ಬೆಂಗಳೂರು: ಅಂಚೆ ಇಲಾಖೆಯು 2022 ರ ರಾಷ್ಟ್ರೀಯ ಅಂಚೆ ವಾರದಲ್ಲಿ 2 ವಿಶೇಷ ಕವರ್ಗಳನ್ನು ಬಿಡುಗಡೆ ಮಾಡುತ್ತಿದೆ. ಒಂದು ವಿಶೇಷ ಕವರ್ ಡಾ.ಸುಶೀಲಾ ಚೌರಾಸಿಯಾ (ಪ್ರಥಮ ಮಹಿಳೆ PMG) ಮತ್ತು ಇನ್ನೊಂದು "ಒಂದು ಜಿಲ್ಲೆ ಒಂದು ಉತ್ಪನ್ನ (ರಾಮನಗರ ತೆಂಗಿನಕಾಯಿ)" ಆಗಿದೆ.
ಬೆಂಗಳೂರಿನ ಮೇಘದೂತ್ ಆಡಿಟೋರಿಯಂನಲ್ಲಿ ಅಕ್ಟೋಬರ್ 14ರಂದು ಬೆಳಗ್ಗೆ 11ಗಂಟೆಗೆ ಸರಿಯಾಗಿ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸರ್ಕಲ್ ಇದರ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಆಗಿರುವ ಎಸ್ ರಾಜೇಂದ್ರ ಕುಮಾರ್ ಈ ಎರಡು ವಿಶೇಷ ಕವರುಗಳನ್ನು ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರು ಹೆಡ್ ಕ್ವಾರ್ಟರ್ಸ್ ನ ಪೋಸ್ಟ್ ಮಾಸ್ಟರ್ ಜನರಲ್ ಜಿತೇಂದ್ರ ಕೊಠಾರಿ ಮತ್ತು ಚನ್ನಪಟ್ಟಣದ ಕಸ್ತೂರಿ ತೆಂಗಿನಕಾಯಿ ಸಂಸ್ಕರಣೆಯ ಮಾಲಕರಾಗಿರುವ ಎಲ್ ಕೆ ಡ್ಯಾಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ