ಹಾಸನ: ಹಾಸನದ ಮನೆ ಮನೆ ಕವಿಗೋಷ್ಠಿ ವತಿಯಿಂದ ಶಂಕರನಾರಾಯಣ ಡಿ.ಎಸ್. ನಿವೃತ್ತ ಶಿಕ್ಷಕರು ಇವರ ಪ್ರಾಯೋಜನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ, 2ನೇ ಮಹಡಿ, ಆರ್.ಸಿ.ರಸ್ತೆ, ಪಿ.ಡಬ್ಲ್ಯು.ಡಿ.ಕಛೇರಿ ಎದುರು, ಹಾಸನ ಇಲ್ಲಿ ದಿನಾಂಕ 3-9-2023ನೇ ಭಾನುವಾರ ಮದ್ಯಾಹ್ನ 3.30ಕ್ಕೆ 309ನೇ ತಿಂಗಳಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲ್ಲಿಜನಪದ ಸಾಹಿತ್ಯಕ್ಕೆ ದಿವಂಗತ ಪಂಡಿತ ಸ್ವಾಮಿಗೌಡರಕೊಡುಗೆ ವಿಷಯವಾಗಿ ಸಾಹಿತಿ ಹಾಗೂ ಕನ್ನಡ ಉಪನ್ಯಾಸಕರು ಡಾ. ಐಚನಹಳ್ಳಿ ಕೃಷ್ಣಪ್ಪರವರು ಉಪನ್ಯಾಸ ನೀಡುವರು. ನಂತರ ಆಗಮಿತ ಕವಿಗಳಿಂದ ಕವಿತಾ ವಾಚನ, ಗಾಯಕರಿಂದ ಜನಪದ ಗಾಯನಕಾರ್ಯಕ್ರಮವನ್ನು ಏರ್ಪಡಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾಸನ ಜಿಲ್ಲಾಘಟಕದ ಅಧ್ಯಕ್ಷರು ಶ್ರೀ ಈ.ಕೃಷ್ಣೇಗೌಡರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಾಹಿತ್ಯಾಭಿಮಾನಿಗಳು ಕವಿಗಳು, ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರು ಗೊರೂರು ಅನಂತರಾಜು ಕೋರಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ