ಆಚರಣೆಗಳ ಔಚಿತ್ಯ ಅರಿತು ರೂಢಿಸಿಕೊಂಡರೆ ಫಲ ಅನನ್ಯ: ರಾಘವೇಶ್ವರ ಶ್ರೀ

Upayuktha
0

 ಸಂಘಟನಾ ಚಾತುರ್ಮಾಸ್ಯ: ವಿವಿವಿ ವಿದ್ಯಾರ್ಥಿಗಳಿಗೆ ಸ್ಕೂಲ್‍ಬ್ಯಾಗ್ ವಿತರಣೆ



ಗೋಕರ್ಣ: ಶ್ರೇಷ್ಠ ಸಂಸ್ಕೃತಿಯ ವಾರಸುದಾರರಾಗಿರುವ ನಾವು ಸನಾತನ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಜತೆಗೆ ಅದರ ಔಚಿತ್ಯವನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ರೂಢಿಸಿಕೊಳ್ಳುವುದು ಅಗತ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಪ್ರತಿಪಾದಿಸಿದರು.

ಸಂಘಟನಾ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಶ್ರೀಸಂದೇಶ ಅನುಗ್ರಹಿಸಿದ ಸ್ವಾಮೀಜಿ, "ನಮ್ಮದಲ್ಲದ, ಅರ್ಥಹೀನ ಆಚರಣೆಗಳು ಬೇಡ. ಈ ಅಂಧಾನುಕರಣೆ ನಿಜವಾದ ಮೂಢನಂಬಿಕೆ. ಅದರ ಬದಲು ನಮ್ಮ ಶ್ರೇಷ್ಠ ಆಚರಣೆಗಳ ಮಹತ್ವವನ್ನು ಅರಿತು ಅಳವಡಿಸಿಕೊಳ್ಳೋಣ" ಎಂದು ಸಲಹೆ ಮಾಡಿದರು.


ಭಾರತೀಯ ಆಚರಣೆಗಳು ಎಂದೂ ಮೂಢನಂಬಿಕೆಗಳಲ್ಲ. ನಮ್ಮಲ್ಲಿ ಅತಿಥಿಗಳು, ಅಪರಿಚಿತರು ಭೇಟಿಯಾದಾಗ ಹಿರಿಯರಾದರೆ ನಮಸ್ಕರಿಸುವುದು, ಕಿರಿಯರಾದರೆ ಆರ್ಶೀದಿಸುವ ಪದ್ಧತಿ ಇದೆ. ಆದರೆ ವಿದೇಶಿಯರಲ್ಲಿ ಹಸ್ತಲಾಘವದ ಸಂಪ್ರದಾಯ ಇದೆ. ಸ್ಪರ್ಶದಿಂದ ಗುಣದೋಷಗಳು ಇನ್ನೊಬ್ಬರಿಗೆ ಹರಿಯುತ್ತವೆ. ಆದ್ದರಿಂದ ಅಪರಿಚಿತರ ಜತೆ ವ್ಯವಹರಿಸುವಾಗ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.


ನಮ್ಮ ಗುಣದೋಷಗಳನ್ನು ಹರಿಸುವ ಶಕ್ತಿ ಅಂಗೈಗೆ ಇದೆ. ಆದ್ದರಿಂದ ನಮ್ಮನ್ನು, ನಮ್ಮತನವನ್ನು ಉಳಿಸಿಕೊಳ್ಳುವ ಸಲುವಾಗಿ ನಮ್ಮ ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕೈಕುಲುಕುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಅಂತೆಯೇ ಎಲ್ಲರಿಗೂ ನಮಸ್ಕರಿಸುವುದು ನಮ್ಮ ಸಂಪ್ರದಾಯವಲ್ಲ. ಹಿರಿಯರಿಗೆ ಕಿರಿಯಲು ನಮಸ್ಕರಿಸಬೇಕು. ಹಿರಿಯರು ಕಿರಿಯರಿಗೆ ನಮಸ್ಕರಿಸಿದರೆ ಆಯಸ್ಸಿನ ಹರಣವಾಗುತ್ತದೆ ಎಂದು ವಿವರಿಸಿದರು.


ನಮಸ್ಕಾರಕ್ಕೆ ದೇವರು ಮಾತ್ರ ಅರ್ಹರು. ಆದರೆ ತಂದೆ- ತಾಯಿ ದೇವರ ಜತೆ ಸಂಪರ್ಕ ಸಾಧಿಸಲು ನಮಗೆ ಇರುವ ತಕ್ಷಣದ ಕೊಂಡಿ. ಆ ಅರ್ಥದಲ್ಲಿ ಅವರೂ ದೇವರೇ. ಈ ಕಾರಣಕ್ಕಾಗಿ ತಂದೆ ತಾಯಿಗೆ ನಾವು ನಮಸ್ಕರಿಸುತ್ತೇವೆ. ಅಂತೆಯೇ ಗುರುಗಳು ಕೂಡಾ ದೇವರತ್ತ ನಮ್ಮನ್ನು ಕೊಂಡೊಯ್ಯುವವರು; ನಮಗೆ ಜ್ಞಾನದ ಬೆಳಕು ನೀಡುವವರು ಎಂದರು.


ಸ್ಪರ್ಶ ನಮ್ಮ ಮನಸ್ಸು, ಸ್ವಭಾವದ ಮೇಲೂ ಪರಿಣಾಮ ಬೀರಬಲ್ಲದು. ಉದಾಹರಣೆಗೆ ಭಾರತೀಯ ಸಂಸ್ಕøತಿಯಲ್ಲಿ ಚಿನ್ನಕ್ಕೆ ವಿಶೇಷ ಮಹತ್ವ ಇದೆ. ಆದರೆ ಇದು ಕೇವಲ ಸೌಂದರ್ಯವರ್ಧಕವಲ್ಲ; ನಮ್ಮ ಅಂತರಂಗ- ಬಹಿರಂಗವನ್ನು ಶುದ್ಧವಾಗಿಸುವ ಶಕ್ತಿ ಹಳದಿ ಲೋಹಕ್ಕಿದೆ. ದೇಹಕ್ಕೆ ಶಕ್ತಿ, ದೇಹಶುದ್ಧಿ, ಆಯಸ್ಸು ವೃದ್ಧಿ, ಶರೀರಕ್ಕೆ ಕಾಂತಿ, ವಾಕ್ ಶುದ್ಧಿ, ಸ್ಮøತಿ ಸಾಮಥ್ರ್ಯ ಹೆಚ್ಚಳಕ್ಕೂ ಇದು ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.


ನಮಸ್ಕಾರ ಎಂದರೆ ಐಕ್ಯ ಸಾಧಿಸುವುದು ಎಂಬ ಅರ್ಥ. ಭಗವಂತನಲ್ಲಿ ನಾವು ಲೀನವಾಗಬೇಕು ಎಂಬ ಭಾವ. ಈ ಕಾರಣಕ್ಕಾಗಿಯೇ ದೇವರ ಸಾನ್ನಿಧ್ಯ ಇರುವ ತುಳಸಿ, ಅಶ್ವತ್ಥ, ಗಂಗೆಯನ್ನು ನಾವು ನಮಿಸುತ್ತೇವೆ. ಕೈಜೋಡಿಸಿ ನಮಸ್ಕರಿಸುವುದು ಪ್ರಕೃತಿ- ಪುರುಷನ ಒಂದಾಗುವಿಕೆಯ ಸಂಕೇತ ಎಂದು ಬಣ್ಣಿಸಿದರು.


ಅಂತೆಯೇ ಹತ್ತಿ, ರೇಷ್ಮೆ ಅಥವಾ ಉಣ್ಣೆಯನ್ನು ಧರಿಸುವುದು ನಮ್ಮ ಪದ್ಧತಿ. ಇದನ್ನು ಬಿಟ್ಟು ಕೃತಕ ಉಡುಪುಗಳನ್ನು ಧರಿಸಿದಾಗ ಅದು ಪಿತ್ತ ವಿಕಾರಕ್ಕೆ ಕಾರಣವಾಗುತ್ತದೆ. ದೇಹ- ಮನಸ್ಸು ಕೆಡುತ್ತದೆ. ಹೂವಿನ ಸ್ಪರ್ಶ ಪಿತ್ತನಾಶಕ ಎಂಬ ಕಾರಣಕ್ಕೆ ಹೂ ಮುಡಿಯುವ ಪದ್ಧತಿ ಬಂದಿದೆ. ತೆಂಗಿನಕಾಯಿಯ ಸ್ಪರ್ಶದಿಂದ ಧಾತುಸಾಮ್ಯತೆ ಸಾಧನೆಯಾಗುತ್ತದೆ. ಗೋವಿನ ಸ್ಪರ್ಶಮಾತ್ರದಿಂದಲೇ ಸತ್ವಗುಣ ಜಾಗೃತಿಯಾಗಿ ದೇಹಶುದ್ಧಿಯಾಗುತ್ತದೆ. ಶುದ್ಧವಾದ ಮುತ್ತು ಧಾರಣೆಯಿಂದ ಸ್ಪರ್ಶದಿಂದ ಬಂದ ದೋಷಗಳು ನಿವಾರಣೆಯಾಗುತ್ತವೆ  ಎಂದು ವಿವರಿಸಿದರು.


ವಿವಿವಿ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಪ್ರತಿ ವಾರ ಹಣ್ಣು- ತರಕಾರಿ ಒದಗಿಸುತ್ತಾ ಬಂದಿರುವ ಬುತ್ತಿ ಬಳಗದ ವತಿಯಿಂದ ರೈಟ್ ಟೂ ಲಿವ್ ಹಾಗೂ ಕೋಟೆ ಫೌಂಡೇಷನ್ ಸಹಯೋಗದಲ್ಲಿ ಗುರುಕುಲ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್‍ಗಳನ್ನು ವಿತರಿಸಲಾಯಿತು. ಬುತ್ತಿ ಬಳಗದ ಆರ್.ಸಿ. ಭಾರದ್ವಾಜ ಕುಳಮರ್ವ, ರೈಟ್ ಟೂ ಲೀವ್ ಸಂಸ್ಥೆಯ ವ್ಯವಸ್ಥಾಪಕ ವೀರೇಶ್, ಕೋಟೆ ಫೌಂಡೇಷನ್‍ನ ಗಣಪಯ್ಯ ಮತ್ತಿತರರು ವೇದಿಕೆಯಲ್ಲಿದ್ದರು.


ಶಶಿಕಲಾ ಕೂರ್ಸೆಯವರು ಸಾರ್ವಭೌಮ ಗುರುಕುಲದ ಪಿಯು ವಿಭಾಗದ ಪ್ರಾಚಾರ್ಯರಾಗಿ ಶ್ರೀಗಳಿಂದ ನಿಯುಕ್ತಿಪತ್ರ ಪಡೆದರು. ವಿವಿವಿ ಆಡಳಿತಾಧಿಕಾರಿ ಪ್ರಸನ್ನಕುಮಾರ್ ಟಿ.ಜಿ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top