ಕಲಬುರಗಿ: ಕಲಬುರಗಿ ಜಿಲ್ಲೆ ಹಾಗೂ ಕಲಬುರಗಿ ತಾಲೂಕಿನ ಗರೂರ (ಬಿ) ಗ್ರಾಮದಲ್ಲಿ ಗೋವುಗಳಿಂದ ಸಿಗುವಂತಹ ಗೋಮಯ ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರಿಸಲಾಗುತ್ತಿದೆ. ಹಿಂದೆ ನಮ್ಮ ಪೂರ್ವಜರು ಸಗಣಿಯ ಉಂಡೆಯನ್ನು ಇಟ್ಟು ಅದರ ಮೇಲೆ ಗರಿಕೆಯನ್ನು ಇಟ್ಟು ಗಣಪ ಎಂದು ಪೂಜಿಸುತ್ತ ಇದ್ದರು. ಓಡಾಡುವ ಜಾಗದಲ್ಲೂ ಕೂಡ ಈ ರೀತಿ ಇಡುತ್ತಲಿದ್ದರು. ಈ ರೀತಿ ಇಡುವುದರಿಂದ ನೆಗೆಟಿವ್ ಎನರ್ಜಿ ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ ಹಾಗೂ ರೇಡಿಯೇಶನ್ ಪ್ರಭಾವ ಕೂಡ ಬೀರುವುದಿಲ್ಲ. ಆದರೆ ಈಗ ಪಿಒಪಿ ಗಣಪತಿ ವಿಗ್ರಹಗಳನ್ನು ಕೂರಿಸಿ ಪರಿಸರಕ್ಕೆ ಬಹಳಷ್ಟು ಮಾಲಿನ್ಯವಾಗುತ್ತಿರುವುದನ್ನು ನೋಡುತ್ತಿದ್ದೇವೆ.
ರಾಸಾಯನಿಕ ಮಿಶ್ರಿತ ಗಣೇಶಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿ ಕೆರೆಯನ್ನು ಕಲುಷಿತಗೊಳಿಸುವುದನ್ನು ತಡೆಗಟ್ಟಲು ಹಾಗೂ ನಗರದ ಜನರಲ್ಲಿ ಪರಿಸರ ಕಾಳಜಿ ಮೂಡಿಸುವುದರೊಂದಿಗೆ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಜನರನ್ನು ಭಾಗಿಯಾಗಿಸಿಕೊಳ್ಳಲು ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆಯು ಪರಿಸರ ಸ್ನೇಹಿ ಗೋಮಯ ಗಣಪತಿ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಗೋಮಯ ಗಣಪತಿ ಮೂರ್ತಿ ಯಾವುದೇ ರೀತಿಯಿಂದ ರಾಸಾಯನಿಕ ಬಳಸಿಕೊಂಡು ಮಾಡಿರುವಂತಹದು ಅಲ್ಲ. ಗೋವುಗಳಿಂದ ಸಿಗುವಂತಹ ಗೋಮಯ (ಸಗಣಿ) ಬಳಸಿಕೊಂಡು ಮಾಡಲಾಗಿದೆ. ಇದು ಮನೆಯಲ್ಲಿ ವಿಸರ್ಜನೆ ಮಾಡಿದರೆ ಗೊಬ್ಬರವಾಗುತ್ತದೆ ಅಥವಾ ಕೆರೆಯಲ್ಲಿ ವಿಸರ್ಜನೆ ಮಾಡಿದರೆ ಜಿವಿಗಳಿಗೆ ಆಹಾರವಾಗುತ್ತದೆ ಹೊರತು ಪರಿಸರಕ್ಕೆ ಹಾನಿಯಾಗುವುದಿಲ್ಲ. ಅದೆ ರೀತಿ ಗೋಮಯ, ಗೋ ಮೂತ್ರ, ಹಾಲು, ಮೊಸರು, ತುಪ್ಪವನ್ನು ಸೇರಿಸಿ ಪಂಚಗವ್ಯ ಗಣಪ ಕೂಡ ಮಾಡಲಾಗುತ್ತಿದೆ.
ಪಂಚಗವ್ಯ ಗಣಪ ಮಾಡುವ ವಿಧಾನ:
ಮೊದಲಿಗೆ ಆಕಳ ಸಗಣಿಯನ್ನು ಚನ್ನಾಗಿ ಒಣಗಿಸಿ ಅದನ್ನು ಪುಡಿಮಾಡಿ ಎರದುಬಾರಿ ಜರಡಿ ಹಿಡಿದು ಅದರೊಂದಿಗೆ ಗೋ ಮೂತ್ರ, ಹಾಲು, ಮೊಸರು, ತುಪ್ಪ ಯುಗಳನ್ನು ಬೆರೆಸಿ ಚೆನ್ನಾಗಿ ಹದಗೊಳಿಸಿ ಬೇಕಾದ ಗಣಪತಿ ಅಚ್ಚು ಹಾಕಿ ಹದಿನೈದು ದಿನಗಳಕಾಲವರೆಗೆ ನೆರಳಿನಲ್ಲಿ ಒಣಗಿಸಲಾಗುವುದು ನಂತರ ಅಲಂಕಾರಿಕ ವಾಗಿ ಕಣ್ಣು,ಹಲ್ಲುಗಳಿಗೆ ಬಣ್ಣಹಚ್ಚಿದರೆ ಪರಿಸರ ಸ್ನೇಹಿ ಗೋಮಯ ಗಣಪ ಸಿದ್ದ. ಗೋಮಯ ಮೂರ್ತಿಗಳಿಗಾಗಿ ಸಂಪರ್ಕಿಸಿ ಶಿವರಾಜಕುಮಾರ ಎನ್.ಹಳ್ಳಿ 80950077278
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ