ತಾಪಮಾನ ತಗ್ಗಿಸಲು ಗಿಡ ನೆಡುವುದೊಂದೇ ದಾರಿ: ಮಾಧವ ಉಳ್ಳಾಲ್

Upayuktha
0

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಪರಿಸರದ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಕಾಡು ಬರಿದಾಗಿ ಗಿಡ ಮರ ನಾಶವಾಗಿ ದೈನಂದಿನ ವಾತಾವರಣದ ಉಷ್ಣತೆ 40 ಡಿಗ್ರಿ ತಲುಪುತ್ತಿದೆ. ಇದು ಬಹಳ ಅಪಾಯಕಾರಿ ಬೆಳವಣಿಗೆ. ರಾತ್ರಿ ಚಳಿ ಇದ್ದರೂ ಹಗಲು ಹೊತ್ತು ಅಸಹನೀಯವಾದ ಸೆಖೆ ಇರುತ್ತದೆ. ಈ ರೀತಿ ವಾತಾವರಣದ ವೈಪರೀತ್ಯ ಮಾನವನ ಆರೋಗ್ಯಕ್ಕೆ ಮಾರಕ. ತಕ್ಷಣವೇ ನಾವೆಲ್ಲಾ ಎಚ್ಚೆತ್ತು ಗಿಡ ಮರ ಉಳಿಸಿ, ಬೆಳೆಸಬೇಕು. ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಗಿಡ ನೆಡುವುದೊಂದೇ ದಾರಿ ಎಂದು ಖ್ಯಾತ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರು ಅಭಿಪ್ರಾಯ ಪಟ್ಟರು.


ದ.ಕ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ನಗರದ ಮೇರಿಹಿಲ್ ನಲ್ಲಿರುವ ಗೃಹರಕ್ಷಕದಳ ಕಛೇರಿ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಮಂಗಳೂರನ್ನು ಹಣ್ಣಿನ ನಗರಿಯನ್ನಾಗಿಸುವ ನೂತನ ಅಭಿಯಾನಕ್ಕೆ ಮಾಧವ ಉಳ್ಳಾಲ್ ಅವರು ಚಾಲನೆ ನೀಡಿದರು. ನೇರಳೆ ನಕ್ಷತ್ರ ನೇರಳೆ ಮತ್ತು ಜಂಬು ನೇರಳೆ ಗಿಡಗಳನ್ನು ಕಛೇರಿಯ ಎದುರು ನೆಡಲಾಯಿತು. 


ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ|| ಮುರಲೀ ಮೋಹನ್ ಚೂಂತಾರು ಅವರು ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಮಂಗಳೂರು ನಗರದ ಚೀಫ್ ಟ್ರಾಫಿಕ್ ವಾರ್ಡನ್ ಸುರೇಶ್ ನಾಥ್, ಕಛೇರಿಯ ಅಧೀಕ್ಷಕಿ ಶ್ರೀಮತಿ ಕವಿತಾ ಕೆ.ಸಿ, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್, ಗೃಹರಕ್ಷಕಿಯರಾದ ಸುಲೋಚನಾ, ಶುಭ, ನತಾಲಿಯ, ಸೆಲೆಸ್ಟಿನ್, ಮರಿಯಾ, ಸುಮಿತ್ರಾ, ಚಂಪಾ, ಜಯಲಕ್ಷ್ಮಿ, ರಂಜನಿ, ದಿವಾಕರ್ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top