ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಮುಂಬಯಿ: ಜಯಶ್ರಿಕೃಷ್ಣ ಪರಿಸರ ಪ್ರೇಮಿಯ ಮೂಲ ಉದ್ದೇಶ ಪರಿಸರ ರಕ್ಷಣೆಯೊಂದಿಗೆ ಕೈಗಾರಿಕೋಧ್ಯಮಕ್ಕೆ ಪ್ರಾಶಸ್ತ್ಯ ನೀಡುವುದು. ಆದರೆ ಅರಣ್ಯ ರಕ್ಷಣೆ ಮಾಡುವ ರಾಧಾಕೃಷ್ಣ ನಾಯರ್ ಎನ್ನುವ ಸಂತನಿಗೆ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆಯಂದು ರಾಷ್ಟ್ರೀಯ ಪ್ರಶಸ್ತಿ ಪ್ರಧಾನಿಸುವ ಮೂಲಕ ಮುಂದಿನ ದಿನಗಳಲ್ಲಿ ಅರಣ್ಯ ರಕ್ಷಣೆ ಮಾಡುದರೊಂದಿಗೆ "ಜಾರ್ಜ್ ವನ" ದ ಮೂಲಕ ಅರಣ್ಯ ಸಂರಕ್ಷಣಾ ಪ್ರಶಸ್ತ್ಯ ನೀಡಲು ಪ್ರಯತ್ನಿಸುತ್ತೇವೆ. ಈ ಮೊದಲಿನಿಂದಲೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಹೆಸರು ನೀಡುವಂತೆ ನಮ್ಮ ಪ್ರಯತ್ನ ನಡೆಯುತ್ತಲೇ ಇದೆ, ರಾಜ್ಯದ ಎಲ್ಲ ಜನನಾಯಕರು ಪಕ್ಷ ಬೇದವಿಲ್ಲದೆ ಮಂಗಳೂರು ವಿಮಾನ ನಿಲ್ಧಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರು ನೀಡಲಿ. ರಾಜಕೀಯದ ಸಂತನೆನಿಸಿಕೊಂಡ ಜಾರ್ಜ್ ಫೆರ್ನಾಂಡಿಸ್ ರವರ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ನೆನಪಿಡುವಂತಾಗಲು ಈ ಮೂಲಕ ಸಾಧ್ಯ ಎಂದು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ನುಡಿದರು.
ಜೂ. 3 ರಂದು ರಂಜನಿ ಸುಧಾಕರ ಹೆಗ್ಡೆ ಸಭಾಗೃಹ, ಬಂಟರ ಭವನ ಅನೆಕ್ಸ್ ಹಾಲ್, ಕುರ್ಲಾ ಪೂರ್ವ ಮುಂಬಯಿ ಇಲ್ಲಿ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ನಡೆದ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ಮತ್ತು ಮತ್ತವರ ನೆನಪಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕರಾವಳಿ ಜಿಲ್ಲೆಗಳಲ್ಲಿ ಪರಸರ ರಕ್ಷಣೆಯೊಂದಿಗೆ ಕೈಗಾರಿಕೋದ್ಯಮಕ್ಕೆ ಅವಕಾಶ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಇನ್ನೂ ಹೆಚ್ಚು ಪ್ರಾಧಾನ್ಯತೆ ನೀಡಬೇಕು. 22 ವರ್ಷಗಳಿಂದ ಸಮಿತಿ ಉಭ ಜಿಲ್ಲೆಗಳಲ್ಲಿ ಅಭಿವೃದ್ದಿಯೊಂದಿಗೆ ಉದ್ಯಮಗಳು ಸ್ಥಾಪನೆಯಾಗಬೇಕೆಂದು ಶ್ರಮಿಸಿದ ಬಗ್ಗೆ ಎಲ್ಲರಿಗೂ ತಿಳಿದಿದ್ದು , ಜಾರ್ಜ್ ಫೆರ್ನಾಂಡಿಸ್ ರವರ ಕಾಲದ ನಂತರ ಅವರ ನೆನಪು ಉಳಿಯುವಂತಾಗಲು ಕೇಂದ್ರ ಸರಕಾರದ ಸಚಿವರಲ್ಲಿ ಮಾತುಕತೆ ನಡೆಸಿದ್ದೆ ಅಲ್ಲದೆ ರಾಜ್ಯ ಸರಕಾರದ ಮುಖ್ಯಮಂತ್ರಿ ಸೇರಿ ಸಚಿವರಲ್ಲಿ ಸುಧೀರ್ಘ ಮಾತುಕತೆ ನಡೆಸಿದ್ದೇನೆ. ಆದರೆ ನಮ್ಮ ಜಿಲ್ಲೆಯ ಶಾಸಕರು, ಸಂಸದರು ಬೇರೆಯೇ ಹೆಸರಿಡುವ ಪ್ರಸ್ತಾವವನ್ನು ಸರಕಾರಕ್ಕೆ ತಿಳಿಸಿದ್ದರು. ಜನನಾಯಕರು ಯಾವುದೇ ಪಕ್ಷದಲ್ಲಿರಲು ಜಿಲ್ಲೆಯ ಅಭಿವೃದ್ದಿಗೆ ಬದುಕನ್ನು ತ್ಯಾಗ ಮಾಡಿದ ಜಾರ್ಜ್ ಫೆರ್ನಾಂಡಿಸ್ ರವರ ಹೆಸರು ಶಾಸ್ವತವಾಗಿರಬೇಕಾದರೆ ಜಿಲ್ಲೆಯ ರಾಜಕೀಯ ನಾಯಕರು ಶ್ರಮಿಸಬೇಕು ಅದರೊಂದಿಗೆ ಸಮಿತಿ ಕೂಡಾ ಕೈಜೋಡಿಸುತ್ತದೆ, 21ನೇ ಶತಮಾನದತ್ತ ಮುನ್ನಡೆಯುತ್ತಿರುವ ನಾವು ಅಭಿವೃದ್ದಿಯೇ ನಮ್ಮ ಗುರಿಯಾಗಿರಬೇಕು. ಈಗಿನ ಸರಕಾರ ಕರಾವಳಿ ಕರ್ನಾಟಕದ ಅಭಿವೃದ್ದಿಗೆ ಪ್ರಾಮುಖ್ಯತೆಯನ್ನು ನೀಡುದರ ಮೂಲಕ ಪ್ರವಾಸಿ ಕೇಂದ್ರವನ್ನಾಗಿರಿಸಬೇಕು, ನಮ್ಮ ಜಿಲ್ಲೆಗಳು 22 ಸುಂದರವಾದ ನದಿಗಳನ್ನು ಹೊಂದಿದ್ದು ಅದನ್ನು ಮುಖ್ಯ ಉದ್ದೇಶವನ್ನಾಗಿರಿಸಿ ಜಿಲ್ಲೆಯನ್ನು ಪ್ರವಾಸಿ ಕೇಂದ್ರವನ್ನಾಗಿಸಲು ಸರಕಾರ ಶ್ರಮಿಸಬೇಕು. ಜಿಲ್ಲೆಯಲ್ಲಿ ಮೆಟ್ರೋ ರೈಲುಗಳು ಓಡುವಂತಾಗಬೇಕು, ಇದನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಗಮನದಲ್ಲಿಡಬೇಕು. ನಮ್ಮ ಸಮಿತಿಯು ಕೈಗೊಂಡ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ಕಾರ್ಯರೂಪಕ್ಕೆ ನಾವು ತರಲಿದ್ದೇವೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮವನ್ನು ಉತ್ತರ ಮುಂಬಯಿ ಸಂಸದ ಗೋಪಾಲ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತುಂಗಾ ಗ್ರೂಫ್ ಆಫ್ ಹೋಟೇಲ್ಸನ ಸಿಎಂಡಿ ಸುಧಾಕರ ಹೆಗ್ದೆಯವರು ಮಾತನಾಡುತ್ತಾ, ತೋನ್ಸೆ ಜಯಕೃಷ್ಣ ಶೆಟ್ಟಿಯವರು ಓರ್ವ ನೇರ ನುಡಿಯ ವ್ಯಕ್ತಿತ್ವವನ್ನು ಹೊಂದವರು. ಯವುದೇ ಕೆಲಸವನ್ನು ನಿಸ್ವಾರ್ಥದಿಂದ ಮಾಡುವವರು ನಾಗಾರ್ಜುನ ಸ್ಥಾಪನೆಗೆ ಬಹಳಷ್ಟು ಅಡೆತಡೆಗಳೂ ಸಮಸ್ಯೆಗಳು ಬಂದರೂ ಪರಿಸರ ಪ್ರೇಮಿ ಸಮಿತಿ ಹೋರಾಟ ದಿಟ್ಟ ನಿಲುವಿನಿಂದಾಗಿ ಜಿಲ್ಲೆಯ ಜನರಿಗೆ ನಾಗಾರ್ಜುನದಿಂದ ಬಹಳಷ್ಟು ಪ್ರಯೋಜನವಾಗಿದೆ. ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ 22 ವರ್ಷಗಳ ಸಾಧನೆ ಸಾಮಾನ್ಯ ಜನರೂ ಕೂಡ ನೆನಪಿಸುವಂತಾಗಲಿ, ಮುಂದಿನ ದಿನಗಳಲ್ಲಿ ಜಿಲ್ಲೆಗಳ ಅಭಿವೃದ್ದಿಗೆ ಬೇಕಾಗುವ ಕಾರ್ಯಗಳು ಸಮಿತಿಯ ಮೂಲಕ ನಡೆಯಲಿ ಎಂದು ನುಡಿದರು.
ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಿತಿಯ ಜಿಲ್ಲೆಯ ಉಪಾಧ್ಯಕ್ಷ ಹಿರಿಯ ರಾಜಕಾರಿಣಿ ಜಗದೀಶ್ ಅಧಿಕಾರಿ ಮಾತನಾಡುತ್ತಾ, ಪೇಜಾವರ ಶ್ರೀಗಳ ಆಶೀರ್ವಾದದೊಂದಿಗೆ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಮಿತಿ ಸ್ಥಾಪನೆಗೊಂಡಿದೆ. ಜಾರ್ಜ್ ಫೆರ್ನಾಂಡಿಸ್ ರವರ ಒಡನಾಟ ಸದಾ ನೆನಪಿಸುವಂತದ್ದು,. ದೊಡ್ಡ ವ್ಯಕ್ತಿತ್ವದ ರಾಜಕಾರಣೀಯಾಗಿ ಸಾಮಾನ್ಯರಂತೆ ಬದುಕು ಕಟ್ಟಿದವರು. ಜಿಲ್ಲೆಯಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಯಾದುದರಿಂದ ಇಂದು ಕರ್ನಾಟಕದಲ್ಲಿ ಉಚಿತ ವಿದ್ಯುತ್ ಯೋಜನೆ ಜಾರಿಗೆ ತರುವಲ್ಲಿ ಸರಕಾರವು ಪರಿಸರ ಪ್ರೇಮಿ ಸಮಿತಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಯಾಕೆಂದರೆ ಜಿಲ್ಲೆಗೆ ಪರಿಸರ ಪ್ರೇಮಿ ಸಮಿತಿಯ ಹೋರಾಟದ ಮೂಲಕ ವಿದ್ಯುತ್ ಸ್ಥಾವರ ಸ್ಥಾಪನೆಯಾಗಿದೆ ಎಂದರು.
ವೇದಿಕೆಯಲ್ಲಿ ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ MLC, ಕರ್ನಾಟಕ ಸರ್ಕಾರ, ಎಐಸಿಸಿ ಕಾರ್ಯದರ್ಶಿ ಐವನ್ ಡಿಸಜಾ, ಮಾಜಿ ಎಂಎಲ್ಸಿ, ಕರ್ನಾಟಕ ಬಿಜೆಪಿ ಯ ವಕ್ತಾರರು ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ತುಂಗಾ ಗ್ರೂಪ್ ಆಫ್ ಹೋಟೆಲ್, ಸಿಎಂಡಿ ಸುಧಾಕರ ಎಸ್ ಹೆಗ್ಡೆ, ಪ್ರಶಸ್ತಿ ಸಮಿತಿಯ ಸಂಚಾಲಕ ಡಾ. ಆರ್, ಕೆ, ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಕೋಶಾಧಿಕಾರಿ ತುಳಸಿದಾಸ್ ಅಮೀನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ಪ್ರಯತ್ನ ಅರಣ್ಯ ಸೃಷ್ಟಿಕರ್ತರು ಭಾರತದ ಹಸಿರು ಹೀರೋ ಎಂದೇ ಖ್ಯಾತಿ ಪಡೆದ ಡಾ. ರಾಧಾಕೃಷ್ಣ ನಾಯರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನಿಸಲಾಯಿತು.
ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಡಾ. ರಾಧಾಕೃಷ್ಣ ನಾಯರ್ ಅವರು ಭಾರತ ದೇಶ ವಿಕಾಸವಾಗುತ್ತಿದೆ. ಅದು ನಮಗೆ ಅಗತ್ಯ ಅದರೊಂದಿಗೆ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಸಂಸ್ಥೆ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ಕೊಡುಗೆ ನಮ್ಮ ಜಿಲ್ಲೆಗೆ ಮಹತ್ವವಾಗಿದೆ. ಇಲ್ಲಿನ ಪ್ರಶಸ್ತಿ ನನ್ನ ಜೀವಮಾನ ಸಾಧನೆಗೆ ಸಂದ ಗೌರವ. ಜೂನ್ ತಿಂಗಳು ಅಂದರೆ ವನಮಹೋತ್ಸವಗಳ ಪರ್ಯಾಯ ತಿಂಗಳು. ಈ ಸಂದರ್ಭದಲ್ಲಿ ಜನ ವನ ಸಂರಕ್ಷಣೆಯ ಕೆಲಸವನ್ನು ಮಾಡಿ ಮತ್ತೆ ಮುಂದಿನ ವರ್ಷ ಅದರ ಬಗ್ಗೆ ಕಾರ್ಯಪ್ರವರ್ತರಾಗುತ್ತಾರೆ. ಈಗಾಗಬಾರದು. ವನ ಸಂರಕ್ಷಣೆ ನಮ್ಮ ಕೆಲಸವಾಗಲಿ. ಸಾವಿರಾರು ಜೀವ ಜಂತುಗಳಿಗೆ ಮಾನವ ಕುಲಕ್ಕೆ ಆಶ್ರಯಾಗುವ ಮರಗಳನ್ನು ಕಡಿದು ಮರಗಳನ್ನೇ ನಾಶ ಮಾಡುತ್ತಿದ್ದಾರೆ ಇದು ಸಲ್ಲದು, ಗುಜರಾಥ್ ನ ಕಚ್ಚ್ ನಂತಹ ಊರಲ್ಲಿ ಕೋರೋನ ಸಂಧರ್ಭದಲ್ಲಿ ಕೂಡಾ ವನ ಸಂರಕ್ಷಣಾ ಕಾರ್ಯವನ್ನು ಮಾಡಿದ್ದೇವೆ ಹಾಗೆ ಯಾವುದೇ ರೀತಿಯ ಕೊರೋನಾ ತೊಂದರೆ ನೀಡಿಲ್ಲ. ನಮ್ಮ ತುಳು ನಾಡಿನಲ್ಲಿ ವಿಶಿಷ್ಠಾವಾದ ಶಕ್ತಿ ಇದೆ. ನಾವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡಲ್ಲಿ ಅದನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸುವ ಶಕ್ತಿ ನಮ್ಮಲ್ಲಿದೆ. ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಕೆಲಸ ನಡೆದಿದೆ. ಮುಂದಿನ ದಿನಗಳಲ್ಲಿ ಕಾಡನ್ನು ಉಳಿಸಿ ನಾಡನ್ನು ಬೆಳೆಸುವ ಕಾರ್ಯ ಆಗಬೇಕು. ಅದರೊಂದಿಗೆ ನನ್ನ ಕರ್ತ್ಯವ್ಯವನ್ನು ನಿವಾರಿಸಲು ನಾನು ನಿಮ್ಮೊಂದಿಗೆ ಸಿದ್ದನಿದ್ದೇನೆ ಎಂದು ನುಡಿದರು.
ಅಭಿನಂದನಾ ಮಾತುಗಳನ್ನು ಪತ್ರಕರ್ತ ದಯ ಸಾಗರ್ ಚೌಟ ವಾಚಿಸಿದರು, ಹಿರಿಯ ಸಾಹಿತಿ ಡಾ. ಸುನಿತಾ ಶೆಟ್ಟಿ ರಚಿಸಿದ ಸಂಸದ ಗೋಪಾಲ ಶೆಟ್ಟಿಯವರ ಬಗ್ಗೆ ರಚಿಸಿದ ಕವಿತೆಯನ್ನು ಡಾ. ಸುರೇಂದ್ರ ಕುಮಾರ್ ಹೆಗ್ಡೆ ವಾಚಿಸಿದರು. ಡಾ. ಆರ್. ಕೆ ಶೆಟ್ಟಿ ಯವರು ಸ್ವಾಗತಿಸಿದರು. ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಅತಿಥಿಯನ್ನು ಎಚ್ ಮೋಹನ್ ದಾಸ್ ಪರಿಚಯಿಸಿದರು ,ಕಾರ್ಯದರ್ಶಿ ದೇವದಾಸ್ ಕುಲಾಲ ಅಬಾರ ಮನ್ನಿಸಿದರು.
ವೇದಿಕೆಯ ಗಣ್ಯರಿಗೆ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪ್ರಶಸ್ತಿ ಸಮಿತಿಯ ಸಂಚಾಲಕ ಡಾ. ಆರ್, ಕೆ, ಶೆಟ್ಟಿ, ಸಮಿತಿಯ ಉಪಾಧ್ಯಕ್ಷರುಗಳಾದ ಧನಂಜಯ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಸಿಎ ಐ ಆರ್ ಶೆಟ್ಟಿ,, ಹಿರಿಯಡ್ಕ ಮೋಹನ್ ದಾಸ್, ನ್ಯಾ ಆರ್.ಎಂ. ಭಂಡಾರಿ, ಗಿರೀಶ್ ಬಿ ಸಾಲ್ಯಾನ್, ಜಿತೇಂದ್ರ ಗೌಡ, ಗೌರವ ಪ್ರಧಾನ ಕಾರ್ಯದರ್ಶಿಯಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಕೋಶಾಧಿಕಾರಿ ತುಳಸಿದಾಸ್ ಅಮೀನ್, ಸಮಿತಿಯ ಮಾಜಿ ಅಧ್ಯಕ್ಷರು ಗಳಾದ ಎಡ್ವಕೇಟ್ ಪ್ರಕಾಶ್ ಎಲ್. ಶೆಟ್ಟಿ, ವಿಶ್ವನಾಥ್ ಮಾಡ, ಹರೀಶ್ ಕುಮಾರ್ ಶೆಟ್ಟಿ ಮತ್ತು ಜಿಲ್ಲೆಯ ಉಪಾಧ್ಯಕ್ಷರಾದ ಜಗದೀಶ್ ಅಧಿಕಾರಿ, ಗೌರವಿಸಿದರು.
ಪ್ರಾರಂಭದಲ್ಲಿ ತೋನ್ಸೆ ವಿಜಯಕುಮಾರ್ ಶೆಟ್ಟಿ ನಿರೂಪಣೆಯಲ್ಲಿ ವಿಜಯ್ ಶೆಟ್ಟಿ ಮೂಡುಬೆಳ್ಳೆ, ತೃಷಾ ಆಳ್ವ, ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಬಂಟರ ಸಂಘ ಮುಂಬೈಯ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯ ಧ್ಯಕ್ಷ ರಂಜನಿ ಸುಧಾಕರ ಹೆಗ್ಡೆ, ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ, ಬಾಂಬೆ ಬಂಟ್ಸ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ಅಧ್ಯಕ್ಷ ಹರೀಶ್ ಜಿ ಅಮೀನ್, ಕುಲಾಲ ಸಂಘದ ಅಧ್ಯಕ್ಷ ರಘು ಎ ಮೂಲ್ಯ ಪಾದೆಬೆಟ್ಟು, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಎಚ್ ಅರುಣ್ ಕುಮಾರ್, ಬಿಲ್ಲವ ಚೇಂಬರ್ ಆಫ್ ಕೋಮರ್ಸ್ ಅಂಡ್ ಇಂಡಸ್ಟ್ರೀಸ್ ಕಾರ್ಯ ಧ್ಯಕ್ಷ ಎನ್ ಟಿ ಪೂಜಾರಿ , ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಸಾಪಲ್ಯ ದೇವಾಡಿಗ ಸಂಘದ ಅಧ್ಯಕ್ಷ ಪ್ರವೀಣ್ ದೇವಾಡಿಗ, ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ಪ್ರಭಾಕರ್ ಭಂಡಾರಿ, ಅಖಿಲ ಕರ್ನಾಟಕ ಜೈನ ಸಂಘ ಅಧ್ಯಕ್ಷ ಮುನಿರಾಜ್ ಜೈನ್, ಶ್ರೀ ರಜಕ ಸಂಘದ ಅಧ್ಯಕ್ಷ ಸಿಎ ವಿಜಯಕುಂದರ್, ಜವಾಬ್ ನ ಅಧ್ಯಕ್ಷ ರಮೇಶ್ ಕೆ ಶೆಟ್ಟಿ, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕೋಮರ್ಸ್ ನ ಕಾರ್ಯದರ್ಶಿ ಕೆ. ಶಿ. ಶೆಟ್ಟಿ, ಬಂಟ್ಸ್ ಲಾ ಫರ್ಮ್ನ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಗಾಣಿಗ ಸಂಘದ ಅಧ್ಯಕ್ಷ ಬಿ. ವಿ. ರಾವ್, ಪದ್ಮಶಾಲಿ ಸೇವಾ ಸಂಘದ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್, ಜಿಎಸ್ಬಿ ಸೇವಾ ಮಂಡಲದ ವಿಜಯಾ ಕಾಮತ್, ಅಂಧೇರ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ ಸುವರ್ಣ, ಇತರ ಜಾತಿಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ತುಳು ಕನ್ನಡ ಸಂಘ-ಸಂಸ್ಥೆಯ ಪದಾಧಿಕಾರಿಗಳು ಅಪಾರ ಸಂಸ್ಥೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಗೌರವ ಕಾರ್ಯದರ್ಶಿಗಳಾದ, ಬಿ. ಮುನಿರಾಜ್ ಜೈನ್, ದೇವದಾಸ್ ಕುಲಾಲ್, ರವಿ ದೇವಾಡಿಗ, ಜೊತೆ ಕೋಶಾಧಿಕಾರಿಗಳಾದ ಸದಾನಂದ ಆಚಾರ್ಯ ಮತ್ತು ತೋನ್ಸೆ ಸಂಜೀವ ಪೂಜಾರಿ ಸದಸ್ಯರುಗಳಾದ, ಎಂ. ಎನ್. ಕರ್ಕೇರ, ರಾಮಚಂದ್ರ ಗಾಣಿಗ, ದಯಾಸಾಗರ ಚೌಟ, ಶ್ಯಾಮ್ ಎನ್. ಶೆಟ್ಟಿ, ಕರುಣಾಕರ ಹೆಜ್ಮಾಡಿ, ವಾಸು ಎಸ್ ದೇವಾಡಿಗ, ಡಾ. ಸುರೇಂದ್ರಕುಮಾರ್ ಹೆಗ್ಡೆ, ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ, ರಮಾನಂದ ರಾವ್, ರಾಮಚಂದ್ರ ಗಾಣಿಗ, ಶ್ರೀನಿವಾಸ್ ಸಾಪಲ್ಯ, ಚಿತ್ರಾಪು ಕೆ. ಎಂ. ಕೋಟ್ಯಾನ್, ರಾಕೇಶ್ ಭಂಡಾರಿ, ಜಯಪ್ರಕಾಶ್ ಕಾಮತ್, ನ್ಯಾ. ಶಶಿಧರ ಕಾಪು, ಜಿ.ಎಸ್. ಗಣೇಶ್ ಎಸ್ ಶೆಟ್ಟಿ, ಉಪಸ್ಥರಿದ್ದರು.
===
ಪರಿಸರ ಪ್ರೇಮಿಯ ಕಾರ್ಯಗಳು ದೇವರ ನಿಯಮದಂತೆ ಸಾಗುತ್ತಿದೆ: ಸಂಸದ ಗೋಪಾಲ ಶೆಟ್ಟಿ
ಉತ್ತರ ಮುಂಬಯಿಯ ಸಂಸದ ಗೋಪಾಲ ಶೆಟ್ಟಿ ಯವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಎಲ್ಲಾ ಸಮಾಜದ ನಾಯಕರನ್ನು ಒಟ್ಟು ಗೂಡಿಸಿದ ಕೀರ್ತಿಯು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಗಿದೆ. ಹಸಿರನ್ನು ಉಸಿರಾಗಿರಿಸುವ ಆರ್. ಕೆ. ನಾಯರ್ ರವರ ಸೇವೆ ದೊಡ್ಡ ಸಾಧನೆಯಾಗಿದೆ. ಗುಜರಾಥ್ ನ ಕಚ್ ನಲ್ಲಿ ದೊಡ್ಡ ಮಟ್ಟದ ಕ್ರಾಂತಿಯನ್ನು ನಡೆಸುವುದು ಸುಲಭ ಸಾಧ್ಯವಲ್ಲ. ಜಯಕೃಷ್ಣ ಶೆಟ್ಟಿ ಯವರು ಈ ಸಂಸ್ಥೆಯನ್ನು ಪ್ರಾರಂಭಿಸುವಾಗ ದೇವರೇ ಸಂಕಲ್ಪ ಕಲ್ಪಿಸಿರಬೇಕು. ಯಾಕೆಂದರೆ ದೊಡ್ಡ ಮಟ್ಟದ ಅಭಿವೃದ್ದಿ ಯೋಜನೆ ಸಾಮಾನ್ಯ ಕೆಲಸವಲ್ಲ. ಹೋರಾಟದ ಮೂಲಕನ್ ಜಿಲ್ಲೆಗಳನ್ನು ಅಭಿವ್ರುದ್ದಿಗೊಳಿಸಿದ್ದು ಮುಂದಿನ ದಿನಗಳಲ್ಲೂ ಕೂಡಾ ಇನ್ನಷ್ಟು ಅಭಿವೃದ್ದಿಯ ಕಾರ್ಯಗಳು ದೇವರು ನಿಮ್ಮಿಂದ ನಡೆಸುವಂತಾಗಲಿ. ಇಂತಹ ಕಾರ್ಯಕ್ರಮಕ್ಕೆ ಜನ ಕಡಿಮೆ ಸೇರುತ್ತಾರೆ ಆದರೆ ಇಲ್ಲಿ ಎಲ್ಲಾ ಸಮಾಜದ ನಾಯಕರು ಸೇರಿದ್ದಾರೆ ಅದು ಕೂಡಾ ಒಬ್ಬ ರಾಜಕೀಯ ಸಂತನಿಗೆ ನಮನ ಸಲ್ಲಿಸಲು. ಪ್ರತಿಯೊಬ್ಬ ಕೂಡಾ ಒಂದೆರಡು ತಾಸು ಸಮಾಜದ ಅಭಿವೃದ್ದಿ ಕಾರ್ಯಕ್ಕೆ ವಿನಿಯೋಗಿಸುವಂತಾಗಲಿ.
====
ಪರಿಸರ ಪ್ರೇಮಿ ಸಮಿತಿಯ ಎಲ್ಲಾ ಯೋಜನೆಗಳಿಗೆ ಸರಕಾರದಿಂದ ಸಹಕಾರವನ್ನು ನೀಡುವಲ್ಲಿ ನಾನು ಕೂಡ ಪ್ರಯತ್ನಿಸುತ್ತೇನೆ: ನ್ಯಾಯವಾದಿ ಐವನ್ ಡಿಸೋಜ
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಎಐಸಿಸಿ ಕಾರ್ಯದರ್ಶಿ ಮಾಜಿ ಎಂ ಎಲ್ ಸಿ ಯುವ ನ್ಯಾಯವಾದಿ ಐವನ್ ಡಿಸೋಜ ಮಾತನಾಡಿ, ಕಾರ್ಯಕ್ರಮವನ್ನು ಕಂಡಾಗ ಮಂಗಳೂರಲ್ಲಿ ಇದ್ದಂತೆ ಭಾಸವಾಗುತ್ತದೆ. ಬಹಳ ಸಂಖ್ಯೆಯಲ್ಲಿ ವಿವಿಧ ಸಮಾಜದ ಮುಖಂಡರುಗಳು ಇಲ್ಲಿ ಸೇರಿದ್ದಾರೆ. ಚರಿತ್ರೆಯನ್ನು ನಿರ್ಮಿಸಿದವರು ಜಾರ್ಜ್ ಫೆರ್ನಾಂಡಿಸ್ ನೆನಪು ಒಂದೆಡೆಯಾದರೆ. ಚರಿತ್ರೆಯನ್ನು ನಿರ್ಮಿಸಲು ಹೊರಟವರು ಆರ್ ಕೆ ನಾಯರ್ ಅವರಿಗೆ ಜಾರ್ಜ್ ಅವರ ಹೆಸರಿನ ಪ್ರಶಸ್ತಿ ಪ್ರಧಾನಿಸಿದ್ದು ಸೂಕ್ತವೆನಿಸಿದೆ. ಜಾರ್ಜ್ ಫೆರ್ನಾಂಡಿಸ್ ರವರು ಕಾರ್ಮಿಕರಿಗೆ ಬಲವನ್ನು ಕೊಟ್ಟವರು. ಕಷ್ಟವನ್ನು ಅನುಭವಿಸಿದವರು. ಇವತ್ತು ಪರಿಸರ ಪ್ರೇಮಿ ಸಮಿತಿ ಜಾರ್ಜ್ ಫೆರ್ನಾಂಡಿಸ್ ಹೆಸರನ್ನು ಮಂಗಳೂರು ವಿಮಾನ ನಿಲ್ಧಾಣಕ್ಕೆ ಇಡಬೇಕೆನ್ನುವಾಗ ಅದು ಬೇಡ ಎನ್ನುವ ಜನ ಜಿಲ್ಲೆಯಲ್ಲಿ ಇದ್ದಾರೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಇಂದಿನ ಈ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದೆ. ಜಿಲ್ಲೆಯ ಅಭಿವೃದ್ಧಿಯ ಕನಸು ಕಂಡ ಪರಿಸರ ಪ್ರೇಮಿ ಸಮಿತಿಯ ಎಲ್ಲಾ ಯೋಜನೆಗಳಿಗೆ ಸರಕಾರದಿಂದ ಸಹಕಾರವನ್ನು ನೀಡುವಲ್ಲಿ ನಾನು ಕೂಡ ಪ್ರಯತ್ನಿಸುತ್ತೇನೆ ಎಂದು ನುಡಿದರು.
======
ಪರಿಸರ ಪ್ರೇಮಿ ಸಮಿತಿ ಜಿಲ್ಲೆಗಳನ್ನು ಸಮೃದ್ದಿ ಗೊಳಿಸುವಲ್ಲಿ ಇನ್ನಷ್ಟು ಬಲಿಷ್ಠವಾಗಬೇಕು: ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಮತ್ತೋರ್ವ ಮುಖ್ಯ ಅತಿಥಿ ಮಾಜಿ ಎಂ ಎಲ್ ಸಿ ಬಿಜೆಪಿ ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡುತ್ತಾ, ಕರ್ನಾಟಕ ಸರಕಾರಕ್ಕೆ ಈಗಾಗಲೇ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಕಾರ್ಯಚಟುವಟಿಕೆಗಳು, ಯೋಜನಗಳನ್ನು ತಲಪಿಸಿದ್ದೇವೆ. ಅದು ಕಾರ್ಯಗತವಾಗಲು ಈಗಿನ ಸರಕಾರದಲ್ಲಿ ಅನ್ಯೋನ್ಯ ಸಂಬಂಧವಿರುವ ಐವನ್ ಡಿ’ಸೋಜಾ ಅವರು ನಮ್ಮೊಂದಿಗೆ ಸೇರಿಕೊಳ್ಳಬೇಕು. ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿಗೊಳ್ಳುತ್ತಿದೆ ಆದರೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಹಿಂದಿದ್ದೇವೆ. ಜಾರ್ಜ್ ರಾಜಕೀಯ ಸಂತನಾಗಿ ಬೆಳೆದವರು. ಎಲ್ಲ ರಾಜಕಾರಣಿಗಳಿಗೆ ಆದರ್ಶರಾದವರು. ಅವರೂ ತುಳು ನಾಡಿನಿಂದ ಬಂದು ಮುಂಬಯಿ ಹಾಗೂ ಉತ್ತರ ಭಾರತದಲ್ಲಿ ಬದುಕು ಕಟ್ಟಿ ರಾಜಕಾರಣಿಯಾಗಿ ಬೆಳೆದದ್ದು ಸಾಮಾನ್ಯ ಕೆಲಸವಲ್ಲ. ಪರಿಸರ ಪ್ರೇಮಿ ಸಮಿತಿ ಜಿಲ್ಲೆಗಳನ್ನು ಸಮೃದ್ದಿಗೊಳಿಸಬೇಕು. ಕಾಡನ್ನು ನಾಶ ಮಾಡದೆ ಉದ್ಯಮಗಳು ನಗರವನ್ನು ಪ್ರವೇಶಿಸುವಂತಾಗಬೇಕು ಎಂದರು.
======
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ಕಳೆದ 22 ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ.:
ಸುರೇಶ್ ಶೆಟ್ಟಿ ಗುರ್ಮ: ವಿಶೇಷ ಆಮಂತ್ರಿತರಾಗಿ ವೇದಿಕೆಯನ್ನು ಪಾಲ್ಗೊಂಡಿದ್ದ ಕಾಪು ಕ್ಷೇತ್ರದ ನೂತನ ಶಾಸಕ ಸುರೇಶ್ ಶೆಟ್ಟಿ ಗುರ್ಮ ಅವರು ಮಾತನಾಡುತ್ತಾ ನಮ್ಮ ಅಲ್ಪಕಾಲದ ಬದುಕಲ್ಲಿ ಸಾರ್ಥಕ ಸೇವೆ ಮಾಡಿದಾಗ ಜೀವನದ ಮೌಲ್ಯಗಳು ಅರ್ಥವಾಗುತ್ತದೆ. ನಾನು ಶಾಸಕನಾಗುವ ಮೊದಲು ಜಗತ್ತಿನ ಬಹುತೇಕ ದೇಶಗಳನ್ನು ಸುತ್ತಿಕೊಂಡಿದ್ದೇನೆ. ಅಲ್ಲಿನ ಅಭಿವೃದ್ದಿಯ ಬೆಳವಣಿಗೆಯನ್ನು ಕಂಡಿದ್ದೇನೆ ಅದನ್ನು ನನ್ನ ಕ್ಷೇತ್ರದಲ್ಲಿ ಕೂಡಾ ಮಾಡುವಂತಾಗಲು ಪ್ರಯತ್ನಿಸುತ್ತೇನೆ. ಈ ಹಿಂದಿನ್ನ ಮುಖ್ಯ ಮಂತ್ರಿಗೆ ಕರಾವಳಿಯ ಹೆಜಮಾಡಿಯಲ್ಲಿ ಬಂದರು ನಿರ್ಮಾಣ ಮಾಡಲು ಪ್ರಸ್ತಾವನೆಯನ್ನು ನೀಡಿದ್ದೆ. ಅದರಿಂದ ಕೇವಲ ಮೊಗವೀರ ಬಂಧುಗಳಿಗೆ ಮಾತ್ರವಲ್ಲ ಜಿಲ್ಲೆಯ ಜನತೆ ಉದ್ಯೋಗ ಶೃಷ್ಟಿಯಾಗುತ್ತದೆ. ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳನ್ನು ಹೊರಗಿನವರು ಸುತ್ತಿಕೊಂಡಾಗ ಹೋಗುತ್ತಾರೆ ಅದಕ್ಕೆ ಪೂರಕವಾಗಿ ಪ್ರವಾಸ ಕೇಂದ್ರಗಳು ನಿರ್ಮಾಣಗೊಂಡಾಗ ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ನಾವು ಕೇವಲ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಕೇಂದ್ರ ವಾಗಿರಿಸಿದ್ದೇವೆ. ನಮ್ಮಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ಕಳೆದ 22 ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಅದರಿಂದಾಗಿ ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರಕಿದೆ. ನಾನೊಬ್ಬ ಶಾಸಕನಾಗಿ ನನ್ನಿಂದಾಗುವ ಕಾರ್ಯವನ್ನು ನನಗೆ ತಿಳಿಸಿದಲ್ಲಿ ನಾನು ಅದನ್ನು ಮಾಡುತ್ತೇನೆ. ಉದ್ಯಮಿಗಳಾಗಿ ಸಮಾಜ ಸೇವಕರಾಗಿ ನೀವು ಕೂಡಾ ಜಿಲ್ಲೆಗಳ ಅಭಿವೃದ್ದಿಗೆ ಚಿಂತಿಸಬೇಕು. ನಮಗೆಲ್ಲರಿಗೂ ಒಂದು ಋಣ ಇದೆ ಎಂದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ