ಭಾರತದ ಗುರು ಪರಂಪರೆ ಅತ್ಯಂತ ಶ್ರೇಷ್ಠವಾದದ್ದು: ವಿದ್ವಾನ್ ರವಿಶಂಕರ ಹೆಗಡೆ
ಗಣೇಶಪುರ, ಕಾಟಿಪಳ್ಳ: ಭಾರತದ ಎಲ್ಲಾ ಕಲಾಪ್ರಕಾರಗಳಲ್ಲಿಯೂ ಗುರು ಪರಂಪರೆ ನಡೆದುಕೊಂಡು ಬಂದಿದೆ. ಆದ್ದರಿಂದಲೇ ಇಲ್ಲಿನ ಸಂಸ್ಕೃತಿ ಭದ್ರವಾಗಿದೆ. ನಮ್ಮ ದೇಶದ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು ಎಂದು ಶಕ್ತಿ ರೆಸಿಡೆನ್ಸಿಯಲ್ ಶಾಲೆ ಶಕ್ತಿನಗರ ಇಲ್ಲಿನ ಪ್ರಾಂಶುಪಾಲರಾದ ವಿದ್ವಾನ್ ರವಿಶಂಕರ್ ಹೆಗಡೆಯವರು ಅಭಿಪ್ರಾಯಪಟ್ಟರು.
ಅವರು ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ ಇಲ್ಲಿ ಗುರುಪೂರ್ಣಿಮೆ ಗುರು ನಮನ ಮಾತಾಪಿತರ ಚರಣ ಪೂಜನ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ಮಾಡಿದರು ಆಚಾರ್ಯ ಎಂದರೆ ವಿದ್ಯೆಯನ್ನು ತಾನು ಆಳವಾಗಿ ಅಭ್ಯಾಸ ಮಾಡಿ ಅದನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಪಾಠ ಮಾಡುವುದಷ್ಟೇ ಅಲ್ಲ ಅದನ್ನು ತಾನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡವನಾಗಿರಬೇಕು. ಆಗ ಮಾತ್ರ ಆತ ಆಚಾರ್ಯ ಅಥವಾ ಗುರು ಎಂದು ಕರೆಸಿಕೊಳ್ಳುತ್ತಾನೆ ಒಬ್ಬ ಶಿಕ್ಷಕ ಕೇವಲ ಜ್ಞಾನವನ್ನು ನೀಡುತ್ತಾನೆ. ಆದರೆ ಗುರುವು ನಮ್ಮ ಆಧ್ಯಾತ್ಮಿಕ ಬೆಳವಣಿಗೆಗೆ ಜವಾಬ್ದಾರನಾಗಿರುತ್ತಾನೆ. ನಮ್ಮೊಳಗಿನ ಬುದ್ಧಿವಂತಿಕೆಯನ್ನು ಜಾಗೃತಗೊಳಿಸುತ್ತಾನೆ ಮತ್ತು ನಮ್ಮನ್ನು ಒಳಕ್ಕೆ ತಿರುಗಿಸಲು ಪ್ರೋತ್ಸಾಹಿಸುತ್ತಾನೆ ಎಂದು ಅವರು ನುಡಿದರು.
ಕರೋನ ನಂತರದ ಕಾಲಘಟ್ಟದಲ್ಲಿ ಯುಟ್ಯೂಬ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಸಹಾಯದಿಂದ ವಿದ್ಯೆಯನ್ನು ಕಲಿಯುವ ಪದ್ಧತಿ ಆರಂಭವಾಗಿದೆ. ಈ ಸಾಮಾಜಿಕ ಜಾಲತಾಣಗಳು ಉತ್ತಮವಾದ ಜ್ಞಾನವನ್ನು ನೀಡುತ್ತವೆಯಾದರು. ತಪ್ಪನ್ನು ತಿದ್ದಿ ಕಲಿಸುವ ಗುರು ಸ್ಥಾನಕ್ಕೆ ನಿಲ್ಲಲಾರವು ಎಂದರು. ಕಳೆದ ಹಲವಾರು ವರ್ಷಗಳಿಂದ ಸಮಾಜಕ್ಕೆ ಮಾದರಿಯಾದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಭರತಾಂಜಲಿಯ ಕಾರ್ಯ ಶ್ಲಾಘನೀಯ ಎಂದರು.
ಗುರು ನಮನವನ್ನು ಸ್ವೀಕರಿಸಿದ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಇದರ ನೃತ್ಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಇವರು ಶಿಷ್ಯರು ಪ್ರಾಮಾಣಿಕವಾಗಿ ನಿಜವಾದ ಗುರುವಿನ ಮಾರ್ಗದರ್ಶನದಲ್ಲಿ ಹಾದಿಯಲ್ಲಿ ನಡೆಯುವುದರಿಂದ ಅವರ ಅಸಹಜ ಪ್ರವೃತ್ತಿಗಳು ಕ್ರಮೇಣ ಕರಗುತ್ತವೆ ಎಂದು ತಿಳಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ