ಬದಿಯಡ್ಕ: ಇದೆ ಬರುವ ಡಿ.25ರಿಂದ ಆರಂಭಗೊಳ್ಳುವ ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತರ ಕ್ಷೇತ್ರದ ಬ್ರಹ್ಮ ಕಲೋತ್ಸವ ಪ್ರಚಾರರ್ಥ ಕಾರ್ಯಾಲಯವನ್ನು ಗುರುವಾರ ಗ್ರಾಮ ವಿಕಾಸ ಕಟ್ಟಡದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಸದಸ್ಯ ಜಯರಾಜ್ ಕುಣಿಕುಳ್ಳಯ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪುರುಷೋತ್ತಮ ಮಾಸ್ಟರ್, ಚಂದ್ರಶೇಖರ್ ಕುರುಪ್ ಮಾಸ್ಟರ್ ಉಬ್ರಂಗಳ , ಉದಯ್ ಕುಮಾರ್ ಕಲ್ಲಕಟ್ಟ, ರವಿ ಕುರುಪ್, ಚಂದ್ರ ಮಾಸ್ಟರ್ ಪಿಲಂಕಾಟ್ಟ, ವೇಣುಗೋಪಾಲ್ ಚೂರಿಕ್ಕೋಡ್, ಉದಯ ಕುಮಾರ್, ಭಾಸ್ಕರ ಕುರುಪ್, ಅಜಿತ್ ಕುಮಾರ್, ಶಶಿಧರ ಮಣಿಯಣಿ ಉಪಸ್ಥಿತರಿದ್ದರು. ಆರಂಭದಲ್ಲಿ ಪ್ರಚಾರ ಸಮಿತಿ ಪ್ರದಾನ ಸಂಚಾಲಕ ರಾಜೇಶ್ ಮಾಸ್ಟರ್ ಆಗಲ್ಪಾಡಿ ಸ್ವಾಗತಿಸಿ, ಅಧ್ಯಕ್ಷ ಗಂಗಾಧರ್ ತೆಕ್ಕೆಮೂಲೆ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق