ಕರ್ನಾಟಕ ರಾಜ್ಯ ಬರಹಗಾರರ ಸಂಘ- ನಾಳೆ (ಮೇ 7) ಆನ್ಲೈನ್ ರಾಜ್ಯಮಟ್ಟದ ಜಾನಪದ ಗೀತಾಗಾಯನ ಸ್ಪರ್ಧೆ

Upayuktha
0

 


ಹಾಸನ: ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಇವರಿಂದ ಭಾನುವಾರ ಮೇ 7ರ ಸಂಜೆ 5 ಗಂಟೆಗೆ ರಾಜ್ಯಮಟ್ಟದ ಜಾನಪದ ಗೀತ ಗಾಯನ ಸ್ಫರ್ಧೆ ನಡೆಯಲಿದೆ.


ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರು ಚಂದ್ರಶೇಖರ ಹಡಪದ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಆನ್ ಲೈನ್ ಗೂಗಲ್ ಮೀಟ್‍ನಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಸಂಚಾಲಕರು ಧರ್ಮಣ್ಣ ಹೆಚ್.ದನ್ನಿ, ಸಾಹಿತಿಗಳಾದ ಗೊರೂರು ಅನಂತರಾಜು, ಶ್ರೀಮತಿ ಪುಷ್ಪ ಕೃಷ್ಣ, ಅಮೇರಿಕ, ರಾಮು ಎನ್ ರಾಠೋಡ್ ಮಸ್ಕಿ ಭಾಗವಹಿಸುವರು. 


ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ವಿದುಷಿ ಗಾಯಕಿ ಡಾ.ರಮ್ಯ ಸೂರಜ್ ಬೆಂಗಳೂರು ಹಾಗೂ ಸರಿಗಮಪ ಝಿ ಟಿವಿ ಸರ್ವಜ್ಞ ರಾಠೋಡ್ ಇವರು ತೀರ್ಪುಗಾರರಾಗಿದ್ದು ನಾಡಿನಾದ್ಯಂತ 42 ಜಾನಪದ ಗಾಯಕರು ಸ್ಫರ್ಧೆಯಲ್ಲಿ ಭಾಗವಹಿಸುವರೆಂದು ರಾಜ್ಯಧ್ಯಕ್ಷ ಮಧುನಾಯ್ಕ್ ಲಂಬಾಣಿ ಅವರು ತಿಳಿಸಿದ್ದಾರೆ. 


ಮನೆ ಮನೆ ಕವಿಗೋಷ್ಠಿ : 'ಡಾ. ಎಸ್.ಎಲ್.ಬೈರಪ್ಪರವರ ಬದುಕು ಬರಹ' ಉಪನ್ಯಾಸ


ಹಾಸನದ ಮನೆ ಮನೆ ಕವಿಗೋಷ್ಠಿ ವತಿಯಿಂದ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರು ಗಂಗಾಧರ ಬಿ.ಕೆ. ಇವರ ಪ್ರಾಯೋಜನೆಯಲ್ಲಿ ಮೇ 7 ಭಾನುವಾರ ಮ. 3.30ಕ್ಕೆ ಹಾಸನ ನಗರ ಶಂಕರ ಮಠ ರಸ್ತೆ, ಕೆ.ಆರ್.ಪುರಂನ ಮಹಾರಾಷ್ಟ್ರ ಬ್ಯಾಂಕ್ ಎದುರಿನ ಅಕ್ಷರ ಬುಕ್ ಹೌಸ್‍ನಲ್ಲಿ ನಡೆಯುವ 305ನೇ ತಿಂಗಳ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ  ಡಾ.ಎಸ್.ಎಲ್.ಬೈರಪ್ಪನವರ ಬದುಕು ಮತ್ತು ಬರಹ ಕುರಿತು ಲೇಖಕ ಹಾಗೂ ಆಂಗ್ಲಭಾಷಾ ಉಪನ್ಯಾಸಕ ಗೊರೂರು ಶಿವೇಶ್ ಉಪನ್ಯಾಸ ನೀಡಲಿದ್ದಾರೆ. 

ನಂತರ ಆಗಮಿತ ಕವಿಗಳಿಂದ ಕವಿಗೋಷ್ಠಿ ಹಾಗೂ ಗಾಯಕರಿಂದ ಗಾಯನ ಕಾರ್ಯಕ್ರಮ ಇರುವುದಾಗಿ ಸಂಚಾಲಕರಾದ ಗೊರೂರು ಅನಂತರಾಜು ತಿಳಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top