ಮೇ 7: ಕೋಡಿಕಲ್‌ನಲ್ಲಿ 'ನರಕಾಸುರ ವಧೆ ಗರುಡ ಗರ್ವಭಂಗ' ಯಕ್ಷಗಾನ ಬೊಂಬೆಯಾಟ

Upayuktha
0


ಮಂಗಳೂರು: ಕೋಡಿಕಲ್‌ನ ಬೆನಕ ಸಭಾಭವನದಲ್ಲಿ ಮೇ 7ರಂದು ಭಾನುವಾರ ಸಂಜೆ 5:30ರಿಂದ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದವರಿಂದ 'ನರಕಾಸುರ ವಧೆ ಗರುಡ ಗರ್ವಭಂಗ' ಯಕ್ಷಗಾನ ಬೊಂಬೆಯಾಟ ಪ್ರದರ್ಶನ ನಡೆಯಲಿದೆ.


ವಿಪ್ರ ವೇದಿಕೆ ಕೋಡಿಕಲ್‌  ಸಹಕಾರದೊಂದಿಗೆ ಕೊಟ್ಟಾರದ 'ಭರತಾಂಜಲಿ' ನೃತ್ಯ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿದೆ. ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗವಿದೆ.


ಈ ಕಾರ್ಯಕ್ರಮವನ್ನು ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ರಾಜ್ಯ ಸಹ ಸಂಚಾಲಕಿ ಚೇತನಾ ಬಿ ದತ್ತಾತ್ರೇಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ವಿಪ್ರ ವೇದಿಕೆ ಕೋಡಿಕಲ್ ನಿಕಟಪೂರ್ವ ಅಧ್ಯಕ್ಷೆ ವಿದ್ಯಾರಾವ್ ಭಾಗವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top