ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಬುಧವಾರ, ಗುರವಾರ ಮತ್ತು ಶುಕ್ರವಾರ ವಾರ್ಷಿಕೋತ್ಸವ ನಡೆಯುತ್ತದೆ.
ಇಂದು ಬುಧವಾರ ಬೆಳಿಗ್ಯೆ ಗಂಟೆ ೯.೧೫ಕ್ಕೆ ತೋರಣ ಮುಹೂರ್ತ, ವಿಮಾನಶುದ್ಧಿ, ಮುಖವಸ್ತ್ರ, ಉದ್ಘಾಟನೆ, ನವಕಲಶ ಅಭಿಷೇಕ, ಸಂಜೆ ನಾಲ್ಕು ಗಂಟೆಗೆ ನಾಂದಿಮಂಗಲ ಪೂಜಾ ವಿಧಾನ ನಡೆಯುತ್ತದೆ.
ಗುರುವಾರ ವಾಸ್ತುಪೂಜಾ ವಿಧಾನ, ಜಿನ ಸಹಸ್ರನಾಮ ಪುಷ್ಪಾಚರಣೆ, ಷೋಢಶ ಕಲಶಾಭಿಷೇಕ, ನವಗ್ರಹ ಮಹಾಶಾಂತಿ ನಡೆಯುತ್ತದೆ.
ಶುಕ್ರವಾರ ಕಲಿಕುಂಡ ಆರಾಧನೆ, ಸಹಸ್ರನಾಮ ಕುಂಕುಮಾರ್ಚನೆ, ಸಂಜೆ ಗಂಟೆ ೫ ರಿಂದ ಅಗ್ರೋದಕ ಮೆರವಣಿಗೆ ಮತ್ತು ಭಗವಾನ್ ಚಂದ್ರನಾಥ ಸ್ವಾಮಿಗೆ 108 ಕಲಶಾಭಿಷೇಕ ನಡೆಯಲಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ