ನಮ್ಮ ಮಕ್ಕಳು ರಾಮಲಕ್ಷ್ಮಣರಾಗಬೇಕು: ಎಂ. ಕುಮಾರನ್

Upayuktha
0

ಬದಿಯಡ್ಕ ರಾಮಲೀಲಾ ಯೋಗ ಕೇಂದ್ರದಲ್ಲಿ ರಾಮಾಯಣ ವಾರಾಚರಣೆ


13ರಿಂದ 19 ವರ್ಷದೊಳಗಿನ ಪ್ರಾಯದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಲಭಿಸಬೇಕು. ಮಕ್ಕಳು ರಾಮಲಕ್ಷ್ಮಣರಂತೆ ಬೆಳೆಯಬೇಕು: ಕುಮಾರನ್ ಎಂ.

ಬದಿಯಡ್ಕ: ಶ್ರೀರಾಮನ ವ್ಯಕ್ತಿತ್ವದೊಂದಿಗೆ ರಾಮಾಯಣವು ಜನಮಾನಸದಲ್ಲಿ ಸ್ಥಿರವಾಗಿ ನಿಲ್ಲುವಂತಾಗಿದೆ. ರಾಮಾಯಣದ ಪ್ರತಿಯೊಂದು ಘಟನೆಯೂ ನಾಡಿನ ಜನತೆಗೆ ಪಾಠವಾಗಿದೆ ಎಂದು ಲೇಖಕಿ ಧನ್ಯಶ್ರೀ ಸರಳಿ ಅಭಿಪ್ರಾಯಪಟ್ಟರು. ರಾಮಾಯಣ ವಾರಾಚರಣೆ ಸಮಿತಿ ಬದಿಯಡ್ಕ ಇವರ ನೇತೃತ್ವದಲ್ಲಿ ಶ್ರೀರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ಜರಗುತ್ತಿರುವ ರಾಮಾಯಣ ವಾರಾಚರಣೆಯ ಮೂರನೇ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ದೀಪಪ್ರಜ್ವಲನೆಗೈದು ಅವರು ಮಾತನಾಡಿದರು.


ಹಿರಿಯರಾದ ಶ್ಯಾಮ ಆಳ್ವ ಕಡಾರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ರಾಮಾಯಣದ ವಿವಿಧ ಘಟನೆಗಳನ್ನು ವಿವರಿಸಿದರು. ಮಂಜೇಶ್ವರ ಉಪಜಿಲ್ಲಾ ಖಜಾನೆಯ ಅಧಿಕಾರಿ ಕುಮಾರನ್ ಎಂ ಧಾರ್ಮಿಕ ಉಪನ್ಯಾಸವನ್ನು ನೀಡುತ್ತಾ ರಾಮಾಯಣದ ಘಟನೆಗಳು ನಮ್ಮ ನಿಜ ಜೀವನಕ್ಕೆ ಪಾಠವಾಗಿದೆ. ತಂದೆ ತಾಯಿ ಗುರುವಿನೊಂದಿಗೆ ಹೇಗಿರಬೇಕು ಎಂಬುದನ್ನು ಕಲಿಸಿಕೊಟ್ಟಿದೆ. ಶ್ರೀರಾಮನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿದಾಗ ಅವರು ಬೆಳೆದು ದೊಡ್ಡವರಾದಾಗ ಶ್ರೀರಾಮನ ಗುಣವನ್ನು ಹೊಂದಲು ಸಾಧ್ಯವಿದೆ. 13ರಿಂದ 19 ವರ್ಷದೊಳಗಿನ ಪ್ರಾಯದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಲಭಿಸಬೇಕು. ಮಕ್ಕಳು ರಾಮಲಕ್ಷ್ಮಣರಂತೆ ಬೆಳೆಯಬೇಕು ಎಂದರು.

ಸಂಘಟಕರಾದ ಕರಿಂಬಿಲ ಲಕ್ಷ್ಮಣ ಪ್ರಭು ಸ್ವಾಗತಿಸಿ, ಬೇ.ಸೀ.ಗೋಪಾಲಕೃಷ್ಣ ವಂದಿಸಿದರು. ಪವನ್ ಕುಮಾರ್ ಪ್ರಾರ್ಥನೆ ಹಾಡಿದರು. ಅನುಪಮಾ ಕಾಡಮನೆ ನಿರೂಪಿಸಿದರು. ಯೋಗಶಿಕ್ಷಕರಾದ  ಶಾರದಾ ಕಾಡಮನೆ, ಸೂರ್ಯನಾರಾಯಣ ವಳಮಲೆ ರಾಮತಾರಕ ಮಂತ್ರ ಜಪ ನಡೆಸಿಕೊಟ್ಟರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top