ಜೂ.30: ಕು. ದಿಶಾ ಮಂಗನಹಳ್ಳಿ ಭರತನಾಟ್ಯ ರಂಗಪ್ರವೇಶ

Chandrashekhara Kulamarva
0


ಬೆಂಗಳೂರು: ನೃತ್ಯ ದಿಶಾ ಟ್ರಸ್ಟಿನ ರೂವಾರಿ 'ಕಲಾಭೂಷಿಣಿ' ಗುರು ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ಕು. ದಿಶಾ ಮಂಗನಹಳ್ಳಿ ಭರತನಾಟ್ಯ ರಂಗ ಪ್ರವೇಶಕ್ಕೆ ಅಣಿಯಾಗಿದ್ದಾಳೆ. ಜೂನ್ 30, ಶುಕ್ರವಾರ ಸಂಜೆ 5-00 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.


ರಂಗಪ್ರವೇಶಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಎಂ. ಸೂರ್ಯಪ್ರಸಾದ್, ಗುರು.ಶ್ರೀಮತಿ ಉಷಾ ದಾತಾರ್, ಡಾ. ಸಿ. ನಿರ್ಮಲಾ ಯಲಿಗಾರ್, ಮೃದಂಗ ವಿದ್ವಾನ್ ರೇಣುಕಾ ಪ್ರಸಾದ್, ಡಾ. ವಿದ್ಯಾಕುಮಾರಿ ಆಗಮಿಸಲಿದ್ದಾರೆ.


ದಿಶಾ ರಂಗಪ್ರವೇಶ ಪ್ರಸ್ತುತಿಗೆ ಗುರು ಶ್ರೀಮತಿ ದರ್ಶಿನಿ ಮಂಜುನಾಥ್ (ನಾಟುವಾಂಗ), ವಿದುಷಿ ಶ್ರೀಮತಿ ಭಾರತಿ ವೇಣುಗೋಪಾಲ್ (ಗಾಯನ), ಎಸ್.ವಿ. ಗಿರಿಧರ್ (ಮೃದಂಗ), ವಿದ್ವಾನ್ ಸಿ. ಮಧುಸೂದನ್ (ಪಿಟೀಲು), ಎಚ್.ಎಸ್. ವೇಣುಗೋಪಾಲ್ (ಕೊಳಲು), ಡಿ.ವಿ. ಪ್ರಸನ್ನಕುಮಾರ್ (ರಿದಂಪಾಡ್).


ಭರವಸೆಯ ಪ್ರತಿಭೆ: ಕು. ದಿಶಾ ಕಳೆದ 15 ವರ್ಷಗಳಿಂದ ನೃತ್ಯ ಅಭ್ಯಸಿಸುತ್ತಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಜೂನಿಯರ್ ಸೀನಿಯರ್ ಹಾಗೂ ಗಂಧರ್ವ ಪರೀಕ್ಷೆ ಮಾಧ್ಯಮ ಪ್ರಥಮಗಳನ್ನು ಉತ್ತಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ನೃತ್ಯ ದಿಶಾ ಸಂಸ್ಥೆಯ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ದಿಶಾ ಪ್ರಸ್ತುತ ದೇವಾಂಗ ಕಾಲೇಜಿನಲ್ಲಿ ಅಂತಿಮ ವರ್ಷ ಬಿಕಾಂ ಪದವಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
To Top