ಎಲೆ ಮರೆಯ ಕಾಯಿಯಂತೆ ಬದುಕಿದ ಶಂಭಟ್ಟರು: ಸುಬ್ರಾಯ ಚೊಕ್ಕಾಡಿ

Upayuktha
0

 ಪುಸ್ತಕ ಬಿಡುಗಡೆ


ಸುಳ್ಯ: ಸುಳ್ಯ ತಾಲೂಕಿನ ತಂಟೆಪ್ಪಾಡಿ ಮನೆಯಲ್ಲಿ ಗಣೇಶ ಚೌತಿಯ ಶುಭ ದಿನದಂದು ಖ್ಯಾತ ಯಕ್ಷಗಾನ ಮದ್ದಳೆ ಕಲಾವಿದರಾದ ತಂಟೆಪ್ಪಾಡಿ ಶಂಭಟರ ನೆನಪಿನ ಗ್ರಂಥ ಬಿಡುಗಡೆ ಸಮಾರಂಭ ಜರುಗಿತು. ಈ ನೆನಪಿನ ಗ್ರಂಥವನ್ನು ಹಿರಿಯ ಸಾಹಿತಿ ಮತ್ತು ಖ್ಯಾತ ಕವಿಗಳಾದ ಶ್ರೀ ಸುಬ್ರಾಯ ಚೊಕ್ಕಾಡಿ ಇವರು ಲೋಕಾರ್ಪಣೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಲಾ ಪೋಷಕರು ಹಾಗೂ ಹವ್ಯಕ ವಿಭಾಗದ ಗುರಿಕಾರರಾಗಿರುವ ಶ್ರೀ ಮುಂಡುಗಾರು ಸುಬ್ರಮಣ್ಯ ಅವರು ವಹಿಸಿದ್ದರು.


ಪ್ರಾಸ್ತಾವಿಕವಾಗಿ ಕೃತಿಯ ಸಂಪಾದಕರಾದ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಾಮಕೃಷ್ಣ ಭಟ್ ಚೂಂತಾರು ಅವರು ಮಾತನಾಡಿದರು. ಪುಸ್ತಕದ ತಯಾರಿ ಔಚಿತ್ಯ ಮತ್ತು ಸಿದ್ಧತೆಗಳ ಬಗ್ಗೆ ತಂಟೆಪ್ಪಾಡಿ ಶಿವರಾಮ ಭಟ್ ಅವರು ತಿಳಿಸಿದರು. ಶ್ಯಾಮ ಭಟ್ ತಂಟೆಪ್ಪಾಡಿ ಸ್ವಾಗತ ಭಾಷಣ ಮಾಡಿದರು. ಶ್ರೀಮತಿ ಶ್ರೀ ದೇವಿ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀ ಪಿ. ಎಸ್ ಭಟ್ ಕಾಯರ ಅವರು ನಿರ್ವಹಿಸಿದರು.


ಡಾ|| ಮುರಲೀ ಮೋಹನ್ ಚೂಂತಾರು ಅವರ ಸಾರಥ್ಯದ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಮೂಲಕ ಈ ಪುಸ್ತಕ ಪ್ರಕಾಶನಗೊಂಡಿದೆ. ಸಮಾರಂಭದಲ್ಲಿ ಶಿವರಾಂ ಭಟ್ಟ ದಂಪತಿಗಳು ಮತ್ತು ಸೀತಾರಾಂ ಹುಟ್ಟು ದಂಪತಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಇದೇ ಸಮಯದಲ್ಲಿ ಮಾತನಾಡಿದ ಸುಬ್ರಾಯ ಚೊಕ್ಕಾಡಿಯವರು "ತಂಟೆಪ್ಪಾಡಿ ಶಂಭಟ್ಟರು ಎಲೆಮರೆಯ ಕಾಯಿಯಾಗಿ ಬಂದವರು.ಕುಶಲಕಲೆಗಳಲ್ಲಿಯೂ ಪ್ರಾವಿಣ್ಯತೆ ಪಡೆದು ಸಕಲಕಲಾ ವಲ್ಲಭರಾಗಿದ್ದರು.ನನ್ನ ತಂದೆ ಅಜ್ಜನಗದ್ದೆ ಗಣಪ್ಪಯ್ಯ ಭಾಗವತರಿಗೆ ಮದ್ದಳೆಯಲ್ಲಿ ಸಾಥಿಯಾಗಿದ್ದರು. ತಂಟೆಪ್ಪಾಡಿ ಶಂಭಟ್ಟರು ಅಸ್ತಿತ್ವವನ್ನು ಹೊಂದಿರುವ ಚೂಂತಾರು-ಕಾಯರ-ತಂಟೆಪ್ಪಾಡಿ ಮನೆತನವು ಗತ-ಇತಿಹಾಸವನ್ನು ಹೊಂದಿದೆ. ಆಧುನಿಕತೆಯತ್ತ ಹೊರಳುತ್ತಿರುವ ಈ ಜಗತ್ತಿನಲ್ಲಿ ಕುಶಲಕಲೆಗಳಲ್ಲಿ ವಿರಳತೆಯನ್ನು ಕಾಣದೇ ಹಿರಿಯರ ಮಹತ್ವವನ್ನರಿತು ತಾವೂ ಪರಂಪರಾಗತ ಚಟುವಟಿಕೆಗಳ ಒಂದಂಶವನ್ನಾದರೂ ಪಾಲಿಸಿಕೊಂಡು ಬರಬೇಕು" ಎಂಬುದಾಗಿ ಹೇಳಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter</

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top