ಹೊಸದಿಲ್ಲಿ: ಹೊಸದಿಲ್ಲಿಯ ಅಶೋಕ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆದ ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಆಶ್ರಯದಲ್ಲಿ ಸಂಯೋಜಿಸಲ್ಪಟ್ಟ ಅಖಿಲ ಭಾರತ ಮಟ್ಟದ ಬ್ರಾಹ್ಮಣ ಉದ್ಯಮಿಗಳ ಸಮಾವೇಶ ಬ್ರಹ್ಮೋದ್ಯೋಗವನ್ನು ಉದ್ಘಾಟಿಸಿ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಖಿಲ ಭಾರತ ಮಹಾಸಂಘದ ಅಧ್ಯಕ್ಷ ಡಾ ಗೋವಿಂದ ಕುಲಕರ್ಣಿ, ಸಂಘದ ಉದ್ಯಮ ವಿಭಾಗದ ಸಂಯೋಜಕ ಶ್ರೀಕಾಂತ್ ಬಡ್ವೆ, ಹರ್ಯಾಣದ ಅರವಿಂದ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ