ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಓಣಂ ಹಬ್ಬ "ಆರವಂ"ವನ್ನು 2023 ರ ಆಗಸ್ಟ್ 23 ರಂದು ಪಾಂಡೇಶ್ವರ ಸಿಟಿ ಕ್ಯಾಂಪಸ್ನಲ್ಲಿ ಸಂಭ್ರಮ ಮತ್ತು ವೈಭವದಿಂದ ಆಚರಿಸಿತು.
ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಡೀನ್ ಡಾ.ರಾಜಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಅಭಿವೃದ್ಧಿ ರಿಜಿಸ್ಟರ್ ಡಾ. ಅಜಯ್ ಕುಮಾರ್ ಸೇರಿದಂತೆ ಗಣ್ಯರು, ಗೌರವಾನ್ವಿತ ಪ್ರಾಧ್ಯಾಪಕರು ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಆಚರಣೆ ನಡೆಯಿತು.
ಕಾರ್ಯಕ್ರಮವು ನೃತ್ಯ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು, ಪ್ರತಿಭಾವಂತ ಕಲಾವಿದರು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ರೋಮಾಂಚಕ ಸಂಗೀತ , ಹಗ್ಗಜಗ್ಗಾಟದ ಸ್ಪರ್ಧೆ ಗಮನ ಸೆಳೆಯಿತು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪುಗಳು ಮತ್ತು ಆಧುನಿಕ ಉಡುಪುಗಳನ್ನು ಧರಿಸಿ ಆತ್ಮವಿಶ್ವಾಸದಿಂದ ರ್ಯಾಂಪ್ ವಾಕ್ ಮಾಡಿದರು.
ಸಧ್ಯಂ ಎಂದು ಕರೆಯಲ್ಪಡುವ ಕೇರಳದ ಸಾಂಪ್ರದಾಯಿಕ ಔತಣವನ್ನು ಬಡಿಸಲಾಯಿತು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆನಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ