ಮಂಗಳೂರು: ಆರು ವರ್ಷದ ಮಗು ನಿಶಾಂತ್ ಆತನಿಗೆ ಹುಟ್ಟಿನಿಂದಲೇ ಕಿವುಡು, ಮೂಕ ಅಂಧತೆಯ ಕಾಯಿಲೆ ಇದ್ದು ಶ್ರೀನಿವಾಸ್ ಆಸ್ಪತ್ರೆ ಮುಕ್ಕ ಮಂಗಳೂರು ಇಲ್ಲಿಯ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ತಂಡ ಅವನನ್ನು ಪರೀಕ್ಷಿಸಿ, ಆತನಿಗೆ Congenital rubella syndrome ಎಂಬ ರೋಗವಿರುವುದನ್ನು ಪತ್ತೆಹಚ್ಚಿದರು. ಹುಟ್ಟಿದಂದಿನಿಂದ ಹೃದಯದ ಕಾಯಿಲೆಗಳಾದ ಮಹಾ ಪಧಮನಿಯ ರಂಧ್ರ LCC perforation, ಉಪಕವಾಟ Subaortic membrane ಮತ್ತು ಶ್ವಾಸಕೋಶದ ಅಪಧಮನಿ ಮತ್ತು ಮಹಾ ಅಪಧಮನಿಯ ನಡುವಿನ ಜೋಡಣೆಯ Patent ductus arteriosus ರಕ್ತನಾಳದ ಇರುವಿಕೆ ಯನ್ನು ಪತ್ತೆ ಹಚ್ಚಿ ತೆರೆದ ಹೃದಯ ಚಿಕಿತ್ಸೆಯಲ್ಲಿ ಶಸ್ತ್ರ ಚಿಕಿತ್ಸೆಯಲ್ಲಿ ಕೂಲಂಕುಶವಾಗಿ ಮಾಡಿ ಅದಕ್ಕೆ ತಕ್ಕಂತೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ್ದು ಯಶಸ್ವಿಯಾಗಿದೆ. ಮಗು ಗುಣಮುಖವಾಗಿ ಮನೆ ಅತ್ತ ಹೊರಟಿದ್ದು, ಇದು ಹೃದಯಶಾಸ್ತ್ರ ಚಿಕಿತ್ಸಾ ತಂಡದ ಹೆಗ್ಗಳಿಕೆ.