ಪುತ್ತೂರು: ವಿದ್ಯಾಭಾರತಿ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ತಂಡ ದ್ವಿತೀಯ

Upayuktha
0


ಪುತ್ತೂರು:
ನೆಹರೂನಗರದ ವಿವೇಕಾನಂದ ಸಿ ಬಿ ಎಸ್ ಸಿ ಶಾಲೆಯಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದೆ. 


ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಯಶಸ್ ಎಸ್, ವಿನೋಭ ಭಾವೆ,  ಅನುಷ್ ಕೆ. ಎನ್, ಅರ್ಜುನ್ ಕೆ.ಎಚ್, ವಾಣಿಜ್ಯ ವಿಭಾಗದ ಶಶಿಕಾಂತ್, ರಂಜಿತ್ ಬಿ ಎಂ, ಜೀತೆಶ್  ಜೆ ಎಸ್ , ಪ್ರಥಮ ಪಿಯುಸಿ ವಿಜ್ಞಾನ  ವಿಭಾಗದ ಸತೀರ್ಥ್,ಅತೀಥ್, ವಿಶ್ರುತ್ ಎನ್, ಪ್ರವೀಣ್ ರಾಜ್, ಜೀವನ್ ಕೆ, ಶಮಂತ್ ಬಿ ಎಲ್, ವಾಣಿಜ್ಯ ವಿಭಾಗದ ಹಾರ್ದಿಕ್ ಬಿ ಆರ್, ದೀಕ್ಷಿತ್ ಎಸ್ ಎಸ್, ಲಿಖಿತ್ ಪಿ, ಪುನೀತ್, ಚಿಂತನ್ ಭಾಗವಹಿಸಿದ್ದರು. 


ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top