ಭಾರದ್ವಾಜ ವೈಮಾನಿಕ ಶಾಸ್ತ್ರ ಮತ್ತು ಹಾರುವ ಹಕ್ಕಿ

Upayuktha
0


ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕಿನಲ್ಲಿ ಸುಬ್ಬಾ ಶಾಸ್ತ್ರಿಗಳು ಎಂಬ ಬ್ರಾಹ್ಮಣರು ಗಣಪತಿ ಗುಡಿಯಲ್ಲಿ ಅರ್ಚಕರಾಗಿದ್ದರು. ಅತ್ಯಂತ ಸಾತ್ವಿಕರಾಗಿದ್ದ ಅವರು ಗಣಪತಿಯನ್ನು ಬಲು ಭಕ್ತಿಯಿಂದ ಆರಾಧಿಸುತ್ತಾ ನೇಮ ನಿಷ್ಠೆಗಳನ್ನು ಪಾಲಿಸುತ್ತಿದ್ದರು.


ಅಂತಹ  ಸಾತ್ವಿಕ ಅರ್ಚಕ ಶಾಸ್ತ್ರಿಗಳಿಗೆ ಕುಷ್ಟರೋಗ ಬಂದಿತು. ದೇವರ ಪೂಜೆ ಮಾಡದ, ಜಪಾನುಷ್ಟಾನಗಳಿಗೆ ಅವಕಾಶವಿಲ್ಲದ ಬದುಕೇಕೆ ಎಂಬ ನೋವು ಅವರನ್ನು ಕಾಡಿತು. ಅತ್ಯಂತ ನೋವಿನಿಂದ ನರಳುವಾಗ ಎಷ್ಟೋ ಬಾರಿ ಆತ್ಮಹತ್ಯೆಯ ಯೋಚನೆ ಕೂಡ ಅವರ ಮನದಲ್ಲಿ ಸುಳಿದುಹೋಯಿತು. ಆದರೆ ವೇದ ಶಾಸ್ತ್ರಗಳನ್ನು ಓದಿದ, *ಆತ್ಮಹತ್ಯೆ ಮಹಾ ಪಾಪ* ಎಂದು ಅರಿತಿದ್ದ ಸುಬ್ಬಾ ಶಾಸ್ತ್ರಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಅವರು ಅರಣ್ಯಕ್ಕೆ ಹೋಗಿ ನೆಲೆಸಲು ನಿರ್ಧರಿಸಿದರು.


ಅದರಂತೆಯೇ ಕಾಡಿನ ಒಳಗಡೆ ಹೊರಟಾಗ ಅವರಿಗೆ ಓರ್ವ ಋಷಿಯು ಭೇಟಿಯಾದರು. ಪರಸ್ಪರ ಮಾತನಾಡಿದಾಗ ಸುಬ್ಬಾ ಶಾಸ್ತ್ರಿಗಳ ಮನದ ನೋವನ್ನು ಅರಿತ ಆ ಮುನಿಗಳು ಶಾಸ್ತ್ರಿಗಳನ್ನು ತಮ್ಮೊಂದಿಗೆ ತಮ್ಮ ಗುಹೆಯಲ್ಲಿ ಬಂದು ವಾಸಿಸಲು ಆಹ್ವಾನಿಸಿದರು ಜೊತೆಗೆ ಅವರ ರೋಗವನ್ನು ತಾನು ಔಷಧಿ ನೀಡುವ ಮೂಲಕ ಗುಣಪಡಿಸುವುದಾಗಿ ಹೇಳಿದರು. ಮುನಿಗಳ ಜೊತೆಗೆ ಅವರ ಗುಹೆಗೆ ಬಂದ ಶಾಸ್ತ್ರಿಗಳು ಸುಮಾರು ಎಂಟು ವರ್ಷಗಳ ಕಾಲ ಅವರೊಂದಿಗೆ ಗುಹೆಯಲ್ಲಿ ವಾಸವಾಗಿದ್ದರು. ಈ ಸಮಯದಲ್ಲಿ ಶಾಸ್ತ್ರಿಗಳಿಗೆ ಕುಷ್ಟರೋಗಕ್ಕೆ ಚಿಕಿತ್ಸೆ ನೀಡುವುದರ ಜೊತೆ ಜೊತೆಗೆ ಸುಮಾರು 1500 ಶ್ಲೋಕಗಳನ್ನು ಮುನಿಗಳು ಕಂಠಸ್ಥ ಮಾಡಿಸಿದರು. 


ಸುಮಾರು ಎಂಟು ವರ್ಷಗಳ ನಂತರ ಕಾಯಿಲೆ ಗುಣವಾಗಿ ಮುನಿಗಳ ಅಪ್ಪಣೆಯಂತೆ ಮತ್ತೆ ತನ್ನೂರಿಗೆ ವಾಪಸಾದ ಶಾಸ್ತ್ರಿಗಳು ಗಣಪತಿ ಗುಡಿಯ ಅರ್ಚನೆಯ ಕಾಯಕವನ್ನು ಮುಂದುವರಿಸಿದರು. ಅದರ ಜೊತೆ ಜೊತೆಗೆ ಹದಿನೈದು ನೂರು ಶ್ಲೋಕಗಳನ್ನು ಗುಡಿಯಲ್ಲಿ ಕಡ್ಡಾಯವಾಗಿ ಪಠಿಸುತ್ತಿದ್ದರು.


ಒಂದು ದಿನ ಹೊಸೂರಿನ ಪರಮಶಿವಯ್ಯ ಎಂಬ  ವ್ಯಕ್ತಿಯು ಶಾಸ್ತ್ರಿಗಳನ್ನು ಕುರಿತು ತಾನು ಆ ಎಲ್ಲಾ 1500 ಶ್ಲೋಕಗಳನ್ನು ಬರೆದು ಸಂಗ್ರಹಿಸಲು ಅನುಮತಿ ಕೋರಿದರು. ಇದಕ್ಕೆ ಒಪ್ಪಿದ ಶಾಸ್ತ್ರಿಗಳು ಹಲವಾರು ದಿನಗಳ ಕಾಲ ಆ ಶ್ಲೋಕಗಳನ್ನು ಬರೆಯಲು ಪರಮಶಿವಯ್ಯನವರಿಗೆ ಸಹಕರಿಸಿದರು. ಈ ಶ್ಲೋಕಗಳ ಮಾಲಿಕೆಯೇ ಹಾರುವ ಹಕ್ಕಿ. ಆ ಹೊತ್ತಿಗೆಯೇ ಮಹರ್ಷಿ ಭಾರದ್ವಾಜರು ಬರೆದ "ಭಾರದ್ವಾಜ ವೈಮಾನಿಕ ಶಾಸ್ತ್ರ" ಎಂಬ  ಮಹಾನ ಗ್ರಂಥ.

ಸುಬ್ಬ ಶಾಸ್ತ್ರಿಗಳು ಮತ್ತು ಪರಮಶಿವಯ್ಯನವರು ಆ ಶ್ಲೋಕಗಳಲ್ಲಿ ಬರೆದಿರುವಂತೆ ಒಂದು ಯಂತ್ರವನ್ನು ತಯಾರಿಸಿ ಕ್ರಿಸ್ತಶಕ 1897ರಲ್ಲಿ ಅದನ್ನು ಆಕಾಶದಲ್ಲಿ ಹಾರಿಸಿದರು. ಸುಮಾರು 1500 ಅಡಿಗಳವರೆಗೆ ಹಾರಿದ ಆ ಯಂತ್ರವೇ ಮೊಟ್ಟಮೊದಲ ಹಾರುವ ಯಂತ್ರ. ಆದರೆ ಆಗ ಭಾರತವನ್ನು ಆಳುತ್ತಿದ್ದ ಬ್ರಿಟಿಷರ ಕಣ್ಣಿಗೆ ಆಗಸದಲ್ಲಿ ಹಾರಾಡುತ್ತಿದ್ದ ಲೋಹದ ಯಂತ್ರವು ಕಣ್ಣಿಗೆ ಬಿದ್ದು ಅವರು ಆಶ್ಚರ್ಯಗೊಂಡರು. ಜೊತೆ ಜೊತೆಗೆ ಈ ರೀತಿ ಯಾವುದೇ ಯಂತ್ರಗಳನ್ನು ತಯಾರಿಸಿ ಉಪಯೋಗಿಸುವ ಹಕ್ಕುಅವರಿಗಿಲ್ಲ ಎಂದು ನಿಷೇಧ ಹೊರಡಿಸಿದರು.


ಮುಂದೆ ಈ ಗ್ರಂಥವು ಭಾರತ ಪ್ರವಾಸದಲ್ಲಿದ್ದ  ಚೀನಾದ ಮಹಾನ್ ಯಾತ್ರಿಕರಿಂದ ಚೀನಾಕ್ಕೆ ರವಾನೆಯಾಗಿ ಮುಂದೆ ವಿಶ್ವದೆಲ್ಲೆಡೆ ಸುತ್ತಾಡಿ ಕೊನೆಗೆ ಆ ವೈಮಾನಿಕ ಶಾಸ್ತ್ರದಲ್ಲಿರುವ ಯಂತ್ರ ತಯಾರಿಯ ಮಾದರಿಯನ್ನೇ ಅನುಕರಿಸಿ ರೈಟ್ ಬ್ರದರ್ಸ್ ಎಂಬ ಖ್ಯಾತಿಯ ಸಹೋದರರು ಮೊತ್ತ ಮೊದಲ ವಿಮಾನವನ್ನು ತಯಾರಿಸಿ ಹಾರಿಸಿದರು. ಆದರೆ ಆ ವಿಮಾನವೂ ಕೂಡ ಕೇವಲ 1200 ಅಡಿ ಮಾತ್ರ ಹಾರಲು ಸಾಧ್ಯವಾಗಿತ್ತು.


ಸ್ನೇಹಿತರೆ ನಮ್ಮ ಸನಾತನ ಧರ್ಮದಲ್ಲಿ ಇಂತಹ ಹಲವಾರು ವೈಶಿಷ್ಟತೆಗಳು, ಜ್ಞಾನದ ಭಂಡಾರಗಳು ಅಡಗಿವೆ. ಅವುಗಳನ್ನು ಅರಿಯುವ ಕುತೂಹಲ ನಮ್ಮಲ್ಲಿ ಇರಬೇಕಷ್ಟೇ. ಅಗ್ನಿಶಾಸ್ತ್ರ ಎಂದರೆ ನಮ್ಮ ಸೊ ಕಾಲ್ಡ್ ಮಿಸ್ಸೈಲ್ ಟೆಕ್ನಾಲಜಿ, ಶ್ರೀ ಸೂಕ್ತದಲ್ಲಿ ಎಲೆಕ್ಟ್ರಾನಿಕ್ ಟೆಕ್ನಾಲಜಿ ಇದ್ದರೆ, ವರುಣ ಸೂತ್ರ ಮಳೆಯನ್ನು ಕುರಿತು ಮಾಹಿತಿ ನೀಡುತ್ತದೆ. ಇನ್ನಾದರೂ ನಮ್ಮ ಪ್ರಾಚೀನ ಗ್ರಂಥ ಗಳ, ಶಾಸ್ತ್ರಗಳ, ಜ್ಞಾನದ ಅರಿವನ್ನು ಹೊಂದೋಣ.

-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top