ಕರ್ನಾಟಕ ವಿಧಾನಸಭೆ ಚುನಾವಣೆ 2023- ಲೈವ್ ಅಪ್‌ಡೇಟ್ಸ್...

Upayuktha
0

ಕರುನಾಡ ಕದನ- ಜನಾದೇಶ 2023- ಮತದಾನ ಹಬ್ಬ

ರಾಜ್ಯಾದ್ಯಂತ ಮತದಾನ ಆರಂಭ. ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ನಡೆಯಲಿರುವ ಮತದಾನ.



ಅಪರಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ಶೇ.41ರಷ್ಟು ಮತದಾನ


ಬೆಳಗಾವಿ ಜಿಲ್ಲೆಯಲ್ಲಿ ಬರೋಬ್ಬರಿ 9 ಕಡೆ ಮತದಾನ ಸ್ಥಗಿತ
ಬೆಳಗಾವಿ ಜಿಲ್ಲೆಯ  ಕಿತ್ತೂರು, ದೇವಾಗಾಂವ, ಮೂಡಲಗಿ ಪಟ್ಟಣ, ಅರಬಾವಿ, ನೇಸರಗಿ,ಕಾದ್ರೋಳ್ಳಿ, ಮತಯಂತ್ರ  ತಾಂತ್ರಿಕ ದೋಷದಿಂದ ಮತದಾನ ಸ್ಥಗಿತಗೊಂಡಿದ್ದರಿಂದ ಜನರು ಮತದಾನ ಮಾಡಲು ಕಾದು ಕಾದು ಸುಸ್ತಾದರು. 


ಬಿಟಿಎಂ ಲಕ್ಕಸಂದ್ರದಲ್ಲಿ ಕಾಂಗ್ರೇಸ್ ಬಿಜೆಪಿ ಕಾರ್ಯಕತ್ರರ ನಡುವೆ ಗಲಾಟೆ
ಬಿಟಿಎಂ ಲಕ್ಕಸಂದ್ರದಲ್ಲಿ ಕಾಂಗ್ರೇಸ್ ಬಿಜೆಪಿ ಕಾರ್ಯಕತ್ರರ ನಡುವೆ ಮಾತದಾನ ಚೀಟಿ ನೀಡುವ ವಿಷಯಕ್ಕೆ ವಾಗ್ವಾದ ನಡೆದಿದೆ.


ಕೋಲಾರದ ಕಟೋರಿ ಗ್ರಾಮದಲ್ಲಿ ಕೂಡ ಗಲಭೆ
ಕೋಲಾರದ ಕಟೋರಿಯಲ್ಲಿ ಕಿಡಿಗೇಡಿಗಳಿಂದ ಗಲಾಟೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ  ಕೃಷ್ಣಪ್ಪ ಅವರ ಮೇಲೆ ಹಲ್ಲೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.


ಬೆಳಗ್ಗೆ 1.00 ಗಂಟೆಯ ವೇಳೆಗೆ ಉಡುಪಿ ಜಿಲ್ಲೆಯಲ್ಲಿ ಶೇ.47.79ರಷ್ಟು ಮತದಾನವಾಗಿದೆ.


ಬೆಳಗ್ಗೆ 1.00 ಗಂಟೆಯ ವೇಳೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.42.43ರಷ್ಟು ಮತದಾನವಾಗಿದೆ.


ಮೈಸೂರಿನ ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣಗೆ ಬೂತ್ ಪರಿಶೀಲನೆಗೆ ಅಡ್ಡಿ

ಮೈಸೂರಿನ ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣನವರು ಬೂತ್ ಪರಿಶೀಲನೆಗೆ ಬಂದಾಗ ಕಾಂಗ್ರೆಸ್‌ ಕಾರ್ಯಕರ್ತರು ನೀವೇಕೆ ಬಂದಿದ್ದೀರಾ ನೀವು ಪ್ರಜೆಗಳನ್ನು ತಮ್ಮತ್ತ ಸೆಳೆಯುತ್ತೀರಿ ಎಂದು ಹೇಳಿ ಗಲಭೆಯನ್ನು ಮಾಡಿದ್ದಾರೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಮಾತಿನ ಜಟಾಪಟಿಗೆ ನಿಂತಿದ್ದಾರೆ. ಬಿಜೆಪಿಗೆ ಜೈಕಾರ ಕೂಗಿದ್ದಾರೆ.


ವಿಜಯಪುರದಲ್ಲಿ ಮಸಬಿನಾಳದಲ್ಲಿ ಗಲಭೆ

ವಿಜಯಪುರದಲ್ಲಿ ಮಸಬಿನಾಳದಲ್ಲಿ ಕಾಯ್ದಿರಿಸಿದ್ದ EVM ಎತ್ತಿಕೊಂಡು ಹೋಗಿದ್ದನ್ನು ತಪ್ಪಾಗಿ ತಿಳಿದು ಅಲ್ಲಿಯ ಗ್ರಾಮಸ್ಥರು ಮತಯಂತ್ರಗಳನ್ನು ಪುಡಿ ಪುಡಿ ಮಾಡಿ ಗಲಭೆಗೆ ಕಾರಣವಾಗಿದೆ.


ಕೊಪ್ಪಳದ ಹ್ಯಾಟಿ ಗ್ರಾಮದಲ್ಲಿ ಕೈಕೊಟ್ಟ ಮತಯಂತ್ರ

ಕೊಪ್ಪಳದ ಕೆಲವು ಕಡೆ ಮತಯಂತ್ರಗಳು ದೋಷಗಳು ಕಂಡುಬಂದಿದೆ.

ಬೆಳಗ್ಗೆ 11 ಗಂಟೆಯ ವೇಳೆಗೆ ಉಡುಪಿ ಜಿಲ್ಲೆಯಲ್ಲಿ ಶೇ.30.26ರಷ್ಟು ಮತದಾನವಾಗಿದೆ.


ಬೆಳಗ್ಗೆ 11 ಗಂಟೆಯ ವೇಳೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.25.16ರಷ್ಟು ಮತದಾನವಾಗಿದೆ.


ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕುಟುಂಬಸ್ಥರೊಂದಿಗೆ ಮತದಾನ 

ಧರ್ಮಸ್ಥಳ: ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಹಾಗೂ ಮಾನ್ಯ ರಾಜ್ಯಸಭಾ ಸಂಸದರಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕುಟುಂಬಸ್ಥರೊಂದಿಗೆ ಬಂದು ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ಜೊತೆಗೆ ಹೇಮಾವತಿ ವಿ. ಹೆಗ್ಗಡೆಯವರು, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ ಚಲಾಯಿಸಿದರು.


ವಡಗೇರೆ ತಾಲೂಕಿನ ಗುರಸಣಗಿ ಮತಗಟ್ಟೆಯಲ್ಲಿ ಮಂಗಗಳ ಹಾವಳಿ

ವಡಗೇರೆ ತಾಲೂಕಿನ ಗುರಸಣಗಿ ಸರ್ಕಾರಿ ಶಾಲೆಯ ಮತಗಟ್ಟೆಯ ಶಾಮಿಯಾನಗಳ ಮೇಲೆ ಮಂಗಗಳ ಹಾವಳಿ ಮಂಗಗಳನ್ನು ಓಡಿಸಲು ಮತಗಟ್ಟೆ ಸಿಬ್ಬಂದಿಗಳ ಹರಸಾಹಸ.


ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ದಂಪತಿ ಮತದಾನ

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ದಂಪತಿಗಳು ಬೆಂಗಳೂರಿನ ಜಯನಗರ ಬಿಇಎಸ್‌ ಕಾಲೇಜಿನಲ್ಲಿ ಮತದಾನ ಮಾಡಿದರು.

ಯಾವುದಾದರೂ ಬದಲಾವಣೆ ತರಬೇಕಾದರೆ ಅಥವಾ ನಿಮ್ಮದೇ ಯಾವುದಾದರೂ ಯೋಜನೆ ಕಾರ್ಯರೂಪಕ್ಕೆ ತರಬೇಕಾದರೆ ಅದಕ್ಕೆ ತಕ್ಕನಾದ ನಾಯಕನನ್ನು ಆರಿಸಬೇಕಾದರೆ ಮತದಾನ ಮಾಡಲೇಬೇಕು. ಮತದಾನ ಮಾಡದೇ ಇರುವವರು ದೇಶ ಭಕ್ತರಲ್ಲ. 

                                     -ಡಾ.ಸುಧಾಮೂರ್ತಿ


ಮೈಸೂರಿನಲ್ಲಿ ಮೊದಲ ಮತದಾನ ಮಾಡಿದ ಮಂಗಳಮುಖಿಯವರು

ಮೈಸೂರಿನ ಕೆ.ಆರ್.ಪೇಟೆ ಗಳಿಗೆಕೆರೆ ಗ್ರಾಮದ ಮತಗಟ್ಟೆಯಲ್ಲಿ ಮೊದಲ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.


ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮತ ಚಲಾವಣೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಅವರು ಬೆಂಗಳೂರಿನ ಶೇಷಾದ್ರಿಪುರಂ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಮತ ಚಲಾವಣೆ ಮಾಡಿದರು. ನಂತರ ಗೆಳೆಯರೊಂದಿಗೆ ಫೋಟೊ ತೆಗೆಸಿಕೊಂಡರು.


ಜನಾರ್ದನ ರೆಡ್ಡಿ ಮತದಾನ

ಗಂಗಾವತಿಯಲ್ಲಿ ಮತ ಚಲಾಯಿಸಿದ ಜನಾರ್ದನ ರೆಡ್ಡಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಗಂಗಾವತಿಯಲ್ಲಿ ಮತದಾನ ಮಾಡಿದರು.


ದ.ಕ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಮೊದಲ ಎರಡು ಗಂಟೆಗಳಲ್ಲಿ ಮತದಾನ ಪ್ರಮಾಣ:

ಬಂಟ್ವಾಳ- 11.24

ಬೆಳ್ತಂಗಡಿ- 12.01

ಮಂಗಳೂರು- 15.80

ಮಂಗಳೂರು ಉತ್ತರ- 12.32

ಮಂಗಳೂರು ದಕ್ಷಿಣ- 11.95

ಮೂಡುಬಿದ್ರೆ- 12.66

ಪುತ್ತೂರು- 13.33

ಸುಳ್ಯ- 10.76



ಉಡುಪಿ ಜಿಲ್ಲೆ ಕ್ಷೇತ್ರವಾರು ಮತದಾನ ಪ್ರಮಾಣ

ಬೈಂದೂರು- 10.81

ಕಾಪು- 13.82

ಕಾರ್ಕಳ- 14.61

ಕುಂದಾಫುರ-14.17

ಉಡುಪಿ- 13.45


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ 2 ಗಂಟೆಗಳಲ್ಲಿ ಮತದಾನ ಪ್ರಮಾಣ- ಶೇ 12.47


ಕರ್ನಾಟಕದಲ್ಲಿ ಮೊದಲ 2 ಗಂಟೆಗಳಲ್ಲಿ ಶೇ.8.26 ಮತದಾನ ನಡೆಯಿತು.


ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಕದ್ರಿ  ಕೆಪಿಟಿ ಯ ಬೂತ್ ಸಂಖ್ಯೆ  132ರಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಮತ ಚಲಾಯಿಸಲಿದ್ದಾರೆ.


ಕೆಲವೆಡೆ ಮತಯಂತ್ರ ದೋಷ

ಬೆಂಗಳೂರು ಉತ್ತರ, ಮಧ್ಯ ಮತ್ತು ಪೂರ್ವದ ಹಲವು ಕೇಂದ್ರಗಳಲ್ಲಿ ಇವಿಎಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.


ಸಿಎಂ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಮತದಾನ



ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಮತ ಚಲಾಯಿಸಿದರು. ಕ್ಷೇತ್ರದಲ್ಲಿ ಪಂಚಮಸಾಲಿ ಲಿಂಗಾಯತ ಮತ್ತು ಮುಸ್ಲಿಂ ಮತದಾರರ ಪ್ರಾಬಲ್ಯವಿದೆ; ಕಾಂಗ್ರೆಸ್ ಮತ್ತು ಎಎಪಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.


ಬೆಳಗ್ಗೆ 9 ಗಂಟೆಯ ವೇಳೆಗೆ ಉಡುಪಿ ಜಿಲ್ಲೆಯಲ್ಲಿ ಶೇ.12ರಷ್ಟು ಮತದಾನವಾಗಿದೆ.


ತುಮಕೂರಿನಲ್ಲಿ ಜಿ ಪರಮೇಶ್ವರ ಮತ ಚಲಾವಣೆ

ಕಾಂಗ್ರೆಸ್‌ ಮುಖಂಡ, ಕೊರಟಗೆರೆ ಕ್ಷೇತ್ರದ ಅಭ್ಯರ್ಥಿ ಜಿ ಪರಮೇಶ್ವರ್‌ ತುಮಕೂರಿನ ಸಿದ್ಧಾರ್ಥ ನಗರದಲ್ಲಿ ಮತ ಚಲಾಯಿಸಿದರು.


ಮೂಡಿಗೆರೆ: ಮದುಮಗಳಿಂದ ಮತದಾನ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಾಕೋನಹಳ್ಳಿಯ ಮತಗಟ್ಟೆಯಲ್ಲಿ (ಸಂಖ್ಯೆ 165) ಮದುಮಗಳು ಒಬ್ಬರು ಮತದಾನ ಮಾಡಿದರು.


ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ ಚಲಾವಣೆ 

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟತಟ್ಟು ಗ್ರಾಮ ಪಂಚಾಯತ್ ನ ಬೂತ್ ನಂಬರ್ 165 ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. 


ವೋಟ್ ಹಾಕಿದವರಿಗೆ ಉಚಿತ ಉಪಹಾರ; ಹೈಕೋರ್ಟ್ ಸಮ್ಮತಿ

ಬೆಂಗಳೂರು: ಮತದಾನ ಮಾಡಿ ಅದರ ಕುರುಹಾಗಿ ತೋರು ಬೆರಳಿನ ಇಂಕ್ ತೋರಿಸಿದವರಿಗೆ ನಗರದ ಕೆಲ ಹೊಟೆಲ್‌ಗಳಲ್ಲಿ ಮಾಡಿದ್ದ ಉಪಹಾರ ನೀಡುವ ವ್ಯವಸ್ಥೆಗೆ ಹೈಕೋರ್ಟ್‌ ಒಪ್ಪಿಗೆ ಸೂಚಿಸಿದೆ. ಈ ವಿಚಾರದಲ್ಲಿ ಬಿಬಿಎಂಪಿ ನೀಡಿದ್ದ ತಡೆ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.


ಬಿಜೆಪಿ ರಾಜ್ಯಾಧ್ಕಕ್ಷ ನಳಿನ್ ಕುಮಾರ್ ಕಟೀಲ್ ಮತದಾನ

ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರು ಆಗಿರುವ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಮತಚಲಾಯಿಸಿದರು.


ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಮತದಾನ

ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮಾಜಿ ಮುಖ್ಯ ಸಚೇತಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಅವರು ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ವೆಲೆನ್ಸಿಯಾ ಮತ ಚಲಾಯಿಸಿದರು.


ಪುತ್ತೂರಲ್ಲಿ ಮತದಾನ ಮಾಡಿದ  ಅರುಣ್‌ ಪುತ್ತಿಲ

ಬಿಜೆಪಿಯ ಭದ್ರಕೋಟೆ ಎನಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಲ್ಲಿ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದು ಪಕ್ಷೇತ್ರರಾಗಿ, ಕಾರ್ಯಕರ್ತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅರುಣ್ ಕುಮಾರ್ ಪುತ್ತಿಲ ಮತದಾನ ಆರಂಭವಾಗುತ್ತಿದ್ದಂತೆಯೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.


ಮತದಾನ ಮಾಡಿದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಶಿಕಾರಿಪುರ ತಾಲೂಕಿನ ಮತಗಟ್ಟೆ ಸಂಖ್ಯೆ 134ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿ.ವೈ.ವಿಜಯೇಂದ್ರ ಕೂಡ ಜತಗೇ ಬಂದು ಮತ ಚಲಾಯಿಸಿದ್ದಾರೆ.


ಮೈಸೂರಿನ ಚಾಮುಂಡಿಪುರಂ ಮತಗಟ್ಟೆಯಲ್ಲಿ ಮತ ಚಲಾಯಿಸಿದ 96 ವರ್ಷದ ಅಜ್ಜಿ.

ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಮತದಾನ. ಹಾಸನದ ಮತಗಟ್ಟೆ ಸಂಖ್ಯೆ 80ರಲ್ಲಿ ಮತದಾನ

ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ ಆರಂಭ.

ಮತದಾನಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಿಎಸ್‌  ಯಡಿಯೂರಪ್ಪ ಟೆಂಪಲ್ ರನ್


*****************

ಒಟ್ಟು ಮತದಾರರು- 5,31,33,054

ಪುರುಷ ಮತದಾರರು- 2,67,26,053

ಮಹಿಳಾ ಮತದಾರರು- 2,64,00,074

ತೃತೀಯ ಲಿಂಗಿಗಳು- 4,927

ಈ ಬಾರಿ ಹೊಸದಾಗಿ ಸೇರ್ಪಡೆಯಾದ ಮತದಾರರ ಸಂಖ್ಯೆ 16,04,285

ರಾಜ್ಯದಲ್ಲಿ 18ರಿಂದ 19 ವಯಸ್ಸಿನ 11,71,558 ಯುವ ಮತದಾರರಿದ್ದು, ಯುವಕರು 645140, ಯುವತಿಯರು 526237, ಇತರೆ 181 ಮತದಾರರಿದ್ದಾರೆ.

*****************

ನಗರ ಪ್ರದೇಶದ ಮತಗಟ್ಟೆಗಳು- 24,063

ಗ್ರಾಮೀಣ ಮತಗಟ್ಟೆಗಳು- 34,219

ಒಟ್ಟು 58,282

*****************

ಸೂಕ್ಷ್ಮ ಮತಗಟ್ಟೆಗಳು- 12,000

ಮಹಿಳಾ ನಿರ್ವಹಣಾ ಮತಗಟ್ಟೆಗಳು- 1,320

ಯುವಕರ ನಿರ್ವಹಣಾ ಮತಗಟ್ಟೆಗಳು- 224

*****************

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು- 2,615

ಪುರುಷ ಅಭ್ಯರ್ಥಿಗಳು - 2430

ಮಹಿಳಾ ಅಭ್ಯರ್ಥಿಗಳು - 184

ತೃತೀಯ ಲಿಂಗಿ ಅಭ್ಯರ್ಥಿ - 01

*****************

ಪಕ್ಷವಾರು ಅಭ್ಯರ್ಥಿಗಳ ಸಂಖ್ಯೆ

ಬಿಜೆಪಿ- 224

ಕಾಂಗ್ರೆಸ್- 223 (ಮೇಲುಕೋಟೆಯಲ್ಲಿ ರೈತಸಂಘಕ್ಕೆ ಬೆಂಬಲ)

ಜೆಡಿಎಸ್- 211 (ಉಳಿದ ಕಡೆ ಎಪಕ್ಷಗಳ ಜತೆ ಒಪ್ಪಂದ)


ಕಾರ್ಯಾಚರಣೆಗೆ ಸನ್ನದ್ಧವಾದ ಪೊಲೀಸ್ ಮೊಬೈಲ್ ಸೆಕ್ಟರ್- 2,930

*****************

ಚುನಾವಣೆ ದಿನಾಂಕ: ಮೇ 10, 2023, ಬುಧವಾರ

ಮತದಾನದ ಸಮಯ: ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ

ಮತಗಳ ಎಣಿಕೆ, ಫಲಿತಾಂಶ ಪ್ರಕಟಣೆ- ಮೇ 13, 2023

*****************

ವಿಶೇಷ ಚೇತನರಿಗಾಗಿ ವಿಶೇಷ ಮತಗಟ್ಟೆಗಳು

ಒಟ್ಟು ವಿಧಾನಸಭಾ ಕ್ಷೇತ್ರಗಳು- 224

ಸರಕಾರ ರಚನೆಗೆ ಬೇಕಾಗಿರುವ ಬಹುಮತದ ಸಂಖ್ಯೆ- 113

*****************


ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮನವಿ. ಟ್ವೀಟ್ ಮಾಡಿದ ನಾಯಕರು.

ಮತದಾನ ವಿವರ ತಿಳಿಯಲು ಚುನಾವಣೆ ಆಯೋಗದಿಂದ ವೋಟರ್ ಟರ್ನೌಟ್ ಆಪ್ ಬಿಡುಗಡೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top