ವಿಪ್ರವೇದಿಕೆ ಕೋಡಿಕಲ್ ಪ್ರತಿಭಾ ಪುರಸ್ಕಾರ, ಉಪನ್ಯಾಸ

Upayuktha
0


 

ಮಂಗಳೂರು: ಸಂಸ್ಕಾರ, ಸಂಸ್ಕೃತಿ ಮತ್ತು ಸಂಸ್ಕೃತ ಈ ಮೂರು ಶಬ್ದಗಳೊಂದಿಗೆ ನಮ್ಮ ಸನಾತನ ಸಂಸ್ಕೃತಿ ಇನ್ನೂ ನಮ್ಮೆಲ್ಲರ ರಕ್ತದಲ್ಲಿ ಇದೆ. ಆದರೆ ಇಂದು ನಾವುಗಳು ಅದನ್ನು ಗುರುತಿಸಲು ಮರೆತಿದ್ದೇವೆ ಎಂದು ಶಕ್ತಿ ರೆಸಿಡೆನ್ಸಿಯಲ್ ವಿದ್ಯಾ ಸಂಸ್ಥೆ ಇಲ್ಲಿನ ಪ್ರಾಂಶುಪಾಲ ವಿದ್ವಾನ್ ರವಿಶಂಕರ್ ಹೆಗಡೆ ದೊಡ್ನಳ್ಳಿ ಅಭಿಪ್ರಾಯಪಟ್ಟರು.


ಅವರು ವಿಪ್ರವೇದಿಕೆ (ರಿ) ಕೋಡಿಕಲ್ ಇವರು ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಭಾರತದ ಯುವಜನತೆಯಲ್ಲಿ ಜ್ಞಾನ ಸಂಪತ್ತಿಗೆ ಕೊರತೆ ಇಲ್ಲ ಆದರೆ ಸಂಸ್ಕಾರದಿಂದ ಒಳಗೊಂಡ ಜ್ಞಾನವಿದ್ದಾಗ ಆತ ದೇಶಕ್ಕೆ ಬಂದು ಆಸ್ತಿ  ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ಪರಂಪರೆಯ ಸಂಕೇತ ಇದು ನಮ್ಮ ಪುರಾತನ ಗ್ರಂಥಗಳು ಹಾಗೂ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಪೋಷಿಸುವ ಮಾರ್ಗವನ್ನು ತೋರುತ್ತದೆ. ನಾವು ಆಚರಿಸುವ ಧಾರ್ಮಿಕ ಆಚರಣೆಯನ್ನು ನೋಡಿ ನಮ್ಮ ಮುಂದಿನ ತಲೆಮಾರು ಅದನ್ನು ಅನುಸರಿಸುವಂತೆ ಆಗಬೇಕು. ಆದ್ದರಿಂದ ಬ್ರಾಹ್ಮಣರಾದವರು ಬ್ರಾಹ್ಮಣ್ಯದ ಅರಿವನ್ನು ಅರಿತುಕೊಂಡು ಧಾರ್ಮಿಕ ವಿಧಿ ವಿಧಾನಗಳು ಹಾಗೂ ಸಂಧ್ಯಾವಂದನೆ ಮೊದಲಾದ ಸಂಸ್ಕಾರಗಳನ್ನು ಬೆಳೆಸಿಕೊಂಡರೆ ನಮ್ಮ ಮುಂದಿನ ಪೀಳಿಗೆ ಅದನ್ನು ಅನುಸರಿಸುತ್ತಾರೆ ಎಂದರು.


ವಿಪ್ರವೇದಿಕೆಯ ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿದರು. ಕಾರ್ಯದರ್ಶಿ ದುರ್ಗಾದಾಸ್ ಕಟೀಲು ವಂದಿಸಿದರು. ಕೋಶಾಧಿಕಾರಿ ಕಿಶೋರ್ ಕೃಷ್ಣ, ಗೌರವಾಧ್ಯಕ್ಷ ನ್ಯಾಯವಾದಿ ಜಯರಾಮ್ ಪದಕಣ್ಣಾಯ, ನಿಕಟಪೂರ್ವ ಅಧ್ಯಕ್ಷ ವಿದ್ಯಾ ರಾವ್, ಸೃಷ್ಟಿ, ಗಿರೀಶ್ ರಾವ್ ಅವಿನಾಶ್, ಹರಿಪ್ರಸಾದ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಹೆಚ್ಚು ಅಂಕಗಳಿಸಿದ ಸ್ಫೂರ್ತಿ ಹಾಗೂ ಗೋಕುಲ ಕೃಷ್ಣ ಪ್ರತಿಭಾ ಪುರಸ್ಕಾರವನ್ನು ಪಡೆದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top