ಜೂನ್ 8: ಗೋವಿಂದ ದಾಸ ಕಾಲೇಜಿನಲ್ಲಿ ಯೋಗ ಕಾರ್ಯಾಗಾರ

Chandrashekhara Kulamarva
0


ಸುರತ್ಕಲ್‌:
ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಗೋವಿಂದ ದಾಸ ಕಾಲೇಜು ಅಲುಮ್ನಿ ಅಸೋಸಿಯೇಶನ್, ಬುದ್ಧ- ಸಿಇಒ ಕ್ವಾಂಟ್‍ಮ್ ಫೌಂಡೇಶನ್, ಶ್ರೀ ಎಂ. ಶಂಕರನಾರಾಯಣಯ್ಯ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀಮತಿ ಎಂ. ಸುಮತಿ ಫೌಂಡೇಶನ್ ವತಿಯಿಂದ ಜೂನ್ 8 ರಂದು ಅಪರಾಹ್ನ 1.30 ರಿಂದ ಗೋವಿಂದ ದಾಸ ಕಾಲೇಜಿನಲ್ಲಿ ಆತ್ಮವಿಶ್ವಾಸ, ಸ್ಪಷ್ಟತೆ ಹಾಗೂ ಅಭಿವ್ಯಕ್ತಿ ಗಾಗಿ ಯೋಗ ಕಾರ್ಯಗಾರ ನಡೆಯಲಿದೆ. 


ಬುದ್ಧ- ಸಿಇಒ ಕ್ವಾಂಟ್‍ಮ್ ಫೌಂಡೇಶನ್‍ನ ಸ್ಥಾಪಕ ಹಾಗೂ ಧ್ಯಾನ ಗುರು ಚಂದ್ರ ಪುಲಮರಸೆಟ್ಟಿ ಪ್ರಧಾನ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನಡೆಸಿ ಕೊಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top