ಮಾರ್ಚ್‌ 17ರಂದು ಉಳ್ಳಾಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

Upayuktha
0

ವಿವಿಧ ಗೋಷ್ಠಿ, 9 ಸಾಧಕರಿಗೆ ಸನ್ಮಾನ


ಮುಡಿಪು: ಮಾರ್ಚ್‌ 17ರಂದು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಉಳ್ಳಾಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಅನುವಾದಕಿ ಶ್ಯಾಮಲಾ ಮಾಧವ್‌ ಅವರು ವಹಿಸಲಿದ್ದು ಉದ್ಘಾಟನೆಯನ್ನು ಡಾ. ಮೋಹನ ಆಳ್ವ ಅವರು ನೆರವೇರಿಸಲಿದ್ದಾರೆ.


ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಯು ಟಿ ಖಾದರ್‌ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಯಸ್‌ ಯಡಪಡಿತ್ತಾಯ ಅವರು ಪುಸ್ತಕ ಮತ್ತು ಇತರ ಮಳಿಗೆಗಳ ಉದ್ಗಾಟನೆ ನೆರವೇರಿಸಲಿದ್ದಾರೆ. ಮಾಜಿ ಶಾಸಕರಾಗಿರುವ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಹಾಗೂ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳಿದ್ದು ʼಕರಾವಳಿ ಸಾಹಿತ್ಯದಲ್ಲಿ ಸಾಮರಸ್ಯʼ ಎಂಬ ವಿಚಾರಗೋಷ್ಠಿಯಲ್ಲಿ ಎಸ್‌ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆಯನ್ನು ವಹಿಸಲಿದ್ದು ಡಾ. ಇಸ್ಮಾಯಿಲ್‌ ಎನ್‌ ಮತ್ತು ಡಾ. ರಾಜಶ್ರೀ ಅವರು ವಿಚಾರಮಂಡನೆಯನ್ನು ಮಾಡಲಿದ್ದಾರೆ. ಬಳಿಕ ನಡೆಯಲಿರುವ 'ಪ್ರಜಾಪ್ರಭುತ್ವದ ಭವಿಷ್ಯʼ ಎಂಬ ಯುವ ಚಿಂತನಾ ಗೋಷ್ಠಿಯಲ್ಲಿ ಡಾ ಯಶು ಕುಮಾರ್.‌ ಶಬೀನಾ ಎಂ ಮುಡಿಪು, ಲತೇಶ್‌ ಬಾಕ್ರಬೈಲ್‌ ಅವರು ವಿಚಾರ ಮಂಡನೆಯನ್ನು ಮಾಡಲಿದ್ದಾರೆ.


'ಗ್ರಾಮೀಣ ಪತ್ರಿಕೋದ್ಯಮ– ಸವಾಲು ಮತ್ತು ಸಾಧ್ಯತೆಗಳುʼ ಎಂಬ ವಿಷಯದ ಮೇಲೆ ಸಂವಾದ ಗೋಷ್ಠಿಯೂ ನಡೆಯಲಿದ್ದು ಪತ್ರಕರ್ತ ವಿದ್ಯಾಧರ್‌ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಳ್ಳಾಲ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್‌ ಕೊಣಾಜೆ ಅವರು ಆಶಯ ಭಾಷಣ ಮಾಡಲಿದ್ದಾರೆ. ಶಶಿಧರ್‌ ಪೊಯತ್ತಬೈಲ್‌, ಸತೀಶ್‌ ಪುಂಡಿಕಾಯಿ, ಹಂಝ ಮಲಾರ್‌, ಸತೀಶ್‌ ಕೊಣಾಜೆ, ಅನ್ಸಾರ್‌ ಇನೋಳಿ, ಮೋಹನ್‌ ಕುತ್ತಾರ್‌, ವಜ್ರ ಗುಜರನ್‌ ಇವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರಿಂದ 'ಉಳ್ಳಾಲದ ಸದ್ದಿಲ್ಲದ ಸಾಧಕರುʼ ಎಂಬ ವಿಷಯದ ಮೇಲೆ ವಿಶೇಷೋಪನ್ಯಾಸ ಕಾರ್ಯಕ್ರಮ ನಡೆಯಲಿದೆ.


ವಿವಿಧ ಗಣ್ಯರಿಗೆ ಸನ್ಮಾನ


ಸಂಜೆ 5 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಒಂಬತ್ತು ಮಹನೀಯರಿಗೆ ಸನ್ಮಾನ ನಡೆಯಲಿದೆ. ಉದ್ಯಮ ಮತ್ತು ಗಡಿನಾಡ ಕನ್ನಡಿಗ ಕ್ಷೇತ್ರದಲ್ಲಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಸಾಹಿತ್ಯದಲ್ಲಿ ಇರಾ ನೇಮು ಪೂಜಾರಿ, ಸಮಾಜ ಸೇವೆಯಲ್ಲಿ ಇಬ್ರಾಹಿಂ ಕೋಡಿಜಾಲು, ಶಿಕ್ಷಣ ಕ್ಷೇತ್ರದಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂಶೋಧನೆಯಲ್ಲಿ ಡಾ. ಸಾಯಿಗೀತಾ, ಲಲಿತಕಲೆಯಲ್ಲಿ ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ, ಯಕ್ಷಗಾನದಲ್ಲಿ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ, ಸೋಮೇಶ್ವರ ಉಚ್ಚಿಲ, ಮಾಧ್ಯಮ ಕ್ಷೇತ್ರದಲ್ಲಿ ಪುಷ್ಪರಾಜ್‌ ಬಿ ಎನ್‌ ಮತ್ತು ಭೂತಾರಾಧನೆಗಾಗಿ ಮಾಯಿಲ ಕುತ್ತಾರ್‌ ಇವರು ಸನ್ಮಾನಗೊಳ್ಳಲಿದ್ದಾರೆ.


ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕರಾಗಿರುವ ಟಿ ಜಿ ರಾಜಾರಾಂ ಭಟ್‌ ಅವರು ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ, ಹಾವೇರಿ ಇಲ್ಲಿನ ನಿವೃತ್ತ ಕುಲಪತಿಗಳಾಗಿರುವ ಪ್ರೊ ಚಿನ್ನಪ್ಪ ಗೌಡ ಅವರು ಸಮಾರೋಪ ಭಾಷಣವನ್ನು ಮಾಡಲಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿರುವ ಪ್ರೊ. ಕಿಶೋರ್‌ ಕುಮಾರ್‌ ಸಿ ಕೆ ಮತ್ತು ಕಾರ್ಪೋರೇಟ್‌ ಅಫ್ಫೇರ್ಸ್‌ ಇನ್ಫೋಸಿಸ್‌ ಲಿ. ಬೆಂಗಳೂರು ಇದರ ಮುಖ್ಯಸ್ಥರಾಗಿರುವ ಸಂತೋಷ್‌ ಅನಂತಪುರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಸಮ್ಮೇಳನದಲ್ಲಿ ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ ಅವರ ನಾಟ್ಯನಿಕೇತನ ಕೊಲ್ಯ ಮಂಗಳೂರು, ವಿದುಷಿ ರೇಷ್ಮಾ ನಿರ್ಮಲ್‌ ಭಟ್‌ ಅವರ ನೃತ್ಯ ಲಹರಿ ನಾಟ್ಯಾಲಯ (ರಿ) ಫಜೀರು, ಕುಸುಮ ಪ್ರಶಾಂತ ಉಡುಪ ಮತ್ತು ಬಳಗ, ಮಂಜುಳಾ ಜಿ ರಾವ್‌ ಇರಾ ಇವರ ಕೊಳಲು ಸಂಗೀತ ವಿದ್ಯಾಲಯ, ಇರಾ, ದೇರಳಕಟ್ಟೆಯ ದಕ ಜಿಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಹರೇಕಳ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರಗಲಿವೆ. ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ, ಜಾನಪದ ವಸ್ತುಗಳ ಪ್ರದರ್ಶನ, ವಿವಿಧ ಮಳಿಗೆಗಳು ಹೀಗೆ ಸಾಹಿತ್ಯಾಸಕ್ತರಿಗೆ, ಸಾರ್ವಜನಿಕರಿಗೆ ಉಪಯುಕ್ತವಾಗುವ ಅನೇಕ ವಿಷಯಗಳನ್ನು ಜೋಡಿಸಿಕೊಳ್ಳಲಾಗಿದೆ ಎಂದು ತಾಲೂಕಿನ ಅಧ್ಯಕ್ಷರಾಗಿರುವ ಡಾ. ಧನಂಜಯ ಕುಂಬ್ಳೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top