ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಭಕ್ತಿಗೀತೆ ರಸಮಂಜರಿ

Upayuktha
0


ಸುಳ್ಯ: ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾ ಬಂಧನದ ಪ್ರಯುಕ್ತ ಗಾಯಕ ಎಚ್. ಭೀಮರಾವ್ ವಾಷ್ಠರ್ ನೇತೃತ್ವದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಭಕ್ತಿಗೀತೆ ರಸಮಂಜರಿ ಕಾರ್ಯಕ್ರಮವು 2 ಗಂಟೆ ಗಳಿಗೂ ಹೆಚ್ಚು ಕಾಲ  ನೆರವೇರಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬಿ.ಕೆ ಉಮಾದೇವಿ ಉದ್ಘಾಟಿಸಿದರು.


ಈ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಗಾಯಕರಾದ ಪುಷ್ಪಾ ಆರ್ ಡಿ ಎಡಮಂಗಲ, ಪಲ್ಲವಿಶ್ರೀ ಆಲೆಟ್ಟಿ, ಮಾಸ್ಟರ್ ಚೆನ್ನಕೇಶವ, ಕೃಷ್ಣವೇಣಿ ಐವರ್ನಾಡು ಭಕ್ತಿಗೀತೆಗಳನ್ನು ಹಾಡಿದರು. ಈ ಕಾರ್ಯಕ್ರಮದ ಮಧ್ಯೆ ದಾವಣಗೆರೆಯ ಅಕ್ಕನವರಾದ ಬಿ ಕೆ ಲೀಲಾದೇವಿ ಅವರು ರಕ್ಷಾಬಂಧನದ ಬಗ್ಗೆ ಪ್ರವಚನ ನೀಡಿದರು. ಅಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಹಣೆಗೆ ಗಂಧ ಹಚ್ಚಿ ರಕ್ಷಾಬಂಧನ ಕಟ್ಟಿ ಸಿಹಿ ನೀಡಿ ಆಶೀರ್ವದಿಸಿದರು. 


ಕಾರ್ಯಕರ್ತರಾದ ಬಿ ಕೆ ಉಮೇಶ್ ಆಚಾರ್ಯ ಜಟ್ಟಿಪಳ್ಳರವರು ಸ್ವಾಗತಿಸಿ ವಂದಿಸಿದರು. ಸಾಹಿತಿ ಜ್ಯೋತಿಷಿ ಸಂಘಟಕರಾದ ಭೀಮರಾವ್ ವಾಷ್ಟರ್ ಅವರು ಹಲವು ಭಕ್ತಿಗೀತೆಗಳನ್ನು ಹಾಡಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಮಾಜದ ಪದಾಧಿಕಾರಿಗಳು ಸದಸ್ಯರು ಮತ್ತು ಇನ್ನಿತರ ಸಂಘದ ಜನರು ಹಾಗೂ ಭಕ್ತರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top