುರ್ಗೆಯ ಅವತಾರವಾಗಿದ್ದು, ಕೆಂಪು ಬಣ್ಣದಿಂದ ಸಂಕೇತಿಸಲ್ಪಟ್ಟ ಧೈರ್ಯವನ್ನು ಪ್ರದರ್ಶಿಸುತ್ತಾಳೆ.


ಏಳನೇ ದಿನದಂದು ಕಾಳರಾತ್ರಿ ಪೂಜೆ ಸಲ್ಲಿಸಲಾಗುವುದು. ದುರ್ಗಾ ದೇವಿಯ ಅತ್ಯಂತ ಉಗ್ರ ರೂಪವೆಂದು ಪರಿಗಣಿಸಲ್ಪಟ್ಟಿರುವ ಕಾಳರಾತ್ರಿಯನ್ನು ಸಪ್ತಮಿಯಂದು ಪೂಜಿಸಲಾಗುತ್ತದೆ. ದುಷ್ಟರನ್ನು ಸಂಹರಿಸುವ ದಿನವೆಂದು ಕೆಂಪು ಬಣ್ಣದಲ್ಲಿ ಸಿಂಗಾರಗೊಂಡು  ದೇವಿಯು ಅವತರಿಸಿದಳೆಂದು ಉಲ್ಲೆಖಿಸಲಾಗಿದೆ. ಎಂಟನೇ ದಿನದಂದು  ಮಹಾಗೌರಿ- ಬುದ್ಧಿವಂತಿಕೆ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ. ಈ ದಿನಕ್ಕೆ ಸಂಬಂಧಿಸಿದ ಬಣ್ಣವು ಗುಲಾಬಿ ಬಣ್ಣದ್ದಾಗಿದ್ದು ಅದು ಆಶಾವಾದವನ್ನು ಚಿತ್ರಿಸುತ್ತದೆ. ಚಾಮುಂಡಿಯ  ಮಹಿಷಾಸುರ ಮರ್ದಿನಿ ರೂಪದ ಜನ್ಮದಿನವೆಂದು ಪರಿಗಣಿಸಲಾಗುತ್ತದೆ.


ಒಂಭತ್ತನೇ ದಿನ ಸಿದ್ಧಿದಾತ್ರಿ ಎಂದೂ ಕರೆಯಲ್ಪಡುವ ಹಬ್ಬದ ಕೊನೆಯ ದಿನದಂದು ಜನರು ಸಿದ್ಧಿಧಾತ್ರಿಯನ್ನು ಪ್ರಾರ್ಥಿಸುತ್ತಾರೆ. ಕಮಲದ ಮೇಲೆ ಕುಳಿತು, ಅವಳು ಎಲ್ಲಾ ರೀತಿಯ ಸಿದ್ಧಿಗಳನ್ನು ಹೊಂದುತ್ತಾಳೆ ಮತ್ತು ದಯಪಾಲಿಸುತ್ತಾಳೆ ಎಂದು ನಂಬಲಾಗಿದೆ. ಒಂಭತ್ತನೇ ದಿನ ನೇರಳೆ ಬಣ್ಣವು ಪ್ರಕೃತಿಯ ಸೌಂದರ್ಯದ ಬಗ್ಗೆ ಅಭಿಮಾನವನ್ನು ಚಿತ್ರಿಸುತ್ತದೆ. ಸಿದ್ಧಿದಾತ್ರಿಯು ಶಿವನ ಪತ್ನಿ ಪಾರ್ವತಿ. ಸಿದ್ಧಿಧಾತ್ರಿಯನ್ನು ಶಿವ ಮತ್ತು ಶಕ್ತಿಯ ಅರ್ಧನಾರೀಶ್ವರ ರೂಪವಾಗಿಯೂ ನೋಡಲಾಗುತ್ತದೆ. ಭಗವಾನ್ ಶಿವನ ದೇಹದ ಒಂದು ಪಾರ್ಶ್ವವು ಸಿದ್ಧಿದಾತ್ರಿ ದೇವಿಯದ್ದು ಎಂದು ನಂಬಲಾಗಿದೆ. ಆದ್ದರಿಂದ ಅವನನ್ನು ಅರ್ಧನಾರೀಶ್ವರ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ವೈದಿಕ ಗ್ರಂಥಗಳ ಪ್ರಕಾರ, ಶಿವನು ಈ ದೇವಿಯನ್ನು ಆರಾಧಿಸುವ ಮೂಲಕ ಎಲ್ಲಾ ಸಿದ್ಧಿಗಳನ್ನು ಪಡೆದನು ಎಂದು ತಿಳಿಯಲಾಗಿದೆ. ಒಂಭತ್ತನೇ ದಿನದಂದು ಭಾರತದ ವಿವಿಧ  ಭಾಗಗಳಲ್ಲಿ, ಆಯುಧ ಪೂಜೆ ಮಾಡಲಾಗುತ್ತದೆ.  ಆಚರಣೆಯಲ್ಲಿ ಉಪಕರಣಗಳು ಮತ್ತು ಆಯುಧಗಳನ್ನು ಪೂಜಿಸಲಾಗುತ್ತದೆ. ಹೀಗೆ ಒಂಭತ್ತು ದಿನಗಳ ಕಾಲ ನಡೆಯುವ ನವರಾತ್ರಿ ಪೂಜಾ ಮಹೋತ್ಸವು ಭಕ್ತರ ಪಾಲಿಗೆ ಅತ್ಯಂತ ಪವಿತ್ರ ದಿನಗಳಾಗಿರುತ್ತವೆ ಎಂದು ನಿರ್ಮಲಾನಂದನಾಥ ಶ್ರೀಗಳು ನವರಾತ್ರಿಯ ವಿಶೇಷತೆಯನ್ನು ತಿಳಿಸಿದರು.


ಈ ನವರಾತ್ರಿ ವಿಶೇಷ ಪೂಜಾ  ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಶಾಸಕ ಹೆಚ್.ಟಿ.ಮಂಜು ಸಹೋದರ ಹೆಚ್.ಟಿ.ಲೋಕೇಶ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್.ಬಸವೇಗೌಡ, ಟಿಎಪಿಸಿಎಂಎಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ನಂಜಪ್ಪ, ಜಿ.ಪಂ.ಮಾಜಿ ಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ, ತಾಲ್ಲೂಕು ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್, ಟಿಎಪಿಸಿಎಂಎಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ನಂಜಪ್ಪ, ತಾಲ್ಲೂಕು ಕುವೆಂಪು ಸೇವಾ ಟ್ರಸ್ಟಿನ ಅಧ್ಯಕ್ಷ ಕೆ.ಬಿ.ಸಿ ಮಂಜುನಾಥ್, ಕರುನಾಡು ಯುವಜನ ವೇದಿಕೆ ಮಂಡ್ಯ ಜಿಲ್ಲಾಧ್ಯಕ್ಷ ಎಸ್.ರವಿ, ತಾಲ್ಲೂಕು ಅಧ್ಯಕ್ಷ ಯುವರಾಜ್, ಮುಖಂಡರಾದ ಚಟ್ಟಂಗೆರೆ ನಾಗೇಶ್, ಬಸ್ ಸಂತೋಷ್, ಕಿಕ್ಕೇರಿ ಸುರೇಶ್, ಕಸಾಪ ಮಾಜಿ ಅಧ್ಯಕ್ಷರಾದ ಕೆ.ಆರ್.ನೀಲಕಂಠ, ಕಸಾಪ ಮಾಜಿ ಕಾರ್ಯಾಧ್ಯಕ್ಷ  ಬಳ್ಳೇಕೆರೆ ಮಂಜುನಾಥ್, ಗ್ರಾ.ಪಂ.ಸದಸ್ಯ ಅಗ್ರಹಾರಬಾಚಹಳ್ಳಿ  ಆರ್. ಶ್ರೀನಿವಾಸ್, ರಾಜ್ಯ ರೈತ ಸಂಘ ರೈತ ಬಣದ ತಾಲ್ಲೂಕು  ಅಧ್ಯಕ್ಷ ಹರೀಶ್ ಡಿ.ಎಸ್.ದೊದ್ದನಕಟ್ಟೆ, ಉಪಾಧ್ಯಕ್ಷ ವಸಂತ್, ಯುವ ಘಟಕದ ಅಧ್ಯಕ್ಷ  ರೋಹಿತ್, ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಕೂಡಲಕುಪ್ಪೆ, ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ಘಟಕದ ಅಧ್ಯಕ್ಷ ಕೆ.ಎಲ್.ಮಹೇಶ್, ಯೋಗೇಶ್, ಹೊಸಹೊಳಲು ಹರೀಶ್, ರಾಘು, ಕ್ಯಾಂಟೀನ್ ದಿಲೀಪ್, ಸೇರಿದಂತೆ ನೂರಾರು ಗಣ್ಯರು, ಸಾವಿರಾರು ಭಕ್ತಾದಿಗಳು ದಸರಾ-ನವರಾತ್ರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top