ಮೂಡುಬಿದಿರೆ : ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಭಾರತ್ ಸೌಟ್ಸ್-ಗೈಡ್ಸ್ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕಲಾ ಮೇಳದ ಭಾಗವಾಗಿ ಬೃಹತ್ ಗಾಳಿಪಟ ಅನಾವರಣಗೊಳಿಸಲಾಯಿತು. ಟೀಂ ಮಂಗಳೂರು ಚಿತ್ರಕಲಾವಿದ ದಿನೇಶ್ ಹೊಳ್ಳ ಇವರ ವಿನ್ಯಾಸ ಹಾಗೂ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡ 54 ಅಡಿ ಉದ್ದ 16 ಅಡಿ ಅಗಲದ ವಿಶೇಷ ಗಾಳಿಪಟ ಇದಾಗಿದ್ದು, ಜಾಂಬೂರಿಗೆ ವಿವಿಧ ಭಾಗಗಳಿಂದ ಆಗಮಿಸುವ ಐವತ್ತು ಸಾವಿರಕ್ಕೂ ಅಧಿಕ ಪ್ರಶಿಕ್ಷಾರ್ಥಿಗಳು ಹಾಗೂ ತರಬೇತುದಾರರು ಬೃಹತ್ ಗಾಳಿಪಟದ ವೀಕ್ಷಣೆ ಮಾಡಬಹುದು.
ಗಾಳಿಪಟದ ವಿಶೇಷತೆ:
• ಬೃಹತ್ ಗಾತ್ರವಷ್ಟೇ ಅಲ್ಲದೇ ಗಾಳಿಪಟದ ಪ್ರತಿ ಅಂಚಿನಲ್ಲೂ ತುಳುನಾಡಿನ ಸಂಸ್ಕೃತಿಯನ್ನು ಚಿತ್ರಿಸಲಾಗಿದೆ.
• ಭೂತಾರಾಧನೆ, ಕಂಬಳ, ಪೀಲಿವೇಷ, ನಾಗರಾಧನೆ, ಕರಾವಳಿ ಕಿನಾರೆ, ಮೀನುಗಾರಿಕೆ ಹೀಗೆ ತುಳುನಾಡಿನ ನೂರಾರು ಸಂಸ್ಕೃತಿಯನ್ನು ಚಿತ್ರಿಸಿ ಒದರನಂತರ ಇನ್ನೊಂದನ್ನು ಪೋಣಿಸಲಾಗಿದೆ. ಬಣ್ಣಗಳ ಆಯ್ಕೆ ಅಭೂತಪೂರ್ವವಾಗಿ ಒದಕ್ಕೊಂದು ಅಚ್ಚುಕಟ್ಟಾಗಿ ಹೊಂದಾಣಿಕೆ ಆಗುತ್ತಿದೆ.
• ದಿನಪ್ರತಿ ಸಹಸ್ರಾರು ಪುಣಾಣೆಗಳು ತಲೆಯೆತ್ತಿ ಬ್ರಹತ್ ಆಕಾರಾದ ಗಾಳಿಪಟವನ್ನು ಕಣ್ತುಂಬಿಕೊಳ್ಳುತ್ತಾರೆ. ನೋಡುತ್ತಲೇ ತಮಗೆ ತಿಳಿದ ಸಂಸ್ಕೃತಿ ಬಗ್ಗೆ ಅವರೇ ಗುರುತಿಸಿ ಸಂತೋಷ ಬೀರುತ್ತಾರೆ, ತಿಳಿಯದನ್ನು ಶಿಕ್ಷಕರು ತಿಳಿಸುತ್ತಾರೆ. ವೀಕ್ಷಕರಿಗೆ ಮೂಡಿದ ಅನುಮಾನ ನಿವಾರಿಸಲು, ಸೂಕ್ತ ಮಾಹಿತಿ ನೀಡಲು ಕಲಾ ಪ್ರದರ್ಶನದ ನಡೆಯುವ ಬಳಿ ಕಲಾವಿದ ದಿನೇಶ್ ಹೊಳ್ಳ ಸದಾ ಸಿದ್ಧರಾಗಿರುತ್ತಾರೆ.
• ಇತರ ಗಾಳಿಪಟದಂತೆ ಇದನ್ನು ಒಮ್ಮೆ ಹಾರಿಸಿ ಬಿಡಿವುದಲ್ಲಾ, ಕೊಡೆಬಟ್ಟೆಯಿಂದ ಇದು ನಿರ್ಮಾಣವಾಗಿದ್ದು ಅನುಸ್ಥಾಪನ ಕಲೆ ಎಂದು ಇದನ್ನು ಕರೆಯುತ್ತಾರೆ. ಕೆಲವು ವರ್ಷಗಳ ಕಾಲ ಇದನ್ನು ಪ್ರದರ್ಶಿಸಬಹುದು ಎಂದು ತಂಡದವರು ಹೇಳುತ್ತಾರೆ.
• ಟೀಂ ಮಂಗಳೂರು ಈ ಹಿಂದೆ 36 ಅಡಿ ಎತ್ತರದ ಗಾಳಿಪಟವನ್ನು ನಿರ್ಮಿಸಿ ದಾಖಲೆ ನಿರ್ಮಿಸಿದ್ದರು ಆದರೇ ಈಗ ಪುನ: ವಿಶಿಷ್ಟವಾಗಿ 50 ಅಡಿ ಗಾಳಿಪಟ ನಿರ್ಮಿಸಿ ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ. ಇದನ್ನು ನೋಡಿದ ಪ್ರತಿಯೊಬ್ಬರಿಗೂ ಆಶ್ಚರ್ಯ, ಕಲಾವಿದನ ಪರಿಕಲ್ಪನೆ ಕುರಿತು ಗೌರವ ಉಂಟಾಗುವುದು ಖಚಿತ.
• ಗಾಳಿಪಟ ಸಂಪೂರ್ಣ ಸಿದ್ದಗೊಳಿಸಲು ನೂರಾರು ಕಲಾವಿದರ ಸಮ್ಮುಖದಲ್ಲಿ ಸುಮಾರು ಎರಡು ತಿಂಗಳಿಗೂ ಅಧಿಕ ಸಮಯವನ್ನು ತಂಡದವರು ತೆಗೆದುಕೊಂಡಿರುತ್ತಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ