ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 29 ನೆಯ ಸರಣಿ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ ಸಿಎ ಗಿರಿಧರ ಕಾಮತ್ ಯಕ್ಷಗಾನ ಕಲೆಯು ಪುರಾಣ ಜ್ಞಾನ ನೀಡುವಷ್ಟು ಬೇರೆ ಯಾವ ಮಾಧ್ಯಮವೂ ಪೌರಾಣಿಕ ಜ್ಞಾನ ನೀಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.
100 ವರ್ಷಗಳ ಕಾಲ ಈ ಸಂಘ ಕಲಾ ಸೇವೆಯನ್ನು ನೀಡುತ್ತಾ ಬಂದಿರುವುದು ಬಹಳ ಆಶ್ಚರ್ಯ. ಶತಮಾನೋತ್ಸವದ ಸಂಧರ್ಭ ಕಲಾವಿದರ ಸಂಮಾನ, ಹಿರಿಯರ ಸಂಸ್ಮರಣೆ ಅರ್ಥಪೂರ್ಣ ಎಂದರು.
ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ ಶತಮಾನೋತ್ಸವ ಸರಣಿ ಕಾರ್ಯಕ್ರಮದಲ್ಲಿ ವೇಷಧಾರಿ, ಹಿಮ್ಮೇಳ ವಾದಕ ನಾಗೇಶ ಕುಲಶೇಖರ ಇವರನ್ನು ಸಂಮಾನಿಸಲಾಯಿತು. ತಲಕಳ, ಬಪ್ಪನಾಡು, ಪ್ರಸಕ್ತ ಹಲವು ವರ್ಷಗಳಿಂದ ಸಸಿಹಿತ್ಲು ಮೇಳದಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ನಾಗೇಶ ಕುಲಶೇಖರ ಇವರ ಅಭಿನಂದನೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಗೈದರು. ಸಂಘವನ್ನು ಪ್ರಾರಂಭದ ದಿನಗಳಲ್ಲಿ ಮುನ್ನಡೆಸಿದ ಕೀರ್ತಿಶೇಷ ದೇವಪ್ಪರನ್ನು ಸಂಸ್ಮರಿಸಲಾಯಿತು.
ಸಂಮಾನ ಪತ್ರವನ್ನು ಬಿ. ಟಿ. ಕುಲಾಲ್ ಪ್ರಸ್ತುತ ಪಡಿಸಿದರು. ಅತಿಥಿಯಾಗಿ ಆಗಮಿಸಿದ್ದ ರಮೇಶ್ ಕುಲಶೇಖರ ಹಿಂದಿನ ಹಿರಿಯರು ಕಲೆಯ ದೀಪವನ್ನು ಇಲ್ಲಿ ಹಚ್ಚಿದ್ದಾರೆ.ಆ ದೀಪ ಆರದಂತೆ ಕಾಪಾಡುವ ಕೆಲಸವನ್ನು ನಾವು ಮಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದರು.
ಕೋಶಾಧಿಕಾರಿ ಶಿವಪ್ರಸಾದ್ ಪ್ರಭು, ಉಪಾಧ್ಯಕ್ಷೆ ಶೋಭಾ ಐತಾಳ್, ನಾಗೇಶರ ಧರ್ಮಪತ್ನಿ ಸುಮಿತ್ರಾ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕುಂಭಕರ್ಣ ಕಾಳಗ ತಾಳಮದ್ದಳೆ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಜರಗಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ