ಕುಂಬಳೆ: ಯಕ್ಷಗಾನ ರಂಗದ ಅನನ್ಯ ಸಾಧಕ ದಿ| ಶ್ರೀ ಕುಂಬ್ಳೆ ಸುಂದರರಾವ್ ಇವರಿಗೆ ‘ನುಡಿನಮನ’ ಕಾರ್ಯಕ್ರಮವು ಕುಂಬಳೆ ಕೃಷ್ಣನಗರದ ಶ್ರೀ ಮೌನೇಶ ಮಂದಿರದಲ್ಲಿ ಜರಗಿತು. ಹರಿಕಥಾ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಖ್ಯಾತ ವಕೀಲ ಶ್ರೀ ಕೆ.ಮಹಾಬಲ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಕುಂಬಳೆ ಶ್ರೀಧರ ರಾವ್ ಅವರು ‘ನುಡಿನಮನ’ ನಡೆಸಿಕೊಟ್ಟರು.
ಕಲಾರತ್ನ ಶಂನಾಡಿಗ ಕುಂಬಳೆ, ಹರಿದಾಸ ಜಯಾನಂದ ಹೊಸದುರ್ಗ, ವೀಜಿ ಕಾಸರಗೋಡು, ರವೀಂದ್ರನ್.ವಿ, ಪ್ರೇಮಾವತಿ ಸತೀಶ್, ಪ್ರವೀಣ್ ಕುಮಾರ್ ಕಾಸರಗೋಡು ಮೊದಲಾದವರು ಸುಂದರ ರಾಯರ ಬಗೆಗಿನ ತಮ್ಮ ನೆನಪುಗಳನ್ನು ಹಂಚಿಕೊಂಡರು. ಸುಂದರರಾಯರ ಕುರಿತು ಕಲಾರತ್ನ ಶಂನಾಡಿಗ ಕುಂಬಳೆಯವರು ರಚಿಸಿದ ಭಾವಗಾನವನ್ನು ಕುಮಾರಿ ವೈಭವಿಯವರು ಕಾವ್ಯಾಂಜಲಿಯಾಗಿ ಸಮರ್ಪಿಸಿದರು.
ಪ್ರಮೋದ್ ಕುಮಾರ್, ಕುಂಬಳೆ ಸ್ವಾಗತವನ್ನೂ, ವೇಣುಗೋಪಾಲ್ ಶೆಟ್ಟಿ ಧನ್ಯವಾದವನ್ನೂ ನಡೆಸಿಕೊಟ್ಟರು. ಸಭಾಕಾರ್ಯಕ್ರಮದ ಬಳಿಕ ‘ಭರತಾಗಮನ” ಎಂಬ ವಿಶೇಷ ತಾಳಮದ್ದಳೆಯೂ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ವೆಂಕಟರಾಜ್ ಕುಂಟಿಕಾನ, ಶ್ರೀ ತಲ್ಪನಾಜೆ ಶಿವ ಶಂಕರ ಭಟ್, ಚೆಂಡೆ-ಲಕ್ಷ್ಮೀಶ ಬೆಂಗ್ರೋಡಿ, ಮದ್ದಳೆ- ಮುರಳೀಧರ ಶೇಡಿಕ್ಕಾವು ಮತ್ತು ಮುಮ್ಮೇಳದಲ್ಲಿ ಕುಂಬಳೆ ಶ್ರೀಧರ ರಾವ್, ಪಕಳಕುಂಜೆ ಶ್ಯಾಮ್ ಭಟ್, ವೀಜಿ ಕಾಸರಗೋಡು, ಪ್ರತಾಪ್ ಕುಂಬಳೆ ರಂಜಿಸಿದರು. ಸ್ನೇಹಲತಾ ದಿವಾಕರ್ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಆಚಾರ್ ಕೃಷ್ಣನಗರ ನಿರ್ವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ