ನಿಟ್ಟೆ: ಡಿ.20 ಮತ್ತು 21 ಕೈಗಾರಿಕಾ ಮತ್ತು ಶೈಕ್ಷಣಿಕ ಪರಿಣತರ ಸಮಾವೇಶ 2022

Upayuktha
0

ಸಮಾವೇಶದ ಕುರಿತು:


ಕೈಗಾರಿಕಾ ವಲಯದ ಪ್ರಸ್ತುತ ಅಗತ್ಯತೆಗಳ ಕುರಿತು ಬೋಧಕ ವಲಯ ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಡಿಸೆಂಬರ್ 20 ಮತ್ತು 21 ರಂದು ಎರಡು ದಿನಗಳ ಕೈಗಾರಿಕಾ ಮತ್ತು ಶೈಕ್ಷಣಿಕ ಪರಿಣತರ ಸಮಾವೇಶ-2022 ನ್ನು ಹಮ್ಮಿಕೊಂಡಿದೆ.


ಶೈಕ್ಷಣಿಕ ವಲಯ ಮತ್ತು ಕೈಗಾರಿಕಾರಂಗಗಳ ನಡುವಿನ ಸವಾಲುಗಳನ್ನು ಮತ್ತು ಅಂತರವನ್ನು ಪರಿಹರಿಸಲು ಈ ಎರಡೂ ಕ್ಷೇತ್ರಗಳ ಪರಿಣತರ ಸಂವಾದಕ್ಕೆ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ. ಇದರೊಂದಿಗೆ ಸುಸ್ಥಿರವಾದ ಸಮಾಜದ ಅಭಿವೃದ್ಧಿಗೆ ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರಗಳು ಒಂದಾಗಿ ಸಾಗಬೇಕಾದ ಅನಿವಾರ್ಯತೆಯಿದೆ ಎಂಬ ಅಂಶವನ್ನು ಈ ಸಮಾವೇಶ ಸಾರಲಿದ್ದು, ಎರಡೂ ರಂಗಗಳು ಒಂದಾದರೆ ಹೇಗೆ ಅಭಿವೃದ್ಧಿ ಸಾಧಿಸಬಹುದು ಎಂಬುವುದನ್ನೂ ಈ ಸಂವಾದ ಕಾರ್ಯಕ್ರಮದಲ್ಲಿ ಮುಕ್ತವಾಗಿ ಚರ್ಚಿಸಲಿದೆ.


ಸಂವಾದದ ಪ್ರಮುಖ ಕ್ಷೇತ್ರಗಳು


ಭಾರತ ಸರ್ಕಾರದ ನೀತಿ ಆಯೋಗ ಗುರುತಿಸಿರುವ ಆದ್ಯತೆಯ ಕ್ಷೇತ್ರಗಳಾದ

• ಸೆಮಿಕಂಡಕ್ಟರ್ ವಲಯ

• ಇಂಧನ ಕ್ಷೇತ್ರ/ ಶಕ್ತಿ ಸಂಪನ್ಮೂಲ

• ವಾಹನೋದ್ಯಮ

• ಭಾರತೀಯ ಕೈಗಾರಿಕೆಗಳು ಮತ್ತು ಡಿಜಿಟಲಿಕರಣ ಸವಾಲುಗಳು ಎಂಬ ನಾಲ್ಕು ವಿಷಯಗಳ ಕುರಿತು ಸಂವಾದವನ್ನು ಹಮ್ಮಿಕೊಳ್ಳಲಾಗಿದೆ.


ಈ ಸಮಾವೇಶದ ಆಶಯಗಳು:


• ಉದ್ಯಮ ಮತ್ತು ಶೈಕ್ಷಣಿಕ ವಲಯದ ನಡುವಿನ ಸಂಬಂಧಗಳನ್ನು ಬಲಪಡಿಸಲು ವಿಷಯ ಪರಿಣತರ ಚರ್ಚೆಗಳನ್ನು ಏರ್ಪಡಿಸುವುದು ಮತ್ತು ಸಂವಾದನಾತ್ಮಕ ಅಧಿವೇಶನಕ್ಕೆ ಅವಕಾಶ ಕಲ್ಪಿಸಲಾಗುವುದು


• ಕೈಗಾರಿಕೆ ಮತ್ತು ಶೈಕ್ಷಣಿಕ ವಲಯದಿಂದ 300 ಜನರು ಭಾಗವಹಿಸಲಿರುವರು


• ಕೈಗಾರಿಕಾ ಕ್ಷೇತ್ರ ಮತ್ತು ಶೈಕ್ಷಣಿಕ ವಲಯದ ಜಂಟಿ ಯೋಜನೆಗಳಿಗೆ ನಮ್ಮ ಶಿಕ್ಷಣ ಸಂಸ್ಥೆಯ ಸಾಮರ್ಥ್ಯವನ್ನು ಬಿಂಬಿಸುವುದು


• ಪರಸ್ಪರ ಪಾಲುದಾರಿಕೆಯ ಪ್ರಯೋಜನಗಳನ್ನು ಶಿಕ್ಷಣ ಮತ್ತು ಕೈಗಾರಿಕಾ ರಂಗ ಪಡೆದುಕೊಳ್ಳಲಾಗುವಂತಹ ಸಂವಾದಗಳನ್ನು ತಜ್ಞರ ನಡುವೆ ಏರ್ಪಡಿಸುವುದು


• ಸಂಸ್ಥೆಯ ಬೋಧಕರ ಮತ್ತು ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಪರಿಚಯಿಸಲು ವಿದ್ಯಾರ್ಥಿಗಳ ಯೋಜನೆ ಮತ್ತು ಉತ್ಪನ್ನಗಳ ಪ್ರದರ್ಶನ


IAC 2022ರ ಉದ್ದೇಶಗಳು:


• ಜ್ಞಾನ, ತಂತ್ರಜ್ಞಾನ, ಮತ್ತು ಅನುಭವಗಳ ಪರಸ್ಪರ ವಿನಿಮಯಕ್ಕೆ ಶೈಕ್ಷಣಿಕ ವಲಯ ಹಾಗೂ ಕೈಗಾರಿಕಾ ಕ್ಷೇತ್ರವನ್ನು ಮುಖಾಮುಖಿಗೊಳಿಸುವುದು


• ಕೈಗಾರಿಕೆಗಳು ಎದುರಿಸುತ್ತಿರುವ ಅನ್ವೆಷಣಾ ವೆಚ್ಚ ಮತ್ತು ಕಾರ್ಯಸಾಧ್ಯತೆಯ ಸವಾಲುಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು


• ಕೈಗಾರಿಕೆಗಳ ಅಗತ್ಯತೆ ಮತ್ತು ಶೈಕ್ಷಣಿಕ ವಲಯದ ಪರಿಣತಿಯ ನಡುವಿನ ಅಂತರವನ್ನು ಕಡಿಮೆಗೊಳಿಸುವ ಚರ್ಚೆಗಳನ್ನು ಮುನ್ನೆಲೆಗೆ ತರುವುದು


• ಕೈಗಾರಿಕಾ ವಲಯ ಹಾಗೂ ಶೈಕ್ಷಣಿಕ ವಲಯಗಳ ನಡುವಿನ ಅಂತರವನ್ನು ತಗ್ಗಿಸುವಲ್ಲಿ ಎನ್. ಎಮ್. ಎ. ಎಮ್. ಐ. ಟಿ. ಯ ಸಾಮರ್ಥ್ಯವನ್ನು ನಿರೂಪಿಸುವುದು ಹಾಗೂ ನಮ್ಮ ಸಂಸ್ಥೆಯನ್ನು ಸ್ಥಳೀಯ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಶ್ರೇಷ್ಠ ಕೇಂದ್ರವನ್ನಾಗಿಸುವ ಗುರಿಯನ್ನು ಈ ಸಮಾವೇಶವು ಹೊಂದಿದೆ.


ಉದ್ಘಾಟನಾ ಕಾರ್ಯಕ್ರಮದ ವಿವರ:


ಈ ಕಾರ್ಯಕ್ರಮವನ್ನು ಬೆಂಗಳೂರಿನ ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಡಾ.ನಾಗಹನುಮಯ್ಯ ಡಿ.20 ರಂದು ಉದ್ಘಾಟಿಸಲಿರುವರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪೊ-ವೈಸ್ ಚಾನ್ಸೆಲರ್ ಡಾ. ಎಂ.ಎಸ್.ಮೂಡಿತ್ತಾಯ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ ಎನ್.ವಿನಯ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಲಿರುವರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top