ಏ.4 -7: ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಜನ - ಪ್ರವಚನ - ಸಂಕೀರ್ತನ

Upayuktha
0




ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏಪ್ರಿಲ್ 4 ರಿಂದ 7ರವರೆಗೆ ಪ್ರತಿದಿನ ಸಂಜೆ (6 ರಿಂದ 8) ಧಾರ್ಮಿಕ/ ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :


ಏಪ್ರಿಲ್ 4, ಮಂಗಳವಾರ ಸಂಜೆ 6ಕ್ಕೆ: ರಾಜರಾಜೇಶ್ವರಿನಗರದ ಶ್ರೀ ಪೂರ್ಣಪ್ರಜ್ಞ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಕಲ್ಲಾಪುರ ಪವಮಾನಾಚಾರ್ ರವರಿಂದ ಧಾರ್ಮಿಕ ಪ್ರವಚನ. 


ಏಪ್ರಿಲ್ 5, ಬುಧವಾರ ಸಂಜೆ 6ಕ್ಕೆ : ಉತ್ತರಹಳ್ಳಿಯ ಶ್ರೀವಾರಿಧಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಶ್ರೀ ಕಲ್ಲಾಪುರ ಪವಮಾನಾಚಾರ್ ರವರಿಂದ ಧಾರ್ಮಿಕ ಪ್ರವಚನ.


ಏಪ್ರಿಲ್ 6, ಗುರುವಾರ ಸಂಜೆ 6-30ಕ್ಕೆ : "ಹರಿನಾಮ ಸಂಕೀರ್ತನೆ". ಗಾಯನ : ಶ್ರೀಮತಿ ಸುಷ್ಮಾ ಶ್ರೇಯಸ್, ಪಿಟೀಲು: ಶ್ರೀಮತಿ ವಾಸುಕಿ ಪರಿಮಳ, ಮೃದಂಗ:  ಮುರಳಿ ನಾರಾಯಣರಾವ್.


ಏಪ್ರಿಲ್ 7, ಶುಕ್ರವಾರ ಸಂಜೆ 6ಕ್ಕೆ: ವಿಶ್ವೇಶ್ವರಪುರದ ಶ್ರೀ ಗುರುರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಶ್ರೀ ಕಲ್ಲಾಪುರ ಪವಮಾನಾಚಾರ್ ರವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಗಳನ್ನು ಏರ್ಪಡಿಸಿದೆ ಎಂದು ಟಿಟಿಡಿ ಎಚ್ ಡಿ ಪಿ ಪಿ ಯ ಸಂಚಾಲಕರಾದ ಡಾ|| ಪಿ. ಭುಜಂಗ ರಾವ್ ಅವರು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top