
ಮೂಡುಬಿದಿರೆ: 2022 ದಶಂಬರ 21ರಿಂದ 27ರವರೆಗೆ ಪೂರ್ವಾಹ್ನ 9.30ರಿಂದ ರಾತ್ರಿ 9.00ರವರೆಗೆ ಜನಮನ ತಣಿಸುವ ಅಪೂರ್ವ ಕಾರ್ಯಕ್ರಮಗಳೊಂದಿಗೆ ಕಂಡು ಕೇಳರಿಯದ 5 ಬೃಹತ್ ಮೇಳಗಳು.
ಕೃಷಿಮೇಳ :
● ಎ.ಜಿ.ಕೊಡ್ಡಿ ಆವರಣದಲ್ಲಿ 12 ಎಕರೆ ವಿಸ್ತಾರದ ಪಾರಂಪರಿಕ ತರಕಾರಿ ತೋಟ.
● 100 ವಿಧ ತರಕಾರಿಗಳ ಅತ್ಯಾಕರ್ಷಕ ನೈಜ ತೋಟ.
● ದೇಶ-ವಿದೇಶಗಳ ಬಾಳೆ, ತೆಂಗು, ಧಾನ್ಯ, 530 ವಿಧ ಭತ್ತ, ವಿವಿಧ ಗೆಡ್ಡೆ ಗೆಣಸುಗಳು.
● ವಿಶಾಲ ನೈಜ ಪುಷ್ಪಾಲಂಕಾರದಿಂದ ಸುತ್ತುವರಿದ ಕೃಷಿ ಸಿರಿ ಆವರಣ.
ವಿಜ್ಞಾನ ಮೇಳ:
●ಪ್ರಾಥಮಿಕದಿಂದ ಸ್ನಾತಕೋತ್ತರದವರೆಗಿನ ವಿದ್ಯಾರ್ಥಿಗಳು ಅಗತ್ಯವಾಗಿ ನೋಡಲೇ ಬೇಕಾದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ
● ವೈಜ್ಞಾನಿಕ ಆಟಿಕೆಗಳ ಪ್ರದರ್ಶನ ಮತ್ತು ಮಾರಾಟ
● ಮತ್ಸ್ಯ ಪ್ರದರ್ಶನ, ಏರೋಪ್ಲೇನ್ ಎಕ್ಸಿಬಿಶನ್
ಪುಸ್ತಕಮೇಳ:
● ಪ್ರಾದೇಶಿಕ, ಪ್ರಾಂತೀಯ, ದೇಶೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳ ಅಸಂಖ್ಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ.
● ವಿವಿಧ ಅಕಾಡೆಮಿಗಳು, ವಿಶ್ವವಿದ್ಯಾನಿಲಯದ ಪ್ರಸರಾಂಗಗಳು ಭಾಗಿ
ಕಲಾಮೇಳ:
● ದೇಶ-ವಿದೇಶಗಳ ಪ್ರತಿಭಾನ್ವಿತ ಕಲಾವಿದರ ಸಂಗಮದ ಚಿತ್ರಕಲೆ, ಶಿಲ್ಪಕಲೆ, ವ್ಯಂಗ್ಯ ಚಿತ್ರ ಹಾಗೂ ಫೋಟೋಗ್ರಫಿ ರಚನೆ ಮತ್ತು ಪ್ರದರ್ಶನ.
ಆಹಾರ ಮೇಳ:
● ಸಾಂಪ್ರದಾಯಿಕ ಮತ್ತು ಆಧುನಿಕ ವೈವಿಧ್ಯಮಯ ಸಸ್ಯಹಾರಿ ಮತ್ತು ಮಾಂಸಾಹಾರಿ ಆಹಾರಗಳು
● ಹಣ್ಣು ಹಂಪಲುಗಳ ಪ್ರದರ್ಶನ ಮತ್ತು ಮಾರಾಟ
ಪ್ರತಿನಿತ್ಯ 5 ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು
● ಆಳ್ವಾಸ್ ನುಡಿಸಿರಿ ವೇದಿಕೆ, ಡಾ| ವಿ.ಎಸ್. ಆಚಾರ್ಯ ವೇದಿಕೆ, ಕೃಷಿಸಿರಿ ವೇದಿಕೆಗಳಲ್ಲಿ ಪೂರ್ವಾಹ್ನ 10.00 ರಿಂದ ರಾತ್ರಿ 6.00ರವರೆಗೆ ಕಾರ್ಯಕ್ರಮ.
● ಕೆ.ವಿ.ಸುಬ್ಬಣ್ಣ ವೇದಿಕೆಯಲ್ಲಿ ಸಂಜೆ 5.30ರಿಂದ ರಾತ್ರಿ 9.00ರವರೆಗೆ.
● ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಸ್ಕೌಟ್ಸ್-ಗೈಡ್ಸ್ ಪ್ರತಿನಿಧಿಗಳಿಗೆ ಮಾತ್ರವೇ ಕಾರ್ಯಕ್ರಮ ನೇರವಾಗಿ ನೋಡಲು ಅವಕಾಶ, ಉಳಿದಂತೆ ಸಂಪೂರ್ಣ ಕಾರ್ಯಕ್ರಮದ ನೇರಪ್ರಸಾರ ಇರುವುದು.
ವಿದೇಶಿ ಪ್ರತಿನಿಧಿಗಳು:
● ಮಲೇಶಿಯಾದಿಂದ 24, ದಕ್ಷಿಣ ಕೊರಿಯಾದಿಂದ 7 ಪ್ರತಿನಿಧಿಗಳು
● 800 ಜಾಂಬೂರಿ ಆ್ಯಕ್ಟಿವಿಟಿ ಲೀಡರ್ಸ್, 1000 ರೋವರ್ಸ್ ರೇಂಜರ್ಸ್ ಸ್ವಯಂಸೇವಕರು
● ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ತಮಿಳು ನಾಡು ರಾಜ್ಯಗಳಿಂದ ಹಾಗೂ ದಕ್ಷಿಣ ರೈಲ್ವೇ ಪ್ರತಿನಿಧಿಗಳು
ಹೊರೆಕಾಣಿಕೆ:
● ಮೂಲ್ಕಿ, ಕಿನ್ನಿಗೋಳಿ, ಬಜ್ಪೆ, ಬಂಟ್ವಾಳ, ಬಿಸಿರೋಡು, ಉಳ್ಳಾಲ, ಬೆಳ್ತಂಗಡಿ, ಉಡುಪಿ ಹಾಗೂ ಮಂಡ್ಯ ಭಾಗಗಳಿಂದ ಅಕ್ಕಿ, ತೆಂಗಿನಕಾಯಿ, ತರಕಾರಿಗಳು, ಸಕ್ಕರೆ ಬೆಲ್ಲ ಸೇರಿದಂತೆ ಅಗತ್ಯ ವಸ್ತುಗಳ ಬೃಹತ್ ಹೊರೆಕಾಣಿಕೆ
● ಮೂಡುಬಿದಿರೆ ವಲಯ ಮುಸ್ಲಿಂ ಸೌಹಾರ್ದ ಸಮಿತಿಯ ವತಿಯಿಂದ 20 ವಾಹನಗಳಲ್ಲಿ 5 ಲಕ್ಷ ಬೆಲೆಬಾಳುವ ಹೊರೆಕಾಣಿಕೆ, ದಫ್ ಕುಣಿತದ ಮೂಲಕ ಹೊರೆಕಾಣಿಕೆಯ ಆಗಮನ, ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕಾರ್ಯದರ್ಶಿ ಶಫಿ ಸೇರಿದಂತೆ 1000 ಜನರು ಭಾಗಿ
ಜಾಂಬೂರಿಯ ಇನ್ನಿತರ ಆಕರ್ಷಣೆಗಳು:
● 35 ಸಾಹಸಮಯ ಕ್ರೀಡೆಗಳು
● ಅರಣ್ಯ ಸಂಪತ್ತಿನ ಜಾಗೃತಿ ಮೂಡಿಸಲು ಜಂಗಲ್ ಟ್ರಯಲ್
● ಪ್ರತಿ ದಿನ ತಂಡ ತಂಡವಾಗಿ 5 ಕಿಮೀನಷ್ಟು ಸ್ವಚ್ಚತಾ ಕಾರ್ಯ (168ಕಿಮೀ ಸ್ವಚ್ಚಗೊಳಿಸುವ ಗುರಿ)
● ಕೈಮಗ್ಗ, ಖಾದಿ, ರೇಷ್ಮೆ, ಕರಕುಶಲ ವಸ್ತುಗಳು, ತಿಂಡಿತಿನಿಸುಗಳ ದೇಸಿ ಮಳಿಗೆಗಳು
● 1000ಕ್ಕೂ ಮಿಕ್ಕಿದ ವೈವಿಧ್ಯಮಯ ಮತ್ತು ದಿನವಹಿ ಅಗತ್ಯವಸ್ತುಗಳ ಮಾರಾಟ ಮಳಿಗೆಗಳು
● ಬೇರೆಲ್ಲೂ ದೊರೆಯದ, ಪ್ರತಿಯೊಬ್ಬರೂ ಕುಟುಂಬ ಸಮೇತ ಅಗತ್ಯವಾಗಿ ನೋಡಲೇಬೇಕಾದ ಜಾಂಬೂರಿ ಉತ್ಸವ.
● ಆಬಾಲ ವೃದ್ಧರಾಗಿ ಎಲ್ಲರಿಗೂ ಅಗತ್ಯದ ಮತ್ತು ಅನುಕೂಲದ ಆಕರ್ಷಕ ಸಾಂಸ್ಕೃತಿಕ ಜಾಂಬೂರಿ.
● ಮಧ್ಯಾಹ್ನ ಮತ್ತು ರಾತ್ರಿಯ ಉಚಿತ ಊಟೋಪಚಾರದ ಆತಿಥ್ಯ.
● ಶುಲ್ಕರಹಿತವಾಗಿ ಎಲ್ಲರಿಗೂ ಉಚಿತ ಮತ್ತು ಮುಕ್ತ ಪ್ರವೇಶ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ