ಸ್ವಚ್ಛತೆಯಿಂದಲೇ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಸಾಧ್ಯ : ಡಾ|| ಚೂಂತಾರು

Upayuktha
0

 


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ದಿನಾಂಕ: 04-12-2022ನೇ ಭಾನುವಾರದಂದು  ಪಣಂಬೂರು  ಘಟಕದ  ವತಿಯಿಂದ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ  ಗೃಹರಕ್ಷಕ ದಳದ ಸಮಾದೇಷ್ಟರಾದ  ಡಾ|| ಮುರಲೀಮೋಹನ್ ಚೂಂತಾರು ಅವರು ಮಾತನಾಡಿ, ನಮ್ಮ ಸುತ್ತಲಿನ ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಂಡರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಸ್ವಚ್ಛ ಸುಂದರ ಪರಿಸರದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ . ಪರಿಸರವನ್ನು ಪ್ಲಾಸ್ಟಿಕ್ ಮತ್ತು ಇತರೆ  ತ್ಯಾಜ್ಯವಸ್ತುಗಳಿಂದ  ಮಲಿನಗೊಳಿಸುವಲ್ಲಿ ಜೈವಿಕ  ಸರಪಳಿ  ಕಳಚಿಕೊಂಡು  ಪರಿಸರದಲ್ಲಿ  ಅಸಮತೋಲನ ಉಂಟಾಗಿ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಗೃಹರಕ್ಷಕರಿಗೆ ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವಲ್ಲಿ  ಹೆಚ್ಚಿನ ಸಾಮಾಜಿಕ ಹೊಣೆಗಾರಿಕೆ ಇದೆ ಎಂದು  ಅಭಿಪ್ರಾಯಪಟ್ಟರು.







ಈ ಸಂದರ್ಭದಲ್ಲಿ  ಪಣಂಬೂರು ಘಟಕದ ಹಿರಿಯ ಗೃಹರಕ್ಷಕರಾದ ಶ್ರೀ ಜಗದೀಶ್, ಪ್ರಶಾಂತ್, ರಾಕೇಶ್, ದಿನೇಶ್, ಮಹೇಶ್, ಪ್ರಕಾಶ್, ಮಂಜುನಾಥ, ಹರಿಶ್ಚಂದ್ರ, ಪ್ರತಾಪ್, ಜೆನಿಫರ್, ಬೇಬಿ ಮತ್ತು ಪ್ರೇಮ ಉಪಸ್ಥಿತರಿದ್ದರು.






Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top