ಎನ್‌ಎಸ್‌ಎಸ್‌ ಕೌಶಲ್ಯ ಅಭಿವೃದ್ಧಿಯ ಬುನಾದಿ: ಕೆ.ಪಿ ಸುರೇಶ್ ಪ್ರಭು

Upayuktha
0

ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್‌ ಘಟಕ ಉದ್ಘಾಟನೆ



ಉಡುಪಿ: ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವಾರ್ಷಿಕ ಚಟುವಟಿಕೆಗಳನ್ನು ದಿನಾಂಕ 12.08.2022ರಂದು ಶುಕ್ರವಾರ ಉದ್ಘಾಟಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದ ಲೈನ್ಸ್ ಮಣಿಪಾಲ ಇದರ ಅಧ್ಯಕ್ಷರಾದ ಲಯನ್ಸ್ ಕೆಪಿ ಸುರೇಶ್ ಪ್ರಭು ಮಾತನಾಡುತ್ತಾ, ಈ ದಿನಗಳಲ್ಲಿ ಉದ್ಯೋಗಕ್ಷೇತ್ರಕ್ಕೆ ಮತ್ತು ಸಮಾಜದಲ್ಲಿ ಅತ್ಯವಶ್ಯವಾದ ವಿವಿಧ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸದವಕಾಶ ಮತ್ತು ಬುನಾದಿಯನ್ನು ಎನ್ಎಸ್ಎಸ್ ಚಟುವಟಿಕೆಗಳು ಇಂದು ಒದಗಿಸುತ್ತಿವೆ ಇಂಥ ಅವಕಾಶಗಳನ್ನು ಈ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆಕೊಟ್ಟರು.


ಲಯನೆಸ್ ಸರಿತಾ ಮತ್ತು ಲಯನ್ಸ್ ಶ್ರೀ ರಮೇಶ್ ಕಿಣಿ ಅವರು ಉಪಸ್ಥಿತರಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರುದ್ರೇಗೌಡರು ವಹಿಸಿದ್ದರು.


ಕಾಲೇಜಿನ ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿಯಾದ ಶ್ರೀಮತಿ ಗಿರಿಜಾ ಹೆಗಡೆ ಗಾಂವ್ಕಾರ್‌ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಘಟಕದ ವಿದ್ಯಾರ್ಥಿ ನಾಯಕಿ ಕುಮಾರಿ ಪೃಥ್ವಿ ಖಾರ್ವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಸುಧಾ ಹೆಗಡೆ ಸ್ವಾಗತಿಸಿ, ಶ್ರೀ ದಯಾನಂದ ವಂದಿಸಿದರು. ಶ್ರೀ ಪ್ರಕಾಶ್ ಶೆಟ್ಟಿ ಪ್ರತಿಜ್ಞಾವಿಧಿಯನ್ನು ಬೋಧಿಸಿ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top