ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು, ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಪ್ರಕಾಶನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಡಿ.13ರಿಂದ 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ವಿವರ ಇಂತಿದೆ:
ದಿನಾಂಕ 13ರಂದು ಮಂಗಳವಾರ ಸಂಜೆ 6 ಗಂಟೆಗೆ: ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ: ಶ್ರೀರಾಮ ವಿಠಲಾಚಾರ್ ಇವರಿಂದ ಧಾರ್ಮಿಕ ಪ್ರವಚನ.
ದಿನಾಂಕ 14ರಂದು ಬುಧವಾರ ಸಂಜೆ 6 ಗಂಟೆಗೆ ಮುತ್ಯಾಲನಗರದ ಶ್ರೀ ಗುರುರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ: ಶ್ರೀರಾಮವಿಠಲಾಚಾರ್ ಇವರಿಂದ ಧಾರ್ಮಿಕ ಪ್ರವಚನ.
ದಿನಾಂಕ 15ರಂದು ಗುರುವಾರ ಸಂಜೆ 6:30ಕ್ಕೆ: 'ಹರಿನಾಮ ಸಂಕೀರ್ತನೆ' ಗಾಯನ: ಶ್ರೀಮತಿ ಚಾಂದಿನಿ ಗರ್ತಿಕೆರೆ, ಶ್ರೀ ಮೈಸೂರು ಸಂಜೀವ್ ಕುಮಾರ್ (ಪಿಟೀಲು), ಶ್ರೀ ಮುರಳಿ ನಾರಾಯಣ ರಾವ್ (ಮೃದಂಗ).
ದಿನಾಂಕ 16ರಂದು ಶುಕ್ರವಾರ ಸಂಜೆ 6 ಗಂಟೆಗೆ: ರಾಜಾಜಿನಗರದ ರುಕ್ಮಿಣಿ ಮಹಿಳಾ ಸಂಘದ ಸದಸ್ಯರಿಂದ ಭಜನೆ, 7 ಗಂಟೆಗೆ: ಶ್ರೀ ರಾಮವಿಠಲಾಚಾರ್ ಇವರಿಂದ ಧಾರ್ಮಿಕ ಪ್ರವಚನ- ಕಾರ್ಯಕ್ರಮಗಳು ನಡೆಯಲಿವೆ.
ಈ ಎಲ್ಲ ಕಾರ್ಯಕ್ರಮಗಳು ನಡೆಯವ ಸ್ಥಳ:
ಶ್ರೀರಾಘವೇಂದ್ರ ಸ್ವಾಮಿಗಳ ಮಠ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು- 560021.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ