ಪುತ್ತೂರು: ಕೇಂದ್ರ ಸರಕಾರದ "ಮಿನಿಸ್ಟ್ರಿ ಆಫ್ ಆಯುಷ್" ವತಿಯಿಂದ, ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ ಪ್ರಾಯೋಜಿತ ಆಯುರ್ವೇದ ಶೈಕ್ಷಣಿಕ ಕಾರ್ಯಾಗಾರ ಮಧ್ಯಪ್ರದೇಶದ ಭೋಪಾಲ್ನಲ್ಲಿರುವ ಪಂಡಿತ್ ಖುಷಿಲಾಲ್ ಶರ್ಮ ಸರಕಾರಿ ಆಯುರ್ವೇದಿಕ್ ಕಾಲೇಜ್ ನಲ್ಲಿ ಆಗಸ್ಟ್ 22 ರಿಂದ 28 ರವರೆಗೆ ನಡೆಯಲಿದೆ.
ಆಯುರ್ವೇದದ ಶಾಲಾಕ್ಯ ವಿಭಾಗದ ಶೋಧನೆ ಕುರಿತಾದ ವಿಚಾರ ವಿನಿಮಯಗಳು ಈ ಕಾರ್ಯಕ್ರಮದಲ್ಲಿ ನಡೆಯಲಿದ್ದು ಇದರಲ್ಲಿ ಭಾಗವಹಿಸುವುದಕ್ಕೆ ಪುತ್ತೂರಿನ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಶಾಲಾಕ್ಯ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರನ್ನು ಮೂಗಿನ ಪಾಲಿಪ್ ತೊಂದರೆಯನ್ನು ಶಸ್ತ್ರಚಿಕಿತ್ಸೆ ರಹಿತವಾಗಿ ಮತ್ತು ಮರುಕಳಿಸುವ ಬಾಯಿ ಹುಣ್ಣಿಗೆ ಯಶಸ್ವಿ ಆಯುರ್ವೇದ ಚಿಕಿತ್ಸೆ ನೀಡುವ ಇವರ ಪರಿಣತಿ, ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ