ಬಂಟರು ಯಾವತ್ತೂ ತಮಗೆ ಇದು ಬೇಕು ಅದು ಬೇಕು ಅಂತ ಸೊಲ್ಲು ತೆಗೆದವರಲ್ಲ. ಆದರೆ ಯಾವುದೋ ಪ್ರೇರಣೆಯಿಂದ ಇತ್ತೀಚೆಗೆ ಅದೂ ಚುನಾವಣೆ ಹತ್ತಿರ ಬರುವ ಕಾಲದಲ್ಲಿ ತಮಗೊಂದು ನಿಗಮ ಬೇಕು ಮತ್ತು ಮೀಸಲಾತಿಯನ್ನು 2ಎ ವಗ೯ಕ್ಕೆ ಸೇರಿಸಲೇಬೇಕು ಅನ್ನುವ ಬಲವಾದ ಬೇಡಿಕೆಯನ್ನು ಸರ್ಕಾರ ಅಥಾ೯ತ ಬಿಜೆಪಿಯ ಮುಂದಿಟ್ಟಿದ್ದಾರೆ. ಆದರೆ ಈ ಬೇಡಿಕೆಯನ್ನು ತಕ್ಷಣವೇ ಸರ್ಕಾರ ಒಪ್ಪಬಹುದೇ ಕೇಳಿದರೆ ಖಂಡಿತವಾಗಿಯೂ ಸಾಧ್ಯವಿಲ್ಲ ಅನ್ನುವ ಪರಿಸ್ಥಿತಿ ಇಂದು ಎದ್ದು ಕಾಣುತ್ತಿದೆ. ಬಿಜೆಪಿ ಸರ್ಕಾರ ಈಗಾಗಲೇ ಜಾತಿಗಳನ್ನು ಓಲೈಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿ ಸಾಕಷ್ಟು ಸುಟ್ಟುಕೊಂಡಿದೆ. ಇದರಿಂದಾಗಿ ಬಿಜೆಪಿಗೆ ನಷ್ಟವೇ ಹೊರತು ಲಾಭವಿಲ್ಲ ಅನ್ನುವ ಪಾಠದ ಅರಿವಾಗಿದೆ.
ಆದರೆ ಸರ್ಕಾರ ಒಪ್ಪುತ್ತದೊ ಬಿಡುತ್ತದೊ ಅನ್ನುವ ಪ್ರಶ್ನೆಗಿಂತ ಬಂಟರು ಸರ್ಕಾರಕ್ಕೆ ಅರ್ಥಾತ್ ಬಿಜೆಪಿಗೆ ಹಾಕಿದ ಸವಾಲು ಮಾತ್ರ ಬಂಟರ ಪ್ರತಿಷ್ಠೆ ಗೌರವದ ಪ್ರಶ್ನೆಯಾಗಿ ಕಾಡುವುದಂತೂ ಸತ್ಯ.ಒಂದು ವೇಳೆ ಸರ್ಕಾರ ಬಂಟರ ನಾಯಕರ ಮಾತಿಗೆ ಮಣೆ ಹಾಕದೆ ಹೇೂದರೆ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಅಲುಗಾಡಿಸುವ ಶಕ್ತಿ ಬಂಟ ಸಮಾಜಕ್ಕೆ ಇದೆಯೇೂ ಇಲ್ಲವೊ ಅನ್ನುವುದು ಬಂಟರು ನಿಜವಾದ ಸತ್ವ ಪರೀಕ್ಷೆಗೆ ಒಳ ಪಡಬೇಕಾದ ಪರಿಸ್ಥಿತಿ.
ಕರಾವಳಿ ಜಿಲ್ಲೆಯ ಬಂಟರ ಒಗ್ಗಟ್ಟು ಧ್ವನಿ ಬೇರೆ ಜಾತಿಯವರಿಗೆ ಹೇೂಲಿಸಿ ನೇೂಡಿದರೆ ಸ್ವಲ್ಪ ಕಡಿಮೆ ಅನ್ನುವುದು ಮೇಲ್ನೋಟಕ್ಕೆ ಕಾಣುವ ನಿಜವಾದ ವಸ್ತು ಸ್ಥಿತಿ. ಬಂಟರಲ್ಲಿಯೇ ಒಂದು ರೀತಿಯ ಒಣಪ್ರತಿಷ್ಠೆ ಇದೆ. ಅದನ್ನು ಹೊರಗಡೆ ತೇೂರಿಸಿದರೆ ತೊಂದರೆ ಇಲ್ಲ ಆದರೆ ಜಾತಿಯ ಸಂಘಟನೆಯ ಒಳಗೆ ಬಿಂಬಿಸುವ ಜಾಯಮಾನ ಮೊದಲಿನಿಂದಲೂ ಎದ್ದು ಕಾಣುತ್ತದೆ.
ಒಂದು ವೇಳೆ ಬಂಟರ ಬೇಡಿಕೆಗೆ ಬಿಜೆಪಿ ಸೊಪ್ಪು ಹಾಕದೇ ಇದ್ದರೆ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಬಂಟ ಸಮಾಜದ ಐದು ಮಂದಿ ಶಾಸಕರುಗಳು ಮತ್ತು ಸಂಸದರು ಸಿದ್ಧರಿದ್ದಾರಾ? ಖಂಡಿತವಾಗಿಯೂ ಇವರು ಜಾತಿ ಕುಲ ಬಾಂಧವರ ಬೇಡಿಕೆ ಪೂರೈಸುವ ಸಲುವಾಗಿ ತಮಗೆ ಒಲಿದು ಬಂದ ಶಾಸಕ ಸಂಸದೀಯ ತನವನ್ನು ತ್ಯಾಗ ಮಾಡಲು ಸಿದ್ಧರಿದ್ದಾರಾ ಅನ್ನುವುದು ಬಹು ದೊಡ್ಡ ಪ್ರಶ್ನೆ. ಅಂದರೆ ಇವರಿಗೆ ಹಿಂದುತ್ವದ ಬಿಜೆಪಿಯೇ ನಮ್ಮ ಶಕ್ತಿ ಹೊರತು ತಮ್ಮ ಜಾತಿ ಅಲ್ಲ ಅನ್ನುವ ಸ್ವಷ್ಟ ಅರಿವಿದೆ. ಅದರಲ್ಲೂ ನಮ್ಮ ಕುಂದಾಪುರದ ಶಾಸಕರಂತೂ ಜಾತಿ ಪಂಥ ಮೀರಿ ಆಲೇೂಚಿಸುವ ಮೈ ಗುಣದವರು.
ಒಂದು ವೇಳೆ ಬಿಜೆಪಿಯಲ್ಲಿನ ಬಂಟ ಶಾಸಕರು ಗಳಿಗೆ ಬಂಟ ಅಭ್ಯರ್ಥಿಗಳನ್ನು ಎದುರಾಗಿ ನಿಲ್ಲಿಸಿ ತಕ್ಕ ಪಾಠ ಕಲಿಸೇೂಣವೆಂದರೆ ಬಂಟರು ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿಯ ಗರಡಿಯಲ್ಲಿ ಗುರುತಿಸಿ ಕೊಂಡು ಮುಂದಿನ ತಮ್ಮ ಸ್ಥಾನ ಮಾನದ ಲಾಭಕ್ಕಾಗಿ ಕಾದು ಕೂತವರು.ಅದೇ ಬಂಟರ ಲ್ಲಿ ಯಾವ ಪಕ್ಷಕ್ಕೂ ಜಾತಿಗೂ ಅಂಟಿಕೊಳ್ಳದವರನ್ನು ಮತವಾಗಿ ಪರಿವತಿ೯ಸುವ ಸಾಮಥ್ಯ೯ ಬಂಟರ ನಾಯಕರಿಗೆ ಇದೆಯಾ ಅನ್ನುವುದು ನಮ್ಮಮುಂದಿರುವ ಅತೀ ದೊಡ್ಡ ಪ್ರಶ್ನೆ.
ಅಂತೂ ಬಂಟರು ಸಿಂಹ ಘಜ೯ನೆ ಮಾಡಿಯಾಗಿದೆ ಅದನ್ನು ಉಳಿಸಿ ಕೊಳ್ಳುವ ಹೊಸ ತಂತ್ರಗಾರಿಕೆಯನ್ನು ರಾಜಕೀಯ ವಲಯದಲ್ಲಿ ಅತ್ಯಂತ ಚಾಣಾಕ್ಷತನದಿಂದ ನಿಭಾಯಿಸ ಬೇಕಾದ ಅನಿವಾರ್ಯತೆ ಬಂಟರ ನಾಯಕರಿಗೆ ಬಂದಿರುವುದಂತೂ ಸತ್ಯ. ಒಂದು ವೇಳೆ ಬಂಟರ ಸಿಂಹ ಘಜ೯ನೆಯ ಸವಾಲಿಗೆ ಯಾವುದೇ ಬಿಡಿಕಾಸಿನ ಗೌರವ ಸಿಗದೇ ಹೇೂದರೆ ಬಂಟರ ಧ್ವನಿಗೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬಂಟರ ಬೇಡಿಕೆಗಳಿಗೆ ಅತಿ ದೊಡ್ಡ ಹಿನ್ನಡೆ ಎಂದೇ ಪರಿಗಣಿಸ ಬೇಕಾಗುತ್ತದೆ. ಲಾಭ ಬಂದರೆ ಎಲ್ಲರಿಗೂ ಬೇಕು ಆದರೆ ಹೇೂರಾಟ ತ್ಯಾಗಕ್ಕೆ ಯಾರೂ ಸಿದ್ಧರಿಲ್ಲ ಅನ್ನುವ ಅಪಸ್ವರದ ಪಿಸು ಮಾತುಗಳೇ ಬಂಟರ ಧ್ವನಿಯಾಗುತ್ತಿರುವುದು ವಿಷಾದನೀಯ.
-ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ