ಇಂದು ಸಮಾಜವು ಸೋಮಾರಿಗಳ ಸಮೂಹವಾಗುತ್ತಿದೆ!

Upayuktha
0

 


ತಿಯಾದರೆ ಅಮೃತವೂ ವಿಷ ಎಂಬ ನುಡಿಯಿದೆ. ಈ ಮಾತು ಎಲ್ಲರ ಜೀವನದಲ್ಲಿಯೂ ಸತ್ಯಸ್ಯ ಸತ್ಯ.

ಮಾನವನು ಮೊದಲಿನಿಂದಲೂ ತನ್ನ ಜೀವನ ಸುಗಮವಾಗಿ ಸಾಗಬೇಕು ಎಂದು ಹೊಸ ಅನ್ವೇಷಣೆಗಳನ್ನು ತಂತ್ರಗಳ ಹುಡುಕುತ್ತಾ ಬಂದಿದ್ದಾನೆ, ಆವಿಷ್ಕಾರ ಮಾಡುತ್ತಾ ಇದ್ದಾನೆ ಆದರೆ ಅದೇ ಈಗ ಒಂದು ಸಮಸ್ಯೆಯಾಗಿ ಉದ್ಭವಿಸುತ್ತಿದೆ. ಮಾನವನು ಯಾವುದೇ ಕಾರ್ಯವನ್ನು ಹೆಚ್ಚು ಪರಿಶ್ರಮವಿಲ್ಲದೆ ಮಾಡಲು ಇಚ್ಛಿಸುತ್ತಿದ್ದಾನೆ, ಮತ್ತು ಶೀಘ್ರವಾಗಿ ಮಾಡಲು ಯಂತ್ರೋಪಕರಣಗಳ ಆವಿಷ್ಕಾರವನ್ನು ಮಾಡಿದ್ದಾನೆ.


ಇದರಿಂದಾಗಿ ಕೆಲಸ ಮಾಡುವ ಕೈಗಳಲ್ಲಿ ಯಂತ್ರಗಳ ಸ್ವಿಚ್ ಕಾಣ ಸಿಗುತ್ತದೆ. ಉದಾಹರಣೆಯೊಂದಿಗೆ ಹೇಳುವುದಾದರೆ, ಅರೆಯುವ ಕಲ್ಲಿನ ಬದಲು ಗ್ರೈಂಡರ್, ಮಿಕ್ಸಿ ಮುಂತಾದ ಸಲಕರಣೆಗಳು, ಬಟ್ಟೆ ಒಗಿಯುವ ಕೈಗಳಲ್ಲಿ ವಾಷಿಂಗ್ ಮಿಷನ್ ಸ್ವಿಚ್ಚುಗಳು, ಪಾತ್ರೆ ತೊಳೆಯುವ ಕೈಗಳಲ್ಲಿ ಡಿಶ್ ವಾಷರ್ ಸ್ವಿಚ್ಚುಗಳು.


ಅಲಸ್ಯಂ ಅಮೃತಂ ವಿಷಂ ಎಂಬಂತೆ, ಆಲಸ್ಯ ಅತಿಯಾದರೆ ಮಾನವರ ಈ ಅಭ್ಯಾಸವು ಮುನ್ನೊಂದು ದಿನ ಅವರನ್ನು ಕಷ್ಟದಲ್ಲಿ ಸಿಕ್ಕಿಸುವುದಂತು ಖಂಡಿತ.


ಮಾನವನ ಮನಸ್ಥಿತಿ ಹೇಗೆ ಬದಲಾಗಿದೆ ಎಂದರೆ ಚಿಕ್ಕ ಪುಟ್ಟ ಕೆಲಸಗಳಿಗೂ ಬೇರೆ ಮಾನವರ ಮೇಲೆ ಅಥವಾ ಯಂತ್ರಗಳ ಮೇಲೆ ಅವನ ಅವಲಂಬಿತವಾಗಿದ್ದಾನೆ. ಇನ್ನು ವಿಪರ್ಯಾಸವೆಂದರೆ ತನ್ನದೇ ಮನೆಯಲ್ಲಿ ಕೆಲಸವನ್ನು ಯಂತ್ರೋಪಕರಣಗಳ ಮೂಲಕ ಮಾಡಿ ಪರಿಶ್ರಮ ಪಡದ ಹಲವಾರು ಮಂದಿ, ಗಟ್ಟಿ ಮುಟ್ಟಾಗಿರಲು ಜಿಮ್ ಮೊರೆ ಹೋಗಿದ್ದಾರೆ. ತಮಗೆ ಬೇಕಾದಂತಹ ವಸ್ತುಗಳು ತಿಂಡಿ-ತಿನಸುಗಳು ಕೂತಲ್ಲೇ ಬಂದು ತಲುಪುವ ಕಾಲ ಬಂದಿದೆ.


ಇನ್ನು ಶೈಕ್ಷಣಿಕ ವಿಚಾರಗಳಲ್ಲಂತೂ ಮಾನವನು ಇನ್ನೂ ಒಂದು ಹೆಜ್ಜೆ ಮುಂದೆ. ಮೊದಲಿನ ಕಾಲದಲ್ಲಿ ಪತ್ರಿಕೆಯನ್ನು ಓದದೆ ದಿನ ಆರಂಭವಾಗುತ್ತಿರಲಿಲ್ಲ, ಈಗ ಅದೆಲ್ಲವೂ ಮೊಬೈಲ್ ಮೂಲಕ ದೊರೆಯುತ್ತದೆ. ಆದರೆ ಇದೇ ಮಕ್ಕಳನ್ನು ಸೋಮಾರಿಗಳಾಗಿಸಿದೆ. ಮಕ್ಕಳು ತಮ್ಮ ಚಿಕ್ಕ ಪುಟ್ಟ ಕೆಲಸಗಳಿಗೆ, ಹೋಂವರ್ಗಗಳಿಗೆ, ಚಟುವಟಿಕೆಗಳಿಗೆ ಅಂತರ್ಜಾಲವನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.


ಮನುಷ್ಯನು ಬುದ್ಧಿಜೀವಿ. ಸ್ವಂತ ಬುದ್ಧಿವಂತಿಕೆ, ಆಲೋಚನೆ ಶಕ್ತಿ, ಕಲ್ಪನಾ ಶಕ್ತಿ ಎಲ್ಲವನ್ನೂ ಒಳಗೊಂಡಿದ್ದಾನೆ. ಆದರೆ ಯಂತ್ರ ಶಕ್ತಿಯ ಬಳಕೆಯಿಂದ ತನ್ನ ಇಂತಹ ಅಮೂಲ್ಯವಾದ ಆಸ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಮಾನವನ ಜೀವನದಲ್ಲಿ ಬರವಣಿಗೆ ಬೆಲೆ ಕಳೆದು ಕೊಳ್ಳುತ್ತಿದೆ.


ತಂತ್ರಜ್ಞಾನದ ಬಳಕೆಯ ನಂತರ ಜೀವನವನ್ನು ಹೇಗೆ ಕಳೆಯಬೇಕೆಂಬುದನ್ನ ನಾವು ಮರೆತಂತಿದೆ. ಇಷ್ಟೆಲ್ಲ ಬಳಕೆ ಮಾಡಿ ನಮ್ಮ ಕಾರ್ಯವನ್ನು ಸುಲಭಪಡಿಸುವ ನಾವು ಸೋಮಾರಿಗಳೆಂದರೆ ಅದರಲ್ಲಿ ಯಾವುದೇ ತಪ್ಪು ತೋರಿ ಬರೋದು. ಹಿಂದಿನ ಕಾಲದಲ್ಲಿದ್ದ ಸಂತೋಷ ಈಗಿನ ಕಾಲದಲ್ಲಿ ಕಂಡು ಬರುತ್ತಿಲ್ಲ. ಮೊದಲಿನ ಕಾಲದಲ್ಲಿ ಕುಟುಂಬಸ್ಥರನ್ನು, ಮಿತ್ರರನ್ನು ಭೇಟಿ ಮಾಡಲು ಎಷ್ಟು ದೂರವಾದರೂ ಸಂಚರಿಸಿದ ಜನರು, ಈಗ ಯಂತ್ರಗಳ ಬಳಕೆಯ ನಂತರ, ಅದು ಅತ್ಯಂತ ಕಠಿಣ ಕಾರ್ಯ ಎಂದು ಭಾವಿಸುತ್ತಾರೆ. ನೇರವಾಗಿ ಹೇಳುವುದಾದರೆ ಭೇಟಿಯಾಗುವ ಬದಲಿಗೆ ದೂರವಾಣಿ ಕರೆ, ಸಂದೇಶ ರವಾನಿಸುವುದು  ಅವರಿಗೆ ಸುಲಭವೆನಿಸುತ್ತದೆ. ಇಷ್ಟೆಲ್ಲಾ ಸೋಮಾರಿತನ ತೋರಿಸಿದ ಮೇಲೆ ಆರೋಗ್ಯದ ಸಮಸ್ಯೆ ಬರುವುದು ಖಂಡಿತ. ತನ್ನ ಕಾರ್ಯ ವೈಖರಿಯನ್ನು ಸುಲಭವಾಗಿಸಿ, ತನ್ನದೇ ಆರೋಗ್ಯವನ್ನು, ಮನಶಾಂತಿಯನ್ನು, ಸಂಬಂಧಗಳನ್ನು, ಮಾನವನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾನೆ.


ಇದು ಕೇವಲ ನಮ್ಮ ನಿಮ್ಮ ಸಮಸ್ಯೆಯಲ್ಲ, ಇಡೀ ಸಮಾಜದ ಸಮಸ್ಯೆ.ಆದ್ದರಿಂದ ಯಂತ್ರ-ತಂತ್ರಗಳ ಬಳಕೆಯನ್ನು ಇತಿಮಿತಿಯಲ್ಲಿಟ್ಟು, ನಮ್ಮ ಸೋಮಾರಿತನವನ್ನು ಹೋಗಲಾಡಿಸುವ ಪ್ರಯತ್ನವನ್ನು ಮಾಡೋಣ.

-ಸ್ವೀಡಲ್‌ ಬಳಕುಂಜೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top