ಪಣಜಿ (ವಾಸ್ಕೊ): ಬಂಜಾರ ಸಮಾಜದ ಇತಿಹಾಸ ಕಲೆ ಹೊಂದಿದ್ದು, ಅವರ ಇತಿಹಾಸವನ್ನು ಜಗತ್ತಿಗೆ ಸಾರಲು ಮುಂದಾಗಬೇಕು ಎಂದು ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಾಮು ನಾಯ್ಕ ಒತ್ತಾಯಿಸಿದರು.
ಅಖಿಲ ಗೋವಾ ಬಂಜಾರ ಸಮಾಜವು ವಾಸ್ಕೋದ ರವೀಂದ್ರ ಭವನದಲ್ಲಿ ಲಸಿಕಾ ಬಂಜಾರ, ಮಾಜಿ ಮುಖ್ಯಮಂತ್ರಿ ದಿವಂಗತ ವಸಂತ ರಾವ್ ನಾಯಕ್ ಮತ್ತು ಸಂತ ರಾಮರಾವ್ ಮಹಾರಾಜ್ ಅವರ ಜನ್ಮ ದಿನಾಚರಣೆ ಮತ್ತು ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕದ ಸಂಸದ ಉಮೇಶ ಜಾಧವ್, ಬಂಜಾರ ಸಮುದಾಯ ಪ್ರತಿ ರಾಜ್ಯದಲ್ಲೂ ಹೆಸರು ಮಾಡಿದೆ. ಬಂಜಾರ ಸಮುದಾಯದವರು ಶ್ರಮಜೀವಿಗಳಾಗಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಬಂಜಾರ ಸಮಾಜದ ಯುವಕರು ಶಿಕ್ಷಣದಲ್ಲಿ ಮುಂದೆ ಸಾಗುವುದರಿಂದ ಬಂಜಾರ ಸಮಾಜ ಭವಿಷ್ಯದಲ್ಲಿ ಯಶಸ್ಸು ಸಾಧಿಸಲಿದೆ ಎಂದರು.
ವಿಶೇಷ ಆಹ್ವಾನಿತರಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಾಮು ನಾಯಕ್, ಮುರಗಾಂವ್ ಶಾಸಕ ಸಂಕಲ್ಪ್ ಅಮೋಣ್ಕರ್, ವಾಸ್ಕೋ ಶಾಸಕ ಕೃಷ್ಣ(ದಾಜಿ) ಸಾಲ್ಕರ್, ಅಖಿಲ ಗೋವಾ ಬಂಜಾರ ಸಮಾಜದ ಅಧ್ಯಕ್ಷ ಆನಂದ ಹಂಗಡಿ, ಕಾರ್ಯಾಧ್ಯಕ್ಷ ಸುರೇಶ ರಜಪೂತ, ಕಾರ್ಯದರ್ಶಿ ತವರಪ್ಪ ಲಮಾಣಿ, ಉಪಾಧ್ಯಕ್ಷ ಗೋವಿಂದ ರಾಠೋಡ್, ಶಿವ ಸುನರ್, ಡಾ. ಕೃಷ್ಣ ಪವಾರ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೊದಲಾಗಿ ಭಾಗವತರಿಂದ ಜಂಟಿ ಜಯಂತ್ಯುತ್ಸವವನ್ನು ಆಚರಿಸಲಾಯಿತು. ನಂತರ ಬಂಜಾರ ಸಮಾಜದ ಸ್ವಾಗತ ಗೀತೆ ಹಾಗೂ ಜಾನಪದ ನೃತ್ಯ ನಡೆಯಿತು.
ಉಪಸ್ಥಿತರಿದ್ದ ಬಂಜಾರ ಸಮಾಜದ ಪದಾಧಿಕಾರಿಗಳಿಗೆ ಹಾಗೂ ಬಂಧುಗಳಿಗೆ ಶ್ರೀ ಸೋಮಲಿಂಗ ಮಹಾರಾಜರು ಪ್ರಮಾಣ ವಚನ ಬೋಧಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯದರ್ಶಿ ತವರಪ್ಪ ಲಮಾಣಿ ಕಾರ್ಯಕ್ರಮ ನಿರ್ವಹಿಸಿ ಸುರೇಶ ರಜಪೂತ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ