ಜುಲೈ 31: ಏಕ ಕಾಲಕ್ಕೆ 31 ರಂಗಮಂದಿರದಲ್ಲಿ ಏಕವ್ಯಕ್ತಿ ನಾಟಕ ಪ್ರದರ್ಶನ, ಲಿಮ್ಕಾ ದಾಖಲೆಗೆ ಸಜ್ಜು

Upayuktha
0


ಸುರತ್ಕಲ್:
ಬೆಂಗಳೂರಿನ ರಂಗ ಪಯಣ ತಂಡವು ಕರ್ನಾಟಕದ 31 ಜಿಲ್ಲೆಗಳಲ್ಲಿ 31 ಕಲಾವಿದರು 31 ರಂಗಮಂದಿರದಲ್ಲಿ ಜುಲೈ 31ರಂದು ಏಕ ಕಾಲಕ್ಕೆ ಇಡೀ ಕರ್ನಾಟಕದಾದ್ಯಂತ ಒಂದೇ ದಿನ ಒಂದೇ ಸಮಯಕ್ಕೆ ಕನ್ನಡದ 55 ನಿಮಿಷದ ಒಂದು ಪ್ರೇಮಕಥೆ - ಏಕವ್ಯಕ್ತಿ ನಾಟಕವನ್ನು ಪ್ರದರ್ಶಿಸುವ ಮೂಲಕ ಕರ್ನಾಟಕ ರಂಗಭೂಮಿಯಲ್ಲಿ ವಿಶಿಷ್ಟವಾಗಿ ದಾಖಲೆ ಮಾಡಲು ಹಾಗೂ 2023ರ ಲಿಮ್ಕಾ ದಾಖಲೆಗೆ ಸಜ್ಜಾಗಿದೆ. ನಯನ ಸೂಡ ಅವರ ನಿರ್ವಹಣೆಯಲ್ಲಿ ರಂಗ ಪಯಣವು ರಂಗ ತರಬೇತಿ ಪಡೆದಿದ್ದು 220ಕ್ಕೂ ಹೆಚ್ಚು ತಂತ್ರಜ್ಷರು31 ಕಲಾವಿದರು ಇತಿಹಾಸ ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ.


ನಾಟಕದ ರಚನೆಯನ್ನು ಮತ್ತು ನಿರ್ದೇಶನವನ್ನು ರಾಜ್‍ಗುರು ನೀಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರತ್ಕಲ್‍ ಗೋವಿಂದದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ ಹಾಗೂ ಅರೆಹೊಳೆ ಪ್ರತಿಷ್ಠಾನ ಮಂಗಳೂರಿನ ಸಹಭಾಗಿತ್ವದಲ್ಲಿ ಗೋವಿಂದದಾಸ ಕಾಲೇಜಿನಲ್ಲಿ ಜುಲೈ31ರಂದು ಸಂಜೆ7.00 ಗಂಟೆಗೆ ನಡೆಯಲಿದೆ.


ಪ್ರಸಿದ್ಧ ರಂಗನಟ ಶಿವರಾಜು ಎನ್ ನಾಟಕ ಪ್ರದರ್ಶನ ನೀಡಲಿದ್ದಾರೆ. ವಿಭಿನ್ನ ಕಥಾ ವಸ್ತುವನ್ನೊಳಗೊಂಡ 55 ನಿಮಿಷದ ಒಂದು ಪ್ರೇಮಕಥೆ ನಾಟಕಕ್ಕೆ ಮುಕ್ತ ಪ್ರವೇಶವಿದ್ದು ನಾಟಕಾಸಕ್ತರು 'ರಂಗಪಯಣ'ದ ವಿಶಿಷ್ಟ ಸಾಧನೆಯ ಹೆಜ್ಜೆ ಗುರುತುಗಳನ್ನು ಬೆಂಬಲಿಸಬೇಕಾಗಿ ಸಂಘಟಕರು ಕೋರಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top