ಭಾರತದ ನಾಳೆಗಳು ಇಂದಿನ ಯುವಜನತೆಯ ಮೇಲೆ ಅವಲಂಬಿತ: ಪ್ರೊ. ಸತ್ಯಂ ಸುವಾಸ್

Upayuktha
0

ಮೂಡುಬಿದಿರೆ: ಸಣ್ಣ ಆವಿಷ್ಕಾರಗಳು ದೊಡ್ಡ ಬದಲಾವಣೆತರಲು ಸಾಧ್ಯ. ಹೊಸ ಆವಿಷ್ಕಾರಗಳನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದರಿಂದ ವಿಜ್ಞಾನಕ್ಷೇತ್ರಕ್ಕೆ ಕೊಡುಗೆಯಾಗಬಲ್ಲದು ಎಂದು ಇಂಡಿಯನ್‍ ಇನ್ಸ್ಟಿಟ್ಯೂಟ್‍ ಆಫ್ ಸೈನ್ಸ್ ನ ಮೆಟೀರಿಯಲ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಸತ್ಯಂ ಸುವಾಸ್ ಹೇಳಿದರು.     


ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದ 46ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್‍ಗಳ ವಿಚಾರ ಸಂಕಿರಣ ಮತ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಾಂತ್ರಿಕಜ್ಞಾನ ಹೊಂದಿರುವ ಯುವಜನತೆ ದೇಶದ ಬೆಳವಣಿಗೆಗೆ ಉತ್ತಮ ಕೊಡುಗೆ. ವಿದ್ಯಾರ್ಥಿಗಳ ಆಸಕ್ತಿ ಹೊಸ ಆವಿಷ್ಕಾರಗಳನ್ನು ಹುಟ್ಟು ಹಾಕಿದೆ. ಪ್ರತಿಯೊಂದು ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸಿದಾಗ ದೇಶ ಅಭಿವೃದ್ಧಿ ಹೊಂದುತ್ತದೆ. ಭಾರತದ ನಾಳೆಗಳು ಇಂದಿನ ಯುವ ಜನತೆಯ ಮೇಲೆ ಅವಲಂಬಿತವಾಗಿದೆ ಎಂದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಎಸ್‍ಸಿಎಸ್‍ಟಿ ಕಾರ್ಯದರ್ಶಿ ಪ್ರೊ. ಅಶೋಕ್ ಎಂ. ರಾಯಚೂರು ಮಾತನಾಡಿ ವಿದ್ಯಾರ್ಥಿಗಳ ಯೋಜನೆಗಳು ಸ್ಥಳೀಯ ಸಮಸ್ಯೆಗಳನ್ನು ಸರಿದೂಗಿಸಲು ಸಹಕಾರಿಯಾಗಿರುವುದು ವಿಶೇಷ. ಹೀಗಾಗಿ ದೇಶದ ಅಭಿವೃದ್ಧಿಗೆ ಇವು ಪೂರಕವಾಗಲಿವೆ ಎಂದರು.


ಕೆಎಸ್‍ಸಿಎಸ್‍ಟಿ ಕಾರ್ಯದರ್ಶಿ ಪ್ರೊ. ಅಶೋಕ್ ಎಂ. ಹಾಗೂ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಯು ಟಿ ವಿಜಯ್‍ ಅವರನ್ನು ಆಳ್ವಾಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿ ಪ್ರಾಜೆಕ್ಟ್‍ಗಳಲ್ಲಿ 28 ಉತ್ತಮ ಪ್ರದರ್ಶನಗೊಂಡ ಯೋಜನೆಗಳಿಗೆ ಹಾಗೂ 29 ಉತ್ತಮ ಸೆಮಿನಾರ್‍ಗಳಿಗೆ ಪ್ರಶಸ್ತಿ, ಪ್ರಮಾಣಪತ್ರ ಹಾಗೂ ನಗದು ಪುರಸ್ಕಾರ ನೀಡಲಾಯಿತು. ಬೆಂಗಳೂರಿನ ಆರ್‍ವಿ ಇಂಜಿನಿಯರಿಂಗ್‍ ಕಾಲೇಜು ಅತ್ಯುತ್ತಮ ಸಾಧನೆಗಾಗಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. 


ಕೆಎಸ್‍ಸಿಎಸ್‍ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಯು ಟಿ ವಿಜಯ್ ಸ್ವಾಗತಿಸಿದರು. ಆಳ್ವಾಸ್ ಇಂಜಿನಿಯರಿಂಗ್‍ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ವಂದಿಸಿದರು. ಕೆಎಸ್‍ಸಿಎಸ್‍ಟಿ ಸೀನಿಯರ್ ಪ್ರಾಜೆಕ್ಟ್‍ ಇಂಜಿನಿಯರ್ ಕೆ. ಎನ್ ವೆಂಕಟೇಶ್ ಪ್ರಶಸ್ತಿ ವಿಜೇತರನ್ನು ಘೋಷಿಸಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜೇಶ್‍ ಡಿಸೋಜ ನಿರೂಪಿಸಿದರು.


2 ದಿನ ನಡೆದ ವಿದ್ಯಾರ್ಥಿ ಯೋಜನೆಗಳ ಪ್ರದರ್ಶನದಲ್ಲಿ ಹಲವು ಯೋಜನೆಗಳು ವಿಶೇಷವಾಗಿ ಗಮನ ಸೆಳೆಯಿತು.. ವಿದ್ಯಾರ್ಥಿಗಳು ಆಸಕ್ತರಿಗೆ ಬಹಳ ಅಚ್ಚುಕಟ್ಟಾಗಿ ತಮ್ಮ ಯೋಜನೆಗಳನ್ನು ವಿವರಿಸಿದರು. 


ಅಣಬೆ ಕೃಷಿಗೂ ಬಂತು ಇಲೆಕ್ಟ್ರಾನಿಕ್ಸ್ ತಂತ್ರಜ್ಞಾನ..!

ಇತ್ತೀಚಿನ ದಿನಗಳಲ್ಲಿ ಅಣಬೆ ಕೃಷಿಗೆ ಹೆಚ್ಚಿನ ಬೇಡಿಕೆಯಿದೆ. ಅಣಬೆ ಕೃಷಿಗೆ ಸೂಕ್ತವಾದ ವಾತಾವರಣ ಹಾಗೂ ಹವಾಮಾನದ ಅಗತ್ಯವಿರುತ್ತದೆ.  ಕರಾವಳಿ ಭಾಗಗಳಲ್ಲಿ  ಅಣಬೆ ಬೆಳೆಯಲು ಬೇಕಾದ ವಾತಾವರಣ ಸ್ವಾಭಾವಿಕವಾಗಿಇಲ್ಲಿನ ಬಿಸಿಲು, ಮಳೆ ಹಾಗೂ ತೇವಾಂಶ ಭರಿತ ಹವಾಗುಣದಿಂದ ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್‍ ತಂತ್ರಜ್ಞಾನ ಬಳಸಿ ಆಳ್ವಾಸ್ ಇಂಜಿನಿಯರಿಂಗ್‍ ಕಾಲೇಜಿನ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗದ ಪ್ರಾಧ್ಯಾಪಕ ಸುಧಾಕರ್‍ ಎಚ್. ಎಮ್ ಮಾರ್ಗದರ್ಶನದಲ್ಲಿ    ವಿದ್ಯಾರ್ಥಿಗಳಾದ ಶಶಾಂಕ್‍ಎಸ್. ಕಶ್ಯಪ್, ಪ್ರತೀಕ್‍ಕುಮಾರ್, ಸಾತ್ವಿ ಹಾಗೂ ಸುಮಾ ಹೊಸ ಮಾದರಿಯೊಂದನ್ನು ರಚಿಸಿದ್ದಾರೆ.  ಈ ಮೂಲಕ ಅಣಬೆ ಕೃಷಿಗೂ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಈ ಯೋಜನೆಯಲ್ಲಿ ಡಿಎಚ್‍ಟಿ11 ಸೆನ್ಸಾರ್ ಬಳಸಿ ಉಷ್ಣತೆ ಹಾಗೂ ತೇವಾಂಶವನ್ನು ನಿಯಂತ್ರಿಸಹುದು. ಜಿಎಸ್‍ಎಮ್ ಮಾಡ್ಯೂಲ್ ಅಳವಡಿಸುವ ಮೂಲಕ, ನಾವಿರುವ ಸ್ಥಳದಿಂದಲೇ ಬ್ಲಿಂಕ್‍ಆ್ಯಪ್ ಮೂಲಕ ಅಣಬೆಯ ಬೆಳವಣಿಗೆಗೆ ಬೇಕಾದ ವಾತಾವರಣವನ್ನು ಅಗತ್ಯತೆಯನ್ನು ಪರಿಶೀಲಿಸಬಹುದು. ಒಟ್ಟಿನಲ್ಲಿ ವಿದ್ಯಾರ್ಥಿಗಳ ಈ ಯೋಜನೆಯ ಮುಖಾಂತರಯಾವುದೇ ಸ್ಥಳದಲ್ಲಿ ಅಣಬೆಕೃಷಿಯನ್ನು ನಿರಾಯಾಸವಾಗಿ ಮಾಡಬಹುದು. 


ಕೃಷಿ ನೀರಾವರಿಗೂ ವಿದ್ಯಾರ್ಥಿಗಳ ಸೊಲ್ಯೂಷನ್

ನದಿ ನೀರಾವರಿ ಯೋಜನೆಗಳನನು ಕೇಳಿಯೇ ಇರುತ್ತೇವೆ. ಇಲ್ಲೊಂದು ವಿದ್ಯಾರ್ಥಿಗಳ ತಂಡಕರ್ನಾಟಕದ ನದಿಗಳಲ್ಲೊಂದಾದ ವಾರಾಹಿ ನದಿ ಮೂಲದ ಮಾರ್ಫೋಮೆಟ್ರಿಕ್ ಅನಾಲಿಸಿಸ್ ಮೂಲಕ ನದಿಯ ಪರಿಮಾಣತ್ಮಕ (ಕ್ವಾಂಟಿಟೇಟಿವ್) ಆಧ್ಯಯನ ನಡೆಸಿ, ಆ ನದಿಗೆ ಎಲ್ಲೆಲ್ಲಿ ಅಣೆಕಟ್ಟುಗಳನ್ನು ಕಟ್ಟಬಹುದು ಮತ್ತು ಸಣ್ಣ ನೀರಾವರಿ ಯೋಜನೆಗಳನ್ನು ಕೈಗೊಳ್ಳಬಹುದೆಂಬ ವೈಜ್ಞಾನಿಕ ವರದಿಯನ್ನು ಸಿದ್ಧಪಡಿಸಿದೆ. ಈ ಯೋಜನೆಯ ಭಾಗವಾಗಿ, ರಿವರ್‍ರಿಫ್ಟಿಂಗ್‍ ತಂತ್ರಜ್ಞಾನದ ಮೂಲಕ ಸಂಡೂರುಡ್ಯಾಮ್‍ನಿಂದ 5000ಎಕರೆ ಕೃಷಿ ಭೂಮಿಗೆ ಬೇಸಿಗೆಯಲ್ಲೂ ನೀರು ಒದಗಿಸುವ ನಿಟ್ಟಿನಲ್ಲಿ, ಉಡುಪಿ ಜಿಲ್ಲಾ ಜಲ ಸಂವರ್ಧನಾ ನಿಧಿಗೆ ಈಗಾಗಲೇ ಒಂದು ಪ್ರಸ್ತಾವನೆ ನೀಡಲಾಗಿದೆ. ಪ್ರಸ್ತಾವನೆ ಯುಟೆಂಡರ್ ಹಂತದಲ್ಲಿದೆ ಎನ್ನುವುದು ವಿಶೇಷ. ಆಳ್ವಾಸ್ ಇಂಜಿನಿಯರಿಂಗ್‍ ಕಾಲೇಜಿನ ಡಾ. ಎಚ್. ಬಿ ಉಮೇಶ್‍ಅವರ ಮಾರ್ಗದರ್ಶನದಲ್ಲಿ ಧೀರಜ್ ಸಿಂಧೆ, ಅಬ್ದುಲ್ ಮಜೀದ್, ಕೃತಿಕ್ ಹಾಗೂ ಮನೋಹರ್ ಎಂಬ ನಾಲ್ವರು ವಿದ್ಯಾರ್ಥಿಗಳ ತಂಡ ಈ ಯೋಜನೆಯಲ್ಲಿ ಸಕ್ರಿಯವಾಗಿದ್ದಾರೆ.  


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top