ಆಡು ಮುಟ್ಟದ ಸೊಪ್ಪಿಲ್ಲ,ಅಂಬೇಡ್ಕರ್ ಮುಟ್ಟದ ಪುಸ್ತಕವಿಲ್ಲ: ಡಾ.ದಯಾನಂದ ನಾಯ್ಕ್

Upayuktha
0

ಮಂಗಳೂರು: ಅಂಬೇಡ್ಕರನ್ನು ಸಂಪೂರ್ಣವಾಗಿ ತಿಳಿದುಕೊಂಡರೆ ಅವರನ್ನು ಯಾರೂ ದ್ವೇಷಿಸಲು, ಅನುಮಾನಿಸಲು ಸಾಧ್ಯವಿಲ್ಲ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕ ಡಾ. ದಯಾನಂದ ನಾಯ್ಕ್ ಅಭಿಪ್ರಾಯಪಟ್ಟರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಆಂತರಿಕ ಗುಣಮಟ್ಟ ಮತ್ತು ಮೌಲ್ಯಾಂಕನ ಕೋಶ (ಐ.ಕ್ಯೂ.ಎ.ಸಿ), ಕಾಲೇಜು ಗ್ರಂಥಾಲಯ ವಿಭಾಗ ಹಾಗೂ ಪ್ರಕೃತಿ ವಿಜ್ಞಾನ ಮತ್ತು ನಾವೀನ್ಯತೆ ಸಂಘದ ವತಿಯಿಂದ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು, ಅಂಬೇಡ್ಕರ್ ಒಬ್ಬ ಮಹಾನ್ ಮೇಧಾವಿ. ಅವರ ಜ್ಞಾನಭಂಡಾರ ಅಪೂರ್ವವಾದದ್ದು, ಎಂದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಅನಸೂಯಾ ರೈ, ದೇಶಕ್ಕೆ ಅಂಬೇಡ್ಕರ್ ರ ಕೊಡುಗೆ ಅಪಾರ, ಎಂದರು. ಐ.ಕ್ಯೂ.ಎ.ಸಿ ಸಂಯೋಜಕ ಡಾ. ಸಿದ್ಧರಾಜು ಎಂ. ಎನ್, ಗ್ರಂಥಪಾಲಕಿ ಡಾ. ವನಜಾ, ಎನ್.ಎಸ್.ಐ ಸಂಯೋಜಕ ಡಾ. ಸಂಜಯ್ ಅಣ್ಣಾರಾವ್ ಮೊದಲಾದವರಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕಸಂಚಿಕೆ ʼಮಂಗಳಗಂಗೆʼಯನ್ನು ಲೋಕಾರ್ಪಣೆಗೊಳಿಸಲಾಯಿತು.  


ಸಭಾ ಕಾರ್ಯಕ್ರಮದ ಮೊದಲು ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತ ಪುಸ್ತಕ ಪ್ರದರ್ಶನವನ್ನು ಗ್ರಂಥಾಲಯದಲ್ಲಿ ಉದ್ಘಾಟಿಸಲಾಯಿತು. 

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top